Thursday, 19th September 2024

ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ : ಆತಂಕ ಅನಗತ್ಯ

ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು ಇಲ್ಲ. ಇಂಗು ಹಾಗಿದ ಒಗ್ಗರಣೆಯಂತೆ ಘಮ ಘಮ

ನವೆಂಬರ್ ಬಂದರೆ ಸಾಕು, ನನಗೆ ಕಾಡುವ (ಇದು ನಿಮ್ಮ ಸಂದೇಹವೂ ಆಗಿರಬಹುದು) ಒಂದು ಸಂದೇಹವೆಂದರೆ, ಇದು ಕನ್ನಡದ ಉತ್ಸವವೋ, ಶೋಕಾಚರಣೆಯೋ? ಕಾರಣ ನವೆಂಬರ್ ಬಂದರೆ ಎಲ್ಲರೂ ಸೂತಕ ಅಥವಾ ಶೋಕಾಚರಣೆ ರೀತಿಯಲ್ಲಿ ವರ್ತಿಸುತ್ತಾಾರೆ. ಕನ್ನಡ ರಾಜ್ಯೋೋತ್ಸವ ಎಂದ ಮೇಲೆ ಅಲ್ಲಿ ಅಲ್ಲಿ ಉತ್ಸವವಿರಬೇಕು, ಉತ್ಸವ ಎಂದ ಮೇಲೆ ಅಲ್ಲಿ ಸಂಭ್ರಮ, ಸಡಗರ, ಉಲ್ಲಾಸ * ಇರಣೆಕು. ಹಬ್ಬದ ವಾತಾವರಣ ಇರಬೇಕು. ಆದರೆ, ಎಲ್ಲರೂ ಶೋಕಾಚರಣೆಗೆ ಸಿದ್ಧರಾದವರಂತೆ ವರ್ತಿಸುತ್ತಾಾರೆ. ಇದು ಕೇವಲ ಇಂದು ನಿನ್ನೆೆಯ ಮಾತಲ್ಲ. ಕಳೆದ ಎರಡು ದಶಕಗಳಿಂದ, ನವೆಂಬರ್ ಬಂದರೆ ಇದೇ ರೀತಿಯ ವಾತಾವರಣ ಮುಸುಕುವುದನ್ನು ನೋಡಿದ್ದೇನೆ. ನವೆಂಬರಿನಲ್ಲಿ ಕನ್ನಡದ ಭವಿಷ್ಯದ ಬಗ್ಗೆೆ ಬಹಳ ನಿರುತ್ಸಾಾಹದಿಂದ ಮಾತಾಡುವುದನ್ನು ನಾವೆಲ್ಲಾ ಗಮನಿಸಿದ್ದೇವೆ.

ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿಿದೆ, ಕನ್ನಡ ಮಾತಾಡುವವರ ಸಂಖ್ಯೆೆ ಕಡಿಮೆಯಾಗುತ್ತಿಿದೆ, ಕನ್ನಡಿಗರ ನಾಲಗೆಯ ಮೇಲೆ ಇಂಗ್ಲಿಿಷ್ ಬಂದು ಕುಳಿತಿದೆ, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿಿವೆ, ಸರಕಾರ ಇಂಗ್ಲಿಿಷ್ ಶಾಲೆಗಳಿಗೆ ಮಣೆ ಹಾಕುತ್ತಿಿದೆ, ಬೆಂಗಳೂರಿನ ಕನ್ನಡಿಗರು ಕನ್ನಡ ಮಾತಾಡಲು ಹಿಂದೇಟು ಹಾಕುತ್ತಾಾರೆ, ರಾಜ್ಯ ಇಂಗ್ಲಿಿಷಮಯ ಆಗುತ್ತಿಿದೆ, ಕನ್ನಡ ಪುಸ್ತಕಗಳಿಗೆ ಬೇಡಿಕೆ ಕಡಿಮೆ ಆಗುತ್ತಿಿವೆ, ಕನ್ನಡದ ಭವಿಷ್ಯ ಆತಂಕಕಾರಿಯಾಗಿದೆ, ಕನ್ನಡದಲ್ಲಿ ಕಲಿತವರಿಗೆ ಕರ್ನಾಟಕದಲ್ಲಿ ಉದ್ಯೋೋಗ ಸಿಗುತ್ತಿಿಲ್ಲ, ಎಲ್ಲರೂ ಇಂಗ್ಲಿಿಷಿನಲ್ಲಿ ಟಸ್ಸು ಪುಸ್ಸು ಅಂತಾರೆ, ಇಂಗ್ಲಿಿಷಿನಲ್ಲಿ ಮಾತಾಡುಸುದು ಫ್ಯಾಾಷನ್ ಆಗಿದೆ….. ಇತ್ಯಾಾದಿ, ಇತ್ಯಾಾದಿ. ರಾಜ್ಯೋೋತ್ಸವದ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಓದಿ ಈ ವಿಷಯಗಳೇ ಪ್ರಧಾನವಾಗಿ ಚರ್ಚಿತವಾಗುತ್ತವೆ. ಭಾಷಣಕಾರರೆಲ್ಲ ಕನ್ನಡಕ್ಕೆೆ ಆತಂಕ ಕಾದಿದೆ, ಭವಿಷ್ಯ ಡೋಲಾಯಮಾನ ಸ್ಥಿಿತಿಯಲ್ಲಿದೆ ಎಂದೇ ಕಳವಳದಿಂದ ಮಾತಾಡುತ್ತಾಾರೆ. ಕನ್ನಡದ ಬಗ್ಗೆೆ ಯಾರೂ ಆಶಾದಾಯಕವಾಗಿ ಮಾತಾಡುವುದಿಲ್ಲ. ಅದಕ್ಕೇ ಹೇಳಿದ್ದು ನವೆಂಬರ್ ಬಂತೆಂದರೆ ಕನ್ನಡದ ಹಬ್ಬದ ಬದಲು ಎಲ್ಲರೂ ಸೂತಕ ಆಚರಣೆ ಮಾಡುತ್ತಿಿದ್ದೇವೋ ಎನ್ನುವ ಮನಸ್ಥಿಿತಿಯಲ್ಲಿ ಇರುತ್ತಾಾರೆ.

