Thursday, 19th September 2024

ಸೀಟು ಹಂಚಿಕೆ ಮಾತುಕತೆ ಅಂತಿಮ: ಟಿಡಿಪಿ ಎನ್‌ಡಿಎಗೆ ಮರಳಲು ಸಿದ್ಧ

ಹೈದರಾಬಾದ್: ವಿಧಾನಸಭೆ ಮತ್ತು ಲೋಕಸಭೆ ಸೀಟು ಹಂಚಿಕೆ ಮಾತುಕತೆಗಳು ಹೆಚ್ಚು ಕಡಿಮೆ ಅಂತಿಮಗೊಂಡಿದ್ದು ಟಿಡಿಪಿ ಮುಂದಿನ ವಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲು ಸಿದ್ಧವಾಗಿದೆ.

ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನವದೆಹಲಿ ಯಲ್ಲಿ ಮಾತುಕತೆ ನಡೆಸಿದ ಸುಮಾರು 10 ದಿನಗಳ ನಂತರ ಈ ಬೆಳವಣಿಗೆಯಾಗಿದೆ.

ಫೆ.20 ಅಥವಾ 21 ರಂದು ಮೈತ್ರಿ ಸಂಬಂಧ ಘೋಷಣೆ ಮಾಡಲಾಗುವುದು. ಟಿಡಿಪಿ ಮತ್ತು ಬಿಜೆಪಿ ನಡುವೆ ಯಾವುದೇ ಕೆಟ್ಟ ರಕ್ತವಿಲ್ಲ. 2019 ರ ಚುನಾ ವಣೆಗೆ ಮುಂಚಿತವಾಗಿ ಎನ್‌ಡಿಎಯಿಂದ ಹೊರಬರಲು ಕಾರಣವಾದ ಸಂದರ್ಭಗಳನ್ನು ನಾಯ್ಡು ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿಯ ಭಾಗವಾಗಿ, ಟಿಡಿಪಿ 30 ವಿಧಾನಸಭೆ ಮತ್ತು 10 ಲೋಕಸಭೆ ಸ್ಥಾನಗಳನ್ನು ಬಿಜೆಪಿ-ಜನಸೇನೆಗೆ ಬಿಟ್ಟುಕೊಡಬಹುದು. 30 ಅಸೆಂಬ್ಲಿ ಸ್ಥಾನ ಗಳಲ್ಲಿ, ಬಿಜೆಪಿ 5-10 ರಲ್ಲಿ ಸ್ಪರ್ಧಿಸಬಹುದು ಮತ್ತು ಉಳಿದವುಗಳನ್ನು ಪವನ್ ಕಲ್ಯಾಣ್ ಅವರ ಜನಸೇನೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಸ ಲಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಸ್ಥಾನಗಳನ್ನು ಜನಸೇನೆಗೆ ಬಿಟ್ಟುಕೊಡಲಿದೆ.

ಫೆ.17 ರಿಂದ 18 ರವರೆಗೆ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಸಮಾವೇಶದ ನಂತರ ಮೈತ್ರಿಯ ಔಪಚಾರಿಕ ಘೋಷಣೆ ಹೊರಬೀಳಲಿದೆ. ನಾಯ್ಡು ಅವರು ಅಮಿತ್ ಶಾ ಅವರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೈತ್ರಿ ವಿಷಯದ ಬಗ್ಗೆ ಚರ್ಚಿಸಲು ಟಿಡಿಪಿಯ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಗೃಹ ಸಚಿಲ ಅಮಿತ್ ಶಾ ಅವರೊಂದಿಗೆ ಹಿರಿಯ ನಾಯಕರ ಮಾತುಕತೆಯ ನಂತರ ನಾಯ್ಡು ಅವರಿಗೆ ದೆಹಲಿಗೆ ಬರುವಂತೆ ಕರೆ ಬಂದಿತ್ತು.

Leave a Reply

Your email address will not be published. Required fields are marked *