Friday, 25th October 2024

BBK 11: ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಮತ್ತೊಮ್ಮೆ ಸದ್ದು ಮಾಡಿದ ಚೈತ್ರಾ ಕುಂದಾಪುರ ಮಾತು

Chaithra Kundapura and Aishwarya

ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಶನಿವಾರ ಮತ್ತು ಭಾನುವಾರ ಎರಡು ದಿನ ಕೂಡ ನಡೆಯಿತು. ಅಷ್ಟು ಹೊತ್ತು ಸುದೀಪ್ ಅವರು ಸ್ಪರ್ಧಿಗಳ ಬೆಂಡೆತ್ತಿದ್ದರು. ನಾನು ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್​ನಲ್ಲಿ (Bigg Boss Kannada 11) ಇದು ವರ್ಸ್ಟ್​ ಬ್ಯಾಚ್ ಎಂದು ಹೇಳಿದರು. ಸ್ಪರ್ಧಿಗಳು ನಡೆದುಕೊಂಡ ರೀತಿ, ಅವರು ಆಡಿದ ಮಾತನ್ನು ಅವರಿಗೇ ಮನವರಿಕೆ ಮಾಡಿದ ಸುದೀಪ್ ಬದಲಾಗಿ ಎಂದು ಹೇಳಿದ್ದರು. ಆದರೆ, ಈ ವಾರ ಸ್ಪರ್ಧಿಗಳು ಅದೇ ಹಳೇಯ ಚಾಳಿ ಮುಂದುವರೆಸಿದ್ದಾರೆ.

ಸುದೀಪ್ ಆಡಿದ ಮಾತು ಲೆಕ್ಕಕ್ಕೆ ಇಲ್ಲದಂತಾಗಿದೆ. ಮನೆಯಲ್ಲಿ ತಳ್ಳಾಟ, ಜಗಳ, ಖಾರವಾದ ಮಾತು ಮಿತಿಯಿಲ್ಲದೆ ನಡೆಯುತ್ತಿದೆ. ಅದರಲ್ಲೂ ವೀಕೆಂಡ್ ಸುದೀಪ್ ಅವರು ಚೈತ್ರಾ ಕುಂದಾಪುರ ಅವರಿಗೆ ಸ್ಪೆಷನ್ ಕ್ಲಾಸ