1976ರಲ್ಲಿ ‘ಸುಧಾ’ ವಾರಪತ್ರಿಿಯಲ್ಲಿ ಅ.ನ.ಕೃಷ್ಣರಾಯರು ಒಂದು ಲೇಖನ ಬರೆದಿದ್ದರು. ‘ಕನ್ನಡಕ್ಕೆೆ ಒದಗಿ ಬಂದ ಆತಂಕಗಳು’ ಎಂಬ ಶೀರ್ಷಿಕೆಯಲ್ಲಿ ಎರಡು ಕಂತುಗಳಲ್ಲಿ ಲೇಖನ ಬರೆದಿದ್ದರು. ಅದೇ ಸಂಚಿಕೆಯಲ್ಲಿ ಬಸವರಾಜ್ ಕಟ್ಟೀಮನಿ ಅವರೂ ‘ಕನ್ನಡಕ್ಕೆೆ ಎದುರಾದ ಸವಾಲುಗಳು’ ಎಂಬ ಲೇಖನ ಬರೆದಿದ್ದರು.

ಅಂದು ಇವರಿಬ್ಬರ ಲೇಖನಗಳನ್ನು ಓದಿದವರಿಗೆ, ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಬೆಂಗಳೂರಿನಿಂದ ಕಣ್ಮರೆಯಾಗಲಿದೆ ಎಂಬ ಸಂದೇಹ ಬರುವಂತಿತ್ತು. ಆ ಲೇಖನದಲ್ಲಿ ಅವರಿಬ್ಬರೂ ಬೆಂಗಳೂರಿನಲ್ಲಿ ಕನ್ನಡ ಭಾಷಿಕರಲ್ಲಿ ತಮ್ಮ ಮಾತೃಭಾಷೆಯ ಬಗ್ಗೆೆ ಕಡಿಮೆಯಾಗುತ್ತಿಿರುವ ಅಭಿಮಾನದ ಬಗ್ಗೆೆ ಬರೆದಿದ್ದರು. ಪರಿಸ್ಥಿಿತಿ ಹೀಗೆ ಮುಂದುವರಿದಂತೆ, ಇನ್ನು ಹತ್ತು-ಇಪ್ಪತ್ತು ವರ್ಷಗಳಲ್ಲಿ ಕನ್ನಡ ಭಾಷೆ ರಾಜಧಾನಿಯಿಂದ ಕಣ್ಮರೆಯಾಗಬಹುದು ಎಂಬುದು ಅವರ ಆತಂಕವಾಗಿತ್ತು. ಅದರಲ್ಲೂ ಅನಕೃ ಅವರು ತಮ್ಮ ಲೇಖನದಲ್ಲಿ ಬೆಂಗಳೂರಿನ ಕೆಲವು ಸಿನಿಮಾ ಥಿಯೇಟರ್‌ಗಳ ಮೇಲೆ ತಾವು ಇನ್ನಿಿತರ ಕನ್ನಡ ಹೋರಾಟಗಾರರ ಜತೆ ಸೇರಿ ಕಲ್ಲೆಸೆದಿದ್ದು ಏಕೆ ಎಂಬುದನ್ನು ಬರೆದಿದ್ದರು. ಕನ್ನಡ ಸಿನಿಮಾ ಬದಲಿಗೆ ತಮಿಳು ಸಿನಿಮಾ ಪ್ರದರ್ಶನಕ್ಕೆೆ ಆ ಥಿಯೇಟರ್‌ಗಳ ಮಾಲೀಕರು ನಿರ್ಧರಿಸಿದ್ದೇ, ಕಲ್ಲೆಸೆಯಲು ಕಾರಣವಾಗಿತ್ತು.

ಅನಕೃ ಮತ್ತು ಕಟ್ಟೀಮನಿ ಅವರು ಹೇಳಿದಂತೆ ಬೆಂಗಳೂರಿನಲ್ಲಿ ಕನ್ನಡ ನಶಿಸಲು ಆರಂಭಿಸಿದ್ದರೆ , ಈ ನಲವತ್ತೈದು ವರ್ಷಗಳಲ್ಲಿ ಕನ್ನಡ ಸಂಪೂರ್ಣ ಅಳಿದು ಹೋಗಬೇಕಿತ್ತು. ಆದರೆ, ಅಂದು ಅವರಿಬ್ಬರೂ ವ್ಯಕ್ತಪಡಿಸಿದ ಆತಂಕ, ಕಾಳಜಿ ಇಂದಿಗೂ ವ್ಯಕ್ತವಾಗುತ್ತಿಿದೆ. ಅವರು ಹೇಳಿದ್ದೇ ನಿಜವಾಗಿದ್ದರೆ, ಬೆಂಗಳೂರಿನಲ್ಲಿ ಕನ್ನಡ ಕಾಲ್ಕಿಿತ್ತಿಿರಬೇಕಿತ್ತು. ಆದರೆ ಪರಿಸ್ಥಿಿತಿ ಹಾಗೇನೂ ಇಲ್ಲ. ಕನ್ನಡ ಬಹಳ ಸುಸ್ಥಿಿತಿಯಲ್ಲಿ ಇಲ್ಲದಿದ್ದರೂ ಕನ್ನಡಕ್ಕಂತೂ ಯಾವ ಆತಂಕವೂ ಇಲ್ಲ. ಇನ್ನು ಐವತ್ತು ವರ್ಷಗಳಾದರೂ ಕನ್ನಡ ಸುರಕ್ಷಿತವಾಗಿಯೇ ಇರುತ್ತದೆ. ಭಾಷೆ ಇಂದಿಗೂ ಸಾಯುವುದಿಲ್ಲ. ಅದರಲ್ಲೂ ಕನ್ನಡ ಎಂದೆಂದೂ ಸಾಯುವುದಿಲ್ಲ.

