ನಾರಾಯಣ ಯಾಜಿ ಯಕ್ಷಗಾನ ಪ್ರದರ್ಶನದಲ್ಲಿ ಹೊಸ ಸಾಹಸಗಳನ್ನು ನಡೆಸಿದ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥೆಯು ಹಲವು ಆಯಾಮಗಳಲ್ಲಿ ಪ್ರಮುಖ ಎನಿಸಿದೆ. ಸಂತೆಗುಳಿ ನಾರಾಯಣ ಭಟ್ಟರು ಯಕ್ಷಗಾನ ವಲಯದಲ್ಲಿ ಪರಿಚಿತವಾದ ಹೆಸರು. ಆದರೆ ಅವರು ಉತ್ತರ ಕನ್ನಡಜಿಲ್ಲೆಯ ಯಕ್ಷಗಾನದ ಚರಿತ್ರೆಯ ಭಾಗವೂ ಆಗಿದ್ದಾರೆ ಎನ್ನುವುದು ಕೆಲವೇ ಜನರಿಗೆ ತಿಳಿದ ಸಂಗತಿ. ಕಾಲವೇ ಹಾಗೇ, ಹೊಸ ನೀರು ಬಂದಾಗ ಹಳೇಯ ನೀರು ಕೊಚ್ಚಿಹೋಗುತ್ತದೆ. ನಾರಾಯಣ ಭಟ್ಟರಂಥವರು ಯಕ್ಷಗಾನ ಕಲೆಯ ಮೇಲಿನ ಅವಿನಾಭಾವ ಸಂಬಂಧದಿಂದ ರಂಗದ ಹಿಂದಿನ ಮಹಾನ ಶಕ್ತಿಯಾಗಿ ಅನೇಕ […]