Friday, 20th September 2024

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಉಗ್ರ ಸಂಘಟನೆ ಕೈವಾಡ ದೃಢ

ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆ ಜೈಷ್‌ ಉಲ್‌ ಹಿಂದ್‌ ಕೈವಾಡ ದೃಢಪಟ್ಟಿದೆ.

ಇಸ್ರೇಲ್ ರಾಯಭಾರ ಕಚೇರಿ ಬಳಿಯ ಸ್ಫೋಟದ ಹೊಣೆಯನ್ನು ಜೈಷ್-ಉಲ್-ಹಿಂದ್ ಎಂಬ ಉಗ್ರ ಸಂಘಟನೆ ಹೊತ್ತು ಕೊಂಡಿದ್ದು, ಈ ಕುರಿತು ಟೆಲಿಗ್ರಾಂ ಚಾನಲ್ ವೊಂದರ ಜೊತೆ ಸಂಘಟನೆ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿ ಬೆನ್ನಲ್ಲೇ ಕೇಂದ್ರೀಯ ತನಿಖಾ ದಳ ತನಿಖೆ ಚುರುಕುಗೊಳಿಸಿದೆ.

 

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪತ್ರ ಪೊಲೀಸರಿಗೆ ಲಭ್ಯವಾಗಿತ್ತು. ಅದರಲ್ಲಿ ಕೇವಲ ಟ್ರಯಲ್ ಅಷ್ಟೇ ಎಂದು ಬರೆಯಲಾಗಿತ್ತು. ಘಟನೆಯ ಹಿಂದೆ ಇರಾನ್ ಕೈವಾಡವಿರುವ ಬಗ್ಗೆಯೂ ಇಸ್ರೇಲ್ ಪ್ರತಿಪಾದಿಸಿದೆ.