ಲಿಪಿಗಳಿಲ್ಲದ ಭಾಷೆ ಅಳಿಯುವ ಸಾಧ್ಯತೆಗಳಿವೆ. ಆದರೆ ಕನ್ನಡದಂಥ ಗಟ್ಟು-ಮುಟ್ಟಾಾದ ಭಾಷೆಗೆ ಏನೇ ಬಂದರೂ, ಏನೂ ಆಗುವುದಿಲ್ಲ. ಕಾರಣ ಕನ್ನಡಕ್ಕೆೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಶ್ವದ ಅಮೂಲ್ಯ ಸಾಹಿತ್ಯಗಳೆಲ್ಲ ಕನ್ನಡದಲ್ಲೂ ಹರಳುಗಟ್ಟಿಿವೆ. ತಾಂತ್ರಿಿಕ ವಿಷಯವನ್ನೂ ಕನ್ನಡದಲ್ಲಿಯೇ ಅಭಿವ್ಯಕ್ತಪಡಿಸಬಹುದಾಗಿದೆ. ವಿಶ್ವದ ಗಟ್ಟಿಿ ಭಾಷೆಯ ಎಲ್ಲಾ ಲಕ್ಷಣಗಳು ಕನ್ನಡಕ್ಕೂ ಇದೆ. ಕನ್ನಡದಲ್ಲಿ ಎಂಥ ಕಠಿಣ ವಿಷಯವನ್ನಾಾದರೂ ಹೇಳಲು ಪದಗಳಿವೆ, ವಾಕ್ಯ ಸಂರಚನೆಗಳಿವೆ. ಇನ್ನು ಕನ್ನಡ ಲಿಪಿಯಂತೂ ವಿಶ್ವದಲ್ಲಿಯೇ ಅತ್ಯಂತ ಸುಂದರ ಲಿಪಿಗಳಲ್ಲಿ ಒಂದು ಎಂಬ ಅಭಿದಾನಕ್ಕೆೆ ಪಾತ್ರವಾಗಿದೆ. ಇಂಗ್ಲಿಿಷಿಗೆ ಸರಿಸಮಾನವಾಗಿ ವ್ಯವಹಾರ ಸುಲಭವಾದ ನುಡಿಗಟ್ಟುಗಳು ಕನ್ನಡದಲ್ಲಿವೆ. ನಮ್ಮ ಸಾಹಿತ್ಯವೇನೂ ಬರಡಲ್ಲ. ವಿಶ್ವದ ಶ್ರೇಷ್ಠ ಸಾಹಿತ್ಯಗಳೆಲ್ಲ ಕನ್ನಡದಲ್ಲಿ ಲಭ್ಯ. ಕನ್ನಡಕ್ಕೆೆ ಮತ್ತು ಸಂಸ್ಕೃತಕ್ಕೆೆ ಉತ್ತಮವಾದ ತಾಳ-ಮೇಳವಾಗುವುದರಿಂದ ಕಠಿಣ ವಿಷಯಗಳ ಸಂವಹನ ಸಹ ಅಸಾಧ್ಯವೇನಲ್ಲ.

