Friday, 18th October 2024

BBK 11: ಬಿಗ್ ಬಾಸ್ ಮನೇಲಿ ಗುಟ್ಟಾಗಿ ನಡೀತಿದೆ ಮತ್ತೊಂದು ಲವ್ ಸ್ಟೋರಿ: ಯಾರ ಮಧ್ಯೆ ನೋಡಿ

Bhavya Trivkiram

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎರಡು ವಾರ ಪೂರ್ಣಗೊಂಡಿದೆ. ಅಸಲಿ ಆಟ ಒಂದೊಂದಾಗಿ ಶುರುವಾಗುತ್ತಿದೆ. ಸ್ಪರ್ಧಿಗಳು ಓಪನ್-ಅಪ್ ಆಗುತ್ತಿದ್ದಾರೆ. ಪ್ರಾಮಾಣಿಕರಾಗಿರಿ ಎಂಬ ಕಿಚ್ಚನ ಪಾಠ ಈ ವಾರ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಎಂಬುದು ನೋಡಬೇಕಿದೆ. ಈ ವಾರ ದೊಡ್ಮನೆಯಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದ್ದು ಬಿಗ್ ಬಾಸ್ ಇದರ ಮೂಲಕವೇ ಮಾತನಾಡುತ್ತಿದ್ದಾರೆ.

ಕಾಲ ಕಾಲಕ್ಕೆ ಬಿಗ್ ಬಾಸ್ ಫೋನ್ ಮಾಡುತ್ತಾರೆ. ಹಾಗೆಯೆ ನಿನ್ನೆ ದಿಢೀರ್ ಆಗಿ ಬಿಗ್ ಬಾಸ್ ಬದಲು ತುಕಾಲಿ ಸಂತೋಷ್ ಕರೆ ಕರೆ ಮಾಡಿದ್ದಾರೆ. ತುಕಾಲಿ ಸಂತೋಷ್ ಅವರು ಕರೆ ಮಾಡುತ್ತಿದ್ದಂತೆ ಭವ್ಯಾ ಅವರು ಹೋಗಿ ಕರೆ ಸ್ವೀಕರಿಸಿದರು. ‘ಹೆಲೋ, ಚಿನ್ನಿ ಯಾಕ್ ಚಿನ್ನಿ? ಐ ಲವ್​ ಯೂ. ನೀನಿಲ್ಲದೆ ಇರೋಕೆ ಆಗ್ತಿಲ್ಲ’ ಎಂದರು ತುಕಾಲಿ ಸಂತೋಷ್. ಫೋನ್​ನಲ್ಲಿ ಮಾತನಾಡುತ್ತಿರುವುದು ಯಾರು ಎಂಬುದನ್ನು ಕಂಡುಹಿಡಿಯೋಕೆ ಭವ್ಯಾಗೆ ಸಾಧ್ಯವೇ ಆಗಲಿಲ್ಲ.

ಆ ಬಳಿಕ ಕರೆಯಲ್ಲಿರೋದು ತುಕಾಲಿ ಸಂತೋಷ್ ಎಂದು ಭವ್ಯಾಗೆ ಗೊತ್ತಾಗಿದೆ. ನಂತರ ಮಾನಸಾ ಅವರು ಸಂತು ಜೊತೆ ಮಾತನಾಡಿದ್ದಾರೆ. ಈ ಸಂದರ್ಭ ಮಾನಸಾ ಅವರು ಮನೆಯ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ತುಕಾಲಿ ಸಂತೋಷ್ ಜೊತೆಗೆ ಮಾತನಾಡುತ್ತಾ ಮಾನಸಾ, ತ್ರೀವಿಕ್ರಂ ಭವ್ಯಾ ಗೌಡಳನ್ನು ಲವ್​ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್ ಆಗಿ ಲವ್​ ಮಾಡ್ತಾ ಇದ್ದಾರಂತೆ. ಅವರ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಎಂದು ಫೋನ್​ನಲ್ಲಿ ಹೇಳಿದ್ದಾರೆ.

ಈ ವಿಚಾರ ಸದ್ಯ ಮನೆಯ ಹೊರಗಡೆ ಸಖತ್ ಸೌಂಡ್ ಮಾಡುತ್ತಿದೆ. ಧರ್ಮ ಕೀರ್ತಿರಾಜ್-ಐಶ್ವರ್ಯ ಮತ್ತು ಅನುಷಾ ನಡುವಣ ತ್ರಿಕೋನ ಪ್ರೇಮ ಕಥೆ ಎಲ್ಲರಿಗೂ ತಿಳಿದಿತ್ತು. ಆದರೆ, ಇದು ಯಾವಾಗ ನಡೆಯಿತು ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆ ಆಗುತ್ತಿದೆ.

ಧನರಾಜ್-ಅನುಷಾ ನಾಮಿನೇಟ್:

ಬಿಗ್ ಬಾಸ್ ಮನೆಯ ಮೂರನೇ ವಾರದ ಎರಡನೇ ನಾಮಿನೇಷನ್ ಆಗಿದೆ. ಸೋಮವಾರ ಶಿಶಿರ್ ಅವರು ನೇರವಾಗಿ ಅನುಷಾ ಅವರನ್ನು ಈ ವಾರ ಮನೆಯಿಂದ ಹೊರಹೋಗಲು ಆಯ್ಕೆ ಮಾಡಿದ್ದರು. ಇದು ಮನೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಇಂದು ಶಿಶಿರ್ ಅವರು ನೇರವಾಗಿ ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಶಿಶಿರ್​ ಕೊಟ್ಟ ಕಾರಣ ಕೇಳಿ ಧನರಾಜ್ ಆಚಾರ್ ಕಣ್ಣೀರು ಹಾಕಿದ್ದಾರೆ.

BBK 11: ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದುರು ಬಂದು ಕೇಸ್ ಬಗ್ಗೆ ಮಾತಾಡಲಿ: ಜಗದೀಶ್ ಎದುರು ಚೈತ್ರಾ ಕುಂದಾಪುರ ರೌದ್ರಾವತಾರ