Saturday, 27th April 2024

ರಾಜಕೀಯ ಜೀವನಕ್ಕೆ ಮರಳುವುದಿಲ್ಲ: ತಲೈವಾ ಸ್ಪಷ್ಟನೆ

ಚೆನ್ನೈ: ಅನಾರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಾವು ರಾಜಕೀಯ ಜೀವನಕ್ಕೆ ಮರಳುವುದಿಲ್ಲ ಎಂದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರಜಿನಿಕಾಂತ್​ ಸ್ಥಾಪಿತ ಮಕ್ಕಳ್​ ಮಂಡ್ರಮ್​ ಪಕ್ಷವನ್ನ ರಜನಿಕಾಂತ್​ ವಿಸರ್ಜನೆ ಮಾಡಿದ್ದಾರೆ. ಈ ಪಕ್ಷವು ಫ್ಯಾನ್ಸ್​ ಕ್ಲಬ್​ ಆಗಿ ಮುಂದುವರಿಯಲಿದೆ. ಮತ್ತೆ ರಾಜಕೀಯಕ್ಕೆ ಪ್ರವೇಶ ಮಾಡಲ್ಲ ಎಂದು ತಲೈವಾ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ ಮೂರನೇ ತಾರೀಖಿನಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2021 ಜನವರಿಯಲ್ಲಿ ತಮ್ಮ ಪಕ್ಷವನ್ನ ಆರಂಭಿಸುವು ದಾಗಿ ಹೇಳಿಕೆ ನೀಡಿದ್ದರು. ರಜನಿಕಾಂತ್​​ರ ಈ ಹೇಳಿಕೆ ಬಳಿಕ ಮಕ್ಕಳ್​ ಮಂಡ್ರಂ ಪಕ್ಷದ ಅನೇಕರು ಡಿಎಂಕೆ ಸೇರಿದಂತೆ ವಿವಿಧ ಪಕ್ಷಕ್ಕೆ ಸೇರಿದ್ದರು.

Leave a Reply

Your email address will not be published. Required fields are marked *

error: Content is protected !!