‘ನಂಗೆ ಕನ್ನಡ ಸುಲಲಿತವಾಗಿ ಬರೊಲ್ಲ , ನಾನು ಕನ್ನಡದ ಬದಲು ಇಂಗ್ಲಿಿಷಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಾತಾಡಬಲ್ಲೆ’ ಎಂದು ನಾರಾಯಣಮೂರ್ತಿ ಥರದವರು ಕೆಲವರು ಹೇಳಬಹುದು. ಆದರೆ ಬಹಳ ಜನ ಇಂದಿಗೂ ಕನ್ನಡದಲ್ಲಿಯೇ ಮಾತಾಡಲು ಇಷ್ಟಪಡುತ್ತಾಾರೆ. ಯಡಿಯೂರಪ್ಪ, ಕುಮಾರಸ್ವಾಾಮಿ ಥರದವರಿಗೆ ಇಂಗ್ಲಿಿಷಿನಲ್ಲಿಯೇ ಮಾತಾಡಿ ಅಂದರೆ ಇಂದಿಗೂ ಕೀಳರಿಮೆ ಕಾಡುತ್ತದೆ. ಅವರು ಕನ್ನಡದಲ್ಲಿ ಹೆಚ್ಚು ಲೀಲಾಜಾಲವಾಗಿ ಮಾತಾಡಬಲ್ಲರು. ‘ನನಗೆ ಇಂಗ್ಲಿಿಷ್ ಅಂದರೆ ಅರ್ಥವಾಗೊಲ್ಲ , ಯಾರಾದರೂ ಇಂಗ್ಲಿಿಷಿನಲ್ಲಿ ಮಾತಾಡಿ ಅಂದ್ರೆೆ ಬೆವರು ಸುರಿಯುತ್ತದೆ’ ಎಂದು ಹೇಳುವ ವಿದ್ಯಾಾವಂತರಿದ್ದಾರೆ. ಯಾವುದಾದರೂ ಪಾರ್ಟಿಯಲ್ಲಿ ಇಂಗ್ಲಿಿಷ್ ಭಾಷೆ ಮಾತ್ರ ಅರ್ಥವಾಗುವ ಜನರ ಜತೆ ಕನ್ನಡ ಮಾತಾಡುವವರು ಸರಿಯಾಗಿ ಬೆರೆಯುವುದಿಲ್ಲ. ಇಂಗ್ಲಿಿಷನ್ನು ಚೆನ್ನಾಾಗಿ ಮಾತಾಡುವವರೂ ಕನ್ನಡ ಮಾತಾಡುವವರ ಸಖ್ಯ ಬಯಸುತ್ತಾಾರೆ. ಅಂಥವರ ಬಹಳ ದೊಡ್ಡ ವರ್ಗವಿದೆ.

ವ್ಯವಹಾರಕ್ಕೆೆ ಮಾತ್ರ ಇಂಗ್ಲಿಿಷ್, ಕೊರಳ ಭಾಷೆಯಾಗಿ ಕನ್ನಡವನ್ನೇ ಬಯಸುವ ದೊಡ್ಡ ವರ್ಗವೂ ಇದೆ. ಅಂದರೆ ಕನ್ನಡದಲ್ಲಿ ತಾನು ಎಲ್ಲಾ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಬಲ್ಲೆ ಎಂದು ಹೇಳುವವರ ಸಂಖ್ಯೆೆಯೂ ದೊಡ್ಡದೇ. ಇಂಗ್ಲಿಿಷ್ ಅಂದ್ರೆೆ ಗಣಿತ ಅಥವಾ ಗ್ರೀಕ್ ಎಂದು ಭಾವಿಸುವವರಿಗೇನೂ ಕಮ್ಮಿಿಯಿಲ್ಲ. ಅವರಿಗೆ ಇಂದಿಗೂ ಕನ್ನಡವೇ ನನ್ನಮ್ಮ. ಅವರು ನೂರು ಜನ್ಮವೂ ‘ಹುಟ್ಟಿಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆತ್ತಿಿದರೇ ಕನ್ನಡ ಮಣ್ಣ ಮೆಟ್ಟಬೇಕು..’ ಎಂದು ಹಾಡುವುದಷ್ಟೇ ಅಲ್ಲ, ಅಕ್ಷರಶಃ ಅದನ್ನೇ ಉಸಿರಾಗಿ ಸ್ವೀಕರಿಸಿದವರು. ಇಂದಿಗೂ ಬಹುತೇಕ ಕನ್ನಡಗರಿಗೆ ಇಂಗ್ಲಿಿಷ್ ಅಂದ್ರೆೆ ಕಬ್ಬಿಿಣದ ಕಡಲೆಯೇ. ಇಂಗ್ಲಿಿಷ್ ಕೂಡಿಸುವ ಭಾಷೆ ಅಲ್ಲವೇ ಅಲ್ಲ. ಅದು ಅನಿವಾರ್ಯದ ಭಾಷೆ, ಒತ್ತಾಾಯದ ಭಾಷೆ. ಅಮೆರಿಕದಲ್ಲಿರುವ ಕನ್ನಡಿಗನಿಗೂ ಇಂಗ್ಲಿಿಷ್ ಅನಿವಾರ್ಯದ ಭಾಷೆಯೇ. ಆತ ಖುಷಿಯಿಂದ ಆ ಭಾಷೆಯನ್ನೂ ಮಾತಾಡುವುದಿಲ್ಲ. ಆತ ಹೆಜ್ಜೆೆ ಹೆಜ್ಜೆೆಗೆ ಈ ಮಂದಿಗೆ ಕನ್ನಡ ಗೊತ್ತಿಿದ್ದರೆ, ತಾನು ಎಷ್ಟು ಚೆಂದವಾಗಿ ನನ್ನೆೆಲ್ಲಾ ಜ್ಞಾನದಿಂದ ಅವನನ್ನು ಗೆಲ್ಲುತ್ತಿಿದ್ದೆ ಎಂದು ಮನಸ್ಸಿಿನ ಮೂಲೆಯಲ್ಲಿ ಅನಿಸದೇ ಹೋಗುವುದಿಲ್ಲ.

