Wednesday, 23rd October 2024

BBK 11: ಬಿಗ್ ಬಾಸ್​ನಲ್ಲಿ ಹನುಮಂತನಿಗೆ ಅಗ್ನಿಪರೀಕ್ಷೆ: ನಾಮಿನೇಟ್ ಮಾಡಿದ ಇಬ್ಬರು ಸದಸ್ಯರು ಯಾರು?

Hanumantha

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.

ಆದರೀಗ ಹನುಮಂತನಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಬಿಗ್ ಬಾಸ್ ಇವರನ್ನು ಕನ್ಫೆಷನ್ ರೂಮ್​ಗೆ ಕರೆದಿದ್ದು, ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡುವಂತೆ ಆದೇಶ ನೀಡಿದ್ದಾರೆ. ಆದರೆ, ಹನುಮಂತ ಮಾತ್ರ ನಾಮಿನೇಟ್ ಮಾಡುವುದಕ್ಕೆ ಕಷ್ಟಪಟ್ಟಿದ್ದಾರೆ. “ಎಲ್ಲರೂ ನನ್ನ ಜೊತೆಗೆ ಚೆನ್ನಾಗಿ ಇದ್ದಾರೆ. ಎಲ್ಲರೂ ಉತ್ತಮವಾಗಿ ಆಟ ಆಡುತ್ತಿದ್ದಾರೆ. ನಾನು ಯಾರನ್ನೂ ನಾಮಿನೇಟ್ ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಹನುಮಂತ ಅವರು ಹಂಸ ಹೆಸರು ಹೇಳಿದ್ದಾರೆ. ಆದರೆ, ಇನ್ನೊಂದು ಆಯ್ಕೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ತಿಳಿಯದೆ ತಮ್ಮ ಹೆಸರನ್ನೇ ಹೇಳಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ ತಮ್ಮ ಹೆಸರನ್ನು ತಾವೇ ನಾಮಿನೇಟ್ ಮಾಡುವಂತಿಲ್ಲ. ಹೀಗಾಗಿ ಗೋಲ್ಡ್ ಸುರೇಶ್ ಹೆಚ್ಚು ನಿದ್ದೆ ಮಾಡುತ್ತಾರೆ ಎಂಬ ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಹನುಮಂತ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದಾಗ ಈತ ಈ ಕಾರ್ಯಕ್ರಮಕ್ಕೆ ಸೂಕ್ತ ಅಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಂದ ಮೂರೇ ದಿನಕ್ಕೆ ಇವರ ನಡುವಳಿಕೆ ಮಾತುಗಾರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇವರ ಒಳ್ಳೆಯತನ, ಮುಗ್ಧತೆಗೆ ಮನಸೋತಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.

ಸಿಂಗರ್ ಹನುಮಂತನ ಆಗಮನದಿಂದ ಇಡೀ ಮನೆಯಲ್ಲಿ ನಗುವಿನ ಹೊನಲು ಹರೆಯುತ್ತಿದೆ. ಹಂಸ ಹಾಗೂ ಐಶ್ವರ್ಯ ಅಂತೂ ಹನುಮಂತನ ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ. ಮನೆಯ ಇತರ ಸದಸ್ಯರು ನಕ್ಕು ನಲಿಯುತ್ತಿದ್ದಾರೆ. ಧನರಾಜ್ ಜೊತೆಗೆ ಹನಮಂತ ತುಂಬಾನೆ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸಖತ್ ಆಗಿ ಕಾಣುತ್ತಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮರೆಯಾದ ಮನುಷ್ಯತ್ವ: ಅನುಷಾಗೆ ಹೀಗಾ ಹೊಡೆಯೋದು