ಮುಂಬಯಿ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಅರ್ಧ ರಾತ್ರೀಲಿ ಕೊಡೆ ಹಿಡಿದ ಎಂಬ ಮಾತು ಅಕ್ಷರಶಃ ನಿಜ. ಅದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತಿ ಹೆಚ್ಚು ಹಣ ಸಂಪಾದಿಸಿದ (5 ಕೋಟಿ) ಸುಶೀಲ್ ಕುಮಾರ್ ಎಂಬಾತ ಚಟದಾಸನಾಗಿ ಅಕ್ಷರಶಃ ಪಾಪರ್ ಆದ ಕಥೆ ಇಲ್ಲಿದೆ. ಕುಶಾಗ್ರಮತಿ ಸುಶೀಲ್ ಕೆಬಿಸಿಯ ಐದನೇ ಕಂತಿನಲ್ಲಿ ಐದು ಕೋಟಿ ರೂ. ಗೆದ್ದಾಗ ಇಡೀ ದೇಶವೇ ಈತನ ಬುದ್ಧಿಮತ್ತೆ ಯನ್ನು ಕೊಂಡಾಡಿತ್ತು.
ಆವೆಗೆ ಮತ್ತು ಅಂದಿನಿಂದ ಈವರೆಗೆ ಯಾರೂ ಗೆದ್ದಲ್ಲಿದಷ್ಟು ಹಣ ಗೆದ್ದುಕೊಂಡ ಸುಶೀಲ್ ಕೈಯಲ್ಲಿ ಮಾತ್ರ ಆ ಹಣ ಉಳಿಯ ಲಿಲ್ಲ. ಇದಕ್ಕೆೆ ಕಾರಣ ನೂರಾರು. ಮುಖ್ಯವಾಗಿ ಲೋಲುಪತೆಗೆ ಮರುಳಾಗಿ ಸುಶೀಲ್ ಇದ್ದ ಹಣವನ್ನೆಲ್ಲ ಕಳೆದುಕೊಂಡ. ಸ್ನೇಹಿತರಂತೆ ಪೋಸು ಕೊಟ್ಟವರ ಮಾತು ಕೇಳಿ ಬಂದ ಹಣವನ್ನು ಎಲ್ಲೆಂದರಲ್ಲಿ ಹೂಡಿಕೆ ಮಾಡಿ ಸಾಕಷ್ಟು ಕೈಸುಟ್ಟುಕೊಂಡ. ಬುದ್ಧಿ ಹೇಳಲು ಬಂದ ಹೆಂಡತಿಯ ಮಾತು ಲೆಕ್ಕಿಸದೇ ಜಗಳ ವಾಡಿಕೊಂಡು ಕೊನೆಗೆ ವಿಚ್ಛೇದನದವರೆಗೆ ನಡೆದ.
ಇದೇ ವೇಳೆ ಕುಡಿತ ಮತ್ತು ಸಿಗರೇ ಟಿನ ದಾಸನಾಗಿ ಹಣವನ್ನು ನೀರಿನಂತೆ ಬಾರು ಪಬ್ಬುಗಳಲ್ಲಿ ಚೆಲ್ಲಾಡಿದ. ಇಷ್ಟೂ ಸಾಲದು ಎಂಬಂತೆ ಉಳಿದಿದ್ದ ಅಲ್ಪಸ್ವಲ್ಪ ಹಣವನ್ನು ತೆಗೆದುಕೊಂಡು ಮುಂಬಯಿ ತಲುಪಿ ಚಿತ್ರ ತಯಾರಿಸುವ ಹುಚ್ಚಿಗೆ ಬಿದ್ದು ಅದನ್ನೂ ಕಳೆದುಕೊಂಡ ಸುಶೀಲ್ ಕೈಖಾಲಿ ಮಾಡಿಕೊಂಡು ಪಾರ್ಪ ಎನಿಸಿ ಕೊಂಡ. ಇಷ್ಟೆಲ್ಲ ಆಗುವ ವೇಳೆಗ ಆತನಿಗೆ ಜ್ಞಾನೋದಯವಾಗಿ ಎಲ್ಲವನ್ನೂ ಬಿಟ್ಟು ಪಾಠ ಹೇಳುವ ಮಾಸ್ತರಿಕೆ ಮಾಡುವ ಮೂಲಕ ಸುಶೀಲ್ ಈಗ ಚೇತರಿಕೆಯ ಹಾದಿ ಯಲ್ಲಿದ್ದಾರೆ.