ಅತ್ತ ಕನ್ನಡವೂ ಅಲ್ಲ, ಇತ್ತ ಇಂಗ್ಲಿಿಷೂ ಅಲ್ಲ ಎಂಬ ಬೆರಕಿ ಜಾತಿಯವರು ಕೆಲವರಿರಬಹುದು. ಆದರೆ ಕನ್ನಡದಲ್ಲಿಯೇ ಹೆಚ್ಚು ಆಪ್ತತೆ ಕಾಣುವ ಬಹಳ ದೊಡ್ಡ ವರ್ಗ ನಮ್ಮ ಮಧ್ಯ ಇದೆ. ನಮ್ಮ ಸೋಗಲಾಡಿತನಕ್ಕೆೆ , ಒಣ ಜಂಭ ಮೆರೆಯುವುದಕ್ಕೆೆ, ಡೌಲು ಹಾರಿಸುವುದಕ್ಕೆೆ ನಮಗೆ ಇಂಗ್ಲಿಿಷ್ ಬೇಕು. ಆದರೆ ಕನ್ನಡದಷ್ಟು ಆತ್ಮವಿಶ್ವಾಾಸದ ಭಾಷೆ ಮತ್ತೊೊಂದಿಲ್ಲ ಎಂದು ಭಾವಿಸುವವರ ಗುಂಪು ದೊಡ್ಡದಿದೆ. ಅವರೇ ಕನ್ನಡವನ್ನು ರಕ್ಷಿಸುವವರು ಮತ್ತು ಅದಕ್ಕೆೆ ಏನೂ ಆಗದಂತೆ ಕಾಪಾಡುವವರು. ಇಂಗ್ಲಿಿಷಿನಲ್ಲಿ ಎಷ್ಟೇ ಚೆನ್ನಾಾಗಿ ಮಾತಾಡುವ ಕನ್ನಡಿಗನಿಗೂ ತನ್ನ ಕನ್ನಡದ ಬಗ್ಗೆೆ ಕೀಳು ಅಭಿಪ್ರಾಾಯ ಇರಲು ಸಾಧ್ಯವೇ ಇಲ್ಲ. ಮಾತೃಭಾಷೆಯಾಗಿ ಕನ್ನಡ ಒಮ್ಮೆೆ ಹೊಕ್ಕರೆ ಅದನ್ನು ಓಡಿಸುವುದು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ.

ಅಮೆರಿಕದ ಸ್ಟ್ಯಾಾನ್ಫೋೋರ್ಡ್ ವಿಶ್ವವಿದ್ಯಾಾಲಯದಲ್ಲಿರುವ ಡಾ.ಶಾಂತು ಶಾಂತಾರಾಮ, ಬೆಲ್ಜಿಿಯಂದಲ್ಲಿರುವ ಗೆಂಟ್ ವಿಶ್ವವಿದ್ಯಾಾಲಯದಲ್ಲಿರುವ ಡಾ. ಎನ್ .ಎಸ್. ಬಾಲಗಂಗಾಧರ, ಹಾರ್ವರ್ಡ್ ವಿಶ್ವವಿದ್ಯಾಾಲಯದಲ್ಲಿರುವ ಡಾ. ಅಶ್ವತ್, ಬಾಥ್ ವಿಶ್ವವಿದ್ಯಾಾಲಯದಲ್ಲಿರುವ ಡಾ.ರಘುರಾಮ್, ಬರ್ಮಿನ್‌ಗ್‌ ಹ್ಯಾಾಮ್ ವಿಶ್ವವಿದ್ಯಾಾಲಯದಲ್ಲಿರುವ ಪ್ರೊೊ. ವಸಂತ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್‌ಸ್‌‌ನಲ್ಲಿ ಕಳೆದ ಒಂದೂವರೆ ದಶಕಗಳಿಂದ ಇರುವ ಡಾ. ವಿನೋದ ಸುಂದರ ಮುಂತಾದ ನೂರಾರು ಜನ ತಾಯ್ನಾಾಡನ್ನು ಬಿಟ್ಟು ಮೂರ್ನಾಲ್ಕು ದಶಕಗಳಾದರೂ ಇಂದಿಗೂ ಕನ್ನಡದಲ್ಲಿ ಚೆಂದವಾಗಿ ಬರೆಯುತ್ತಾಾರೆ, ಅಸ್ಖಲಿತವಾಗಿ ಮಾತಾಡುತ್ತಾಾರೆ. ಅಮೆರಿಕದಲ್ಲಿದ್ದು ನಾಲ್ಕು ದಶಕಗಳಾದರೂ ಮೈಸೂರು ನಟರಾಜ ಅವರ ಕನ್ನಡ ಸ್ವಲ್ಪವೂ ಮುಕ್ಕಾಾಗಿಲ್ಲ. ಕರ್ನಾಟಕದ ಯಾವ ವಿಶ್ವವಿದ್ಯಾಾಲಯದ ಕನ್ನಡ ಅಧ್ಯಾಾಪಕರಿಗಿಂತ ಅವರ ಕನ್ನಡ ಮಸ್‌ತ್‌ ಇದೆ. ಅವರು ಕನ್ನಡಕ್ಕೆೆ ಅನುವಾದಿಸಿದ ಇಂಗ್ಲಿಿಷ್ ಕವನಗಳು ಕನ್ನಡಕ್ಕೆೆ ಸಂದ ಕಾಣಿಕೆಗಳೇ.

ಕಳೆದ ಎರಡು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿ, ಒಂದೂವರೆ ದಶಕಗಳಿಂದ ನಿರಂತರವಾಗಿ ಅಂಕಣ ಬರೆಯುತ್ತಿಿರುವ ಶ್ರೀವತ್ಸ ಜೋಶಿ ಅವರ ಕನ್ನಡ ಕೃಷಿ ಅದ್ಭುತವಾದುದು. ಅಮೆರಿಕದ ನೆಲದಲ್ಲಿ ಇಷ್ಟು ದೀರ್ಘಕಾಲ ವಾಸವಾಗಿ, ಇಷ್ಟೊೊಂದು ದೀರ್ಘ ಅವಧಿಗೆ ಬರೆಯುತ್ತಿಿರುವ ಜೋಶಿ ಅವರು ತಮ್ಮ ಕನ್ನಡವನ್ನು ಡಾಲರಿಗಿಂತ ಅಮೂಲ್ಯವಾಗಿ ಕಾಪಾಡಿಕೊಂಡಿದ್ದಾರೆ. ಅವರು ಒಂದೇ ಒಂದು ಸಲ ಕುಂಟು ನೆಪ ಹೇಳಿ ತಮ್ಮ ಅಂಕಣವನ್ನು ನಿಲ್ಲಿಸಿದ ನಿದರ್ಶನವೇ ಇಲ್ಲ. ಶ್ರೀವತ್ಸ ಜೋಶಿ ಅಮೆರಿಕದಲ್ಲಿದ್ದೂ ತಮ್ಮ ಕನ್ನಡವನ್ನು ಹೇಗೆ ಅಷ್ಟು ಚೆಂದವಾಗಿ ಕಾಪಾಡಿಕೊಂಡಿದ್ದಾರೆ ಏನು ನನಗೆ ನೂರಾರು ಜನ ಕೇಳಿದ್ದಾರೆ. ಕನ್ನಡದ ಯಾವುದೇ ಒಬ್ಬ ಅಂಕಣಕಾರರಿಗಿಂತ ಹೆಚ್ಚಿಿನ ಅಭಿಮಾನಿಗಳನ್ನು ಜೋಶಿಯವರು ಸಂಪಾದಿಸಿದ್ದಾರೆ.

ಅಚ್ಚರಿ ಎನಿಸಬಹುದು, ಶ್ರೀವತ್ಸ ಜೋಶಿ ಅವರು ದೂರದ ಅಮೆರಿಕದಲ್ಲಿ ಕುಳಿತು ಕನ್ನಡದ ಪತ್ರಕರ್ತರಿಗೆ ‘ಸ್ವಚ್ಛ ಕನ್ನಡ ಭಾಷಾ ಕಲಿಕೆ’ ಪಾಠ ಮಾಡುತ್ತಿಿದ್ದಾರೆ. ಈ ನಿಟ್ಟಿಿನಲ್ಲಿ ಅವರು ಆರಂಭಿಸಿದ ಅಭಿಯಾನ ಕನ್ನಡ ಕಲಿಕೆ ಮತ್ತು ಕನ್ನಡ ಪತ್ರಿಿಕೋದ್ಯಮದಲ್ಲಿ ಒಂದು ಅಪರೂಪದ ಪ್ರಯೋಗ. ಇಂಗ್ಲಿಿಷ್ ಹೊಡೆತದ ಮಧ್ಯೆೆಯೂ ಕನ್ನಡವನ್ನು ಹೇಗೆ ಚೆಂದವಾಗಿ ಕಾಪಾಡಿಕೊಳ್ಳಬಹುದು ಎಂಬುದಕ್ಕೆೆ ಶ್ರೀವತ್ಸ ಜೋಶಿ ಒಂದು ಆದರ್ಶ. (ರಾಜ್ಯೋೋತ್ಸವದಂದು ಮುಖ್ಯಮಂತ್ರಿಿಗಳು ಇವರನ್ನು ಸನ್ಮಾಾನಿಸಬೇಕು.) ಡಾ.ಶಾಂತು ಶಾಂತಾರಾಮ ನಿಜಕ್ಕೂ ಕನ್ನಡದಲ್ಲಿಯೇ ಬರೆದು ಕಳಿಸುತ್ತಾಾರಾ ಅಥವಾ ನೀವು ಅವರ ಇಂಗ್ಲಿಿಷ್ ಬರಹವನ್ನು ಕನ್ನಡಕ್ಕೆೆ ಅನುವಾದ ಮಾಡುತ್ತೀರಾ ಎಂದು ಅನೇಕರು ಕೇಳಿದ್ದಾರೆ. ಅವರ ಕನ್ನಡ ಭಾಷೆ ಇನ್ನೂ ಅಗ್ದಿಿ ಭೇಷ್ ಇದೆ. ಇಂಥವರು ತಾಯ್ನಾಾಡಿನಿಂದ ಸಾವಿರಾರು ಮೈಲು ದೂರ ಇದ್ದರೂ, ನಿತ್ಯ ಇಂಗ್ಲಿಿಷ್ ಗಾಳಿ ಸೇವಿಸುತ್ತಿಿದ್ದರೂ, ಕನ್ನಡವನ್ನು ಅಂಗೈ ಮೇಲಿನ ಗೆರೆಗಳಂತೆ ಶಾಶ್ವತವಾಗಿ ಕಾಪಾಡಿಕೊಳ್ಳಬಹುದು ಎಂಬುದಕ್ಕೆೆ ನಿತ್ಯ ನಿದರ್ಶನಗಳು.

ಕನ್ನಡ ಅಪಾಯದಲ್ಲಿದೆ , ಕನ್ನಡ ನಶಿಸುತ್ತಿಿದೆ, ಕನ್ನಡ ಸಾಯುತ್ತೆೆ ಎಂದೆಲ್ಲ ಹೆದರಿಸುವವರು ಬುದ್ಧಿಿಗೇಡಿಗಳು. ಕನ್ನಡಕ್ಕೇನೂ ಆಗುವುದಿಲ್ಲ. ಕನ್ನಡ ಭದ್ರವಾಗಿಯೇ ಇರುತ್ತದೆ. ನಮ್ಮ ಕಣ್ಮುಂದೆಯೇ ಟೆಕ್ಕಿಿಗಳೆಂಬ ಹೊಸ ಕನ್ನಡ ಸಂತತಿ ಉದಯವಾಗಿದೆ. ಇವರು ಕನ್ನಡದ ಹಿತ ಕಾಯುವ ಯೋಧರೂ ಹೌದು. ಇವರು ಕನ್ನಡ ಭಾಷೆಯ ಬಳಕೆ ಮತ್ತು ಉಳಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿಿದ್ದಾರೆ. ಇವರಿಗೆ ಸಂಘ-ಸಂಸ್ಥೆೆ, ಸದಸ್ಯತ್ಯದ ಹಂಗಿಲ್ಲ. ತಾವು ಕುಳಿತಲ್ಲಿಂದಲೇ ಕನ್ನಡದ ಕೆಲಸ ಮಾಡುತ್ತಿಿದ್ದಾರೆ. ಇಂಟರ್ನೆಟ್ ಬಳಕೆ ವ್ಯಾಾಪಕವಾಗುತ್ತಿಿರುವ ಈ ದಿನಗಳಲ್ಲಿ , ಸೋಷಿಯಲ್ ಮೀಡಿಯ ಬಳಕೆದಾರರು ಅಥವಾ ನೆಟ್ಟಿಿಗರು ಕನ್ನಡದ ಕೆಲಸವನ್ನು ಆಸ್ಥೆೆಯಿಂದ ಮಾಡುತ್ತಿಿದ್ದಾರೆ. ಇವರಿಂದಾಗಿ ಕನ್ನಡದ ಭಾಷೆಯ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿಿದೆ. ಓದುಗರೆಲ್ಲ ಬರೆಯಲಾರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ಇವರ ಎದೆಯಲ್ಲಿದ್ದ ಭಾವನೆಗಳೆಲ್ಲ ಅಕ್ಷರಗಳಾಗಿ ಹರಳುಗಟ್ಟುತ್ತಿಿವೆ.

ಕನ್ನಡ ಪತ್ರಿಿಕೋದ್ಯಮ ಮತ್ತು ಕನ್ನಡ ಪುಸ್ತಕೋದ್ಯಮ ಕ್ರಿಿಯಾಶೀಲ ಆಗಿರುವ ತನಕ ಕನ್ನಡಕ್ಕೆೆ ಯಾವ ಕುತ್ತು ಇಲ್ಲ. ಕನ್ನಡ ಪತ್ರಿಿಕೆಗಳ ಪ್ರಸಾರ ಸಂಖ್ಯೆೆಯಂತೂ ದಿನದಿಂದ ದಿನಕ್ಕೆೆ ಏರುತ್ತಿಿವೆ. ಇಂಟರ್ನೆಟ್ ಭರಾಟೆಯ ನಡುವೆಯೂ ಯಾವ ಪತ್ರಿಿಕೆಯೂ ಮತ್ತೊೊಂದು ಪತ್ರಿಿಕೆಯ ಪ್ರಸಾರವನ್ನು ಕಿತ್ತು ತಿಂದಿಲ್ಲ. ಕನ್ನಡ ಸುರಕ್ಷಿತವಾಗಿವೆ ಎಂಬುದನ್ನು ತಿಳಿಯಲು ಕನ್ನಡ ಪತ್ರಿಿಕೆಗಳು ದೈನಂದಿನ ಮಾಪಕಗಳಿದ್ದಂತೆ. ಕನ್ನಡಮ್ಮನ ಮೈಮೇಲೆ ಒಂದು ಸಣ್ಣ ಸೊಳ್ಳೆೆ ಬಂದು ಕುಳಿತು ರಕ್ತ ಹೀರಲಾರಂಭಿಸಿದರೂ ಪತ್ರಿಿಕೆಗಳು ಸುಮ್ಮನಿರುವುದಿಲ್ಲ. ಕನ್ನಡದ ವಿರುದ್ಧ ಒಂದು ಕೀರಲು ದನಿ ಕೇಳಿ ಬಂದರೂ ಪತ್ರಿಿಕೆಗಳು ಬೊಬ್ಬೆೆ ಹಾಕದೇ ಬಿಡುವುದಿಲ್ಲ. ಇನ್ನು ಕನ್ನಡ ಸುದ್ದಿ ಚಾನಲ್ಲುಗಳಂತೂ ಬ್ರೇಕಿಂಗ್ ನ್ಯೂಸ್ ಮೂಲಕವೇ ಎಲ್ಲರನ್ನೂ ‘ಉಫ್’ ಎಂದು ಹಾರಿಸಿ ನಿವಾಳಿಸಿ ಹಾಕುತ್ತವೆ. ಕನ್ನಡದ ಮಾಧ್ಯಮಗಳು ಕನ್ನಡದ ಕಟ್ಟಾಾಳುಗಳಿಂದ್ದಂತೆ. ಭಾಷೆಯ ವಿಷಯಕ್ಕೆೆ ಬಂದರೆ ಇವರು ಯಾವ ಶಕ್ತಿಿಗಳಿಗೂ ಮಣಿಯುವವರಲ್ಲ.

