Saturday, 28th September 2024

ರಂಗಕರ್ಮಿ ಪ್ರಸನ್ನ ಕಾವು!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಸನ್ನ ಅವರನ್ನು ಭೇಟಿ ಮಾಡಿ, ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.

ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರೋಗ್ಯ ವಿಚಾರಿಸಲು ದೇವೇಗೌಡ-ಸಿದ್ದು ಆಗಮನ

ದೇಶದಲ್ಲಿ ಪವಿತ್ರ ಆರ್ಥಿಕತೆ ಜಾರಿಯಾಗಬೇಕು ಎಂದು ಒತ್ತಾಾಯಿಸಿ ರಂಗಕರ್ಮಿ ಪ್ರಸನ್ನ ಅವರು ಅಮರಣಾಂತ ಸತ್ಯಾಾಗ್ರಹ ನಡೆಸುತ್ತಿಿದ್ದು, ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ದೇಶದಲ್ಲಿ ಪವಿತ್ರ ಆರ್ಥಿಕತೆ ಜಾರಿಗೆ ತರಬೇಕು ಎಂದು ಒತ್ತಾಾಯಿಸಿ ರಂಗಕರ್ಮಿ ಪ್ರಸನ್ನ ಅವರು ಗಾಂಧಿ ಭವನದಲ್ಲಿ ಅಮರಣಾಂತ ಉಪವಾಸ ಸತ್ಯಾಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಕ್ಕರೆ ಅಂಶ ಕಡಿಮೆಯಾಗಿದೆ. ರಕ್ತದೊತ್ತಡ ಏರಿಳಿತವಾಗುತ್ತಿದೆ. ತಕ್ಷಣವೇ ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿದ್ದಾಾರೆ ಎಂದು ತಿಳಿದುಬಂದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಗಾಂಧಿ ಭವನಕ್ಕೆೆ ಪ್ರಸನ್ನ ಅವರನ್ನು ಭೇಟಿ ಮಾಡಿ, ಸತ್ಯಾಾಗ್ರಹ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ನಾವು ಕೂಡ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಆರೋಗ್ಯ ಹದಗೆಟ್ಟಿದೆ, ಸತ್ಯಾಾಗ್ರಹ ಕೈಬಿಡಿ ಎಂದು ಇಬ್ಬರೂ ನಾಯಕರು ಪ್ರಸನ್ನ ಅವರ ಮನವೊಲಿಸಿದರು.

ಸಮ್ಮಿಿಶ್ರ ಸರಕಾರ ಪತನವಾದ ನಂತರ ಪರಸ್ಪರ ಆರೋಪ-ಪ್ರತ್ಯಾಾರೋಪ ಮಾಡುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖಾಮುಖಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಅವರು ಹೋರಾಟ ನಡೆಸುತ್ತಿಿದ್ದರೂ ಸರಕಾರ ಇತ್ತ ಗಮನಹರಿಸದೆ ಇರುವುದು ವಿಷಾದನೀಯ. ಇಂತಹ ಆಡಳಿತಕ್ಕೆೆ ಏನೆಂದು ಹೇಳಬೇಕು? ನಾವು ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ. ಪ್ರಸನ್ನ ಮನವೊಲಿಸಲು ಯತ್ನಿಿಸಿದ್ದೇವೆ ಎಂದರು.

ಮೊದಲಿನಷ್ಟು ಆತ್ಮೀಯತೆ ಕಾಣಲಿಲ್ಲ
ಆರಂಭದಲ್ಲಿ ಏಕಕಾಲಕ್ಕೆೆ ಆಗಮಿಸಿದ ಇಬ್ಬರು ನಾಯಕರು ಪರಸ್ಪರ ನಮಸ್ಕಾಾರ ಮಾಡಿಕೊಂಡರು. ಅದರಲ್ಲಿ ಮೊದಲಿನಷ್ಟು ಆತ್ಮೀಯತೆ ಕಂಡುಬರಲಿಲ್ಲ. ಔಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡಂತಿತ್ತು. ಸಮ್ಮಿಿಶ್ರ ಸರಕಾರ ಅಸ್ತಿಿತ್ವದಲ್ಲಿದ್ದಾಗ ತಮ್ಮೆೆಲ್ಲ ಕಹಿ ಘಟನೆ ಮರೆತು ಎಂಬಂತೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಜತೆಯಾಗಿ ಪ್ರಚಾರ ನಡೆಸಿದರು, ಬಿಜೆಪಿ ವಿರುದ್ಧ ವಾಗ್ದಾಾಳಿ ನಡೆಸಿದರು, ಸಮ್ಮಿಿಶ್ರ ಸರಕಾರ ಪತನವಾದ ಸ್ವಲ್ಪ ದಿನದಲ್ಲೇ ಈ ಇಬ್ಬರು ಮತ್ತೇ ಎದುರಾಳಿಗಳಂತೆ ಪರಸ್ಪರ ಟೀಕೆ ಮಾಡಿಕೊಂಡಿದ್ದರು. ಬಹಳ ದಿನಗಳ ನಂತರ ಒಟ್ಟಿಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.