Monday, 28th October 2024

ತಾಲ್ಲೂಕು ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಚಿಕ್ಕನಾಯಕನಹಳ್ಳಿ : ಭಾರತೀಯ ಜನತಾ ಪಕ್ಷದ ತಾಲ್ಲೂಕು ಮಂಡಲದ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿರಂಜನ್ ಮೂರ್ತಿ ಅವರಿಗೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.

ಉಪಾಧ್ಯಕ್ಷರಾಗಿ ಕೆಂಕೆರೆ ನವೀನ್, ಹೊಸಹಳ್ಳಿ ಜಯಣ್ಣ, ಅಣೆಕಟ್ಟೆ ಯೋಗೀಶ್ವರಯ್ಯ, ತಿಮ್ಮನಹಳ್ಳಿ ಮಂಜುಳಮ್ಮ, ಹುಳಿ ಯಾರಿನ ಹೆಚ್.ಎನ್.ಕಿರಣ್ ಕುಮಾರ್, ಮುದ್ದೇನ ಹಳ್ಳಿ ಈಶ್ವರಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಎಳ್ಳೇನಹಳ್ಳಿ ನಿರಂಜನ್‌ ಮೂರ್ತಿ, ಅಗಸರಹಳ್ಳಿ ಶಿವರಾಜ್, ಕಾರ್ಯದರ್ಶಿಗಳಾಗಿ ಬುಕ್ಕಪಟ್ಟಣ ಮಂಜುನಾಥ್, ದವಣದ ಹೊಸಹಳ್ಳಿ ಕರಿಯಪ್ಪ, ಬಾಳಾಪುರ ಸತ್ಯನಾರಾಯಣ, ಮತಿಘಟ್ಟ ಲೀಲಾವತಿ, ಬರ ಗೂರು ಬಸವರಾಜಯ್ಯ, ಸೋರಲಮಾವು ಸಿದ್ದಲಿಂಗಸ್ವಾಮಿ, ಖಜಾಂಚಿಯಾಗಿ ಬರಕ ನಾಳ್ ವಿಶ್ವನಾಥ್, ನೇಮಕಗೊಂಡಿದ್ದಾರೆ.

ವಿವಿಧ ಪ್ರಕೋಷ್ಠಗಳಿಗೆ ನೇಮಕ: ಮಹಿಳಾ ಮೋರ್ಚದ ಅಧ್ಯಕ್ಷೆಯಾಗಿ ಕವಿತಾ ಚನ್ನಬಸವಯ್ಯ, ಕಾರ್ಯದರ್ಶಿಯಾಗಿ ಶೃತಿ ಸನತ್, ಸುಗುಣಾ ಆಯ್ಕೆ. ಹಿಂದುಳಿದ ವರ್ಗಗಳ ಮೋರ್ಚದ ಅಧ್ಯಕ್ಷರಾಗಿ ಇಟ್ಟಿಗೆ ರಂಗಸ್ವಾಮಿ, ಕಾರ್ಯದರ್ಶಿಯಾಗಿ ಮೋಹನ್, ರಮೇಶ್ ನೇಮಕ. ಯುವ ಮೋರ್ಚದ ಅಧ್ಯಕ್ಷರಾಗಿ ಅರಳೀಕೆರೆ ಉಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದರಾಮನಗರದ ರಾಕೇಶ್, ಮಣಿಕಂಠ ಆಯ್ಕೆ. ಎಸ್.ಟಿ ಮೋರ್ಚ ಅಧ್ಯಕ್ಷರಾಗಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಯಾಗಿ ರಾಮಚಂದ್ರಯ್ಯ ಮಧುಸೂಧನ್, ನೇಮಕಗೊಳಿಸಿ ತಾಲ್ಲೂಕು ಅಧ್ಯಕ್ಷ ಕೇಶವಮೂರ್ತಿ ಆದೇಶಿಸಿದ್ದಾರೆ.