ಕನ್ನಡದ ಸುರಕ್ಷತೆ ಬಗ್ಗೆೆ ಇನ್ನೊೊಂದು ಮಜಕೂರು ಇದೆ. ಅದು ನಮ್ಮ ವಿಧಾನ ಸೌಧದಲ್ಲಿದೆ. ಇಲ್ಲಿ ತನಕ ಬಣದ ಸರಕಾರಗಳೆಲ್ಲ ಕನ್ನಡ ಪರ ಸರಕಾರಗಳೇ. ಕಾರಣ ಎಲ್ಲಾ ಮುಖ್ಯಮಂತ್ರಿಿಗಳೂ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಯಾರಿಗೂ ಪೂರ್ತಿ ವಾಕ್ಯ ಇಂಗ್ಲಿಿಷಿನಲ್ಲಿ ಮಾತಾಡಲು ಬರೊಲ್ಲ. ಅಷ್ಟಮಟ್ಟಿಿಗೆ ಅವರೆಲ್ಲರೂ ಕನ್ನಡ ಕಲಿಗಳೇ. ಇಷ್ಟು ವರ್ಷ ಆಳಿದ್ದು ಈ ಕನ್ನಡ ಸರಕಾರಗಳೇ. ಮೂರ್ನಾಲ್ಕು ಮಂದಿಯನ್ನು ಬಿಟ್ಟರೆ ಉಳಿದೆಲ್ಲ ಮುಖ್ಯಮಂತ್ರಿಿಗಳ ಇಂಗ್ಲಿಿಷ್ ಅಷ್ಟಕ್ಕಷ್ಟೇ. ಅವರಾರೂ ಇನ್ಫೋೋಸಿಸ್ ನಾರಾಯಣ ಮೂರ್ತಿ ಅವರಂತೆ * ಐ ್ಚ್ಞಠಿ ್ಠ್ಞಛ್ಟಿಿಠ್ಞಿ ಓ್ಞ್ಞ, ಐ ್ಚ್ಞಠಿ ಛಿ ಓ್ಞ್ಞ ಎಂದು ಹೇಳುವವರಲ್ಲ. ಹಾಗೆ ಹೇಳುವವರು ವಿಧಾನ ಸೌಧ ಮೆಟ್ಟಿಿಲು ಹತ್ತಲಾರರು. ಕಾಲು ಶತಮಾನ ಕಳೆದರೂ ಥೇಮ್ಸ್ ನದಿಯಲ್ಲಿ ಅಂಡು ತೊಳೆದು, ಪೋಟೋಮಕ್ ನದಿ ನೀರು ಕುಡಿದು ಬಂದವರು ಕರ್ನಾಟಕದ ಮುಖ್ಯಮಂತ್ರಿಿ ಆಗಲಾರರು. ಯಾವುದೇ ಸರಕಾರ ಬಂದರೂ ಅಲ್ಲಿ ರೇಣುಕಾಚಾರ್ಯ, ಶಿವಲಿಂಗೇಗೌಡ ಅವರಂಥವರು ಇದ್ದೇ ಇರುತ್ತಾಾರೆ. ಅವರು ಕನ್ನಡಕ್ಕೆೆ ಸಣ್ಣ ತರಚಿದ ಗಾಯವಾದರೂ ಕುಂಯೋ ಅಂತ ಅರಚುತ್ತಾಾರೆ. ಇನ್ನು ಪ್ರತಿಭಟನೆಯ ವಿಷಯ ಬಂದರೆ, ನೆಟ್ಟಿಿಗರೆಲ್ಲ ವಾಟಾಳ ನಾಗರಾಜರೇ!

ಕುಮಾರಸ್ವಾಾಮಿಯಂಥವರು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಅವಿವೇಕದ ನಿರ್ಧಾರಕ್ಕೆೆ ಮುಂದಾಗಿರಬಹುದು. ಆದರೆ ಭಾಷೆ ಹಿತ ಕಾಯುವ ವಿಷಯ ಬಂದಾಗ ನಮ್ಮ ರಾಜಕಾರಣಿಗಳು ಕನ್ನಡದ ಹಿತಾಸಕ್ತಿಿಯನ್ನು ಬಿಟ್ಟುಕೊಟ್ಟವರಲ್ಲ. ಕಾರಣ ಕನ್ನಡದಲ್ಲಿಯೇ ಅವರ ಅಸ್ತಿಿತ್ವ ಅಡಗಿದೆ. ಪುಣ್ಯವಶಾತ್ ಕನ್ನಡ ಬಿಟ್ಟು ಇವರಿಗೆ ಬೇರೆ ಭಾಷೆ ಬರುವುದಿಲ್ಲ. ಇಂಗ್ಲಿಿಷ್ ಇನ್ನೂ ಕಬ್ಬಿಿಣದ ಕಡಲೆಯೇ. ಇವರಲ್ಲಿ ಹೆಚ್ಚಿಿನವರು ಇಂಗ್ಲಿಿಷ್ ಮಾಧ್ಯಮದಲ್ಲಿ ಓದಿ ಬಂದಿದ್ದರೆ ಕತೆ ಬೇರೆ ಇತ್ತು. ಹೀಗಾಗಿ ಕನ್ನಡ ವಿಧಾನ ಸೌಧದಲ್ಲಿ ತಂಬು ಊರಿ ಶಾಶ್ವತವಾಗಿ ಇರುವುದು ಗ್ಯಾಾರಂಟಿ.

ಹೀಗಿರುವಾಗ ಯೋಚನೆ ಏಕೆ? ಚಿಂತೆ ಏಕೆ? ಚೆನ್ನಾಾಗಿ, ಅದ್ಧೂರಿಯಾಗಿ, ಖುಷಿ ಖುಷಿಯಿಂದ ಕನ್ನಡ ಹಬ್ಬವನ್ನು ಈ ತಿಂಗಳಿಡೀ ಆಚರಿಸೋಣ.