ನ್ಯಾಯಾಲಯದ ನಿರ್ದೇಶನದಿಂದ ವಿಮಾ ಕಂಪನಿಗಳು ಹೊರಗುಳಿಯಲು ಸಾಧ್ಯವಿಲ್ಲ. ವಿಮಾ ಕಂಪನಿಗಳು ಈ ಆಪ್ ತಯಾರಿ ಸಲು ಸಮರ್ಥರಾಗಿರದಿದ್ದರೆ ನಾವು ಸರ್ಕಾರಕ್ಕೆ ಸೂಚನೆ ನೀಡುತ್ತೇವೆ’ ಎಂದು ನ್ಯಾ.ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಆಯಪ್ ತಯಾರಿಕೆಗೆ ಸುಪ್ರೀಂಕೋರ್ಟ್ ವಿಮಾ ಕಂಪನಿಗಳಿಗೆ ಎರಡು ತಿಂಗಳ ಕಾಲಾ ವಕಾಶ ನೀಡಿದೆ.
ಆಯಪ್ ಅಭಿವೃದ್ಧಿಯಿಂದ ಭಾರತದಾದ್ಯಂತ ರಸ್ತೆ ಅಪಘಾತಗಳು, ನ್ಯಾಯಮಂಡಳಿಗಳು, ಪೊಲೀಸ್ ಮತ್ತು ವಿಮಾ ಕಂಪನಿ ಗಳ ಸಂತ್ರಸ್ತರು ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್ 16 ಮತ್ತು ಆಗಸ್ಟ್ 3 ರಂದು ಸುಪ್ರೀಂಕೋರ್ಟ್ ವಿಸ್ತೃತ ಆದೇಶವನ್ನು ನೀಡಿತ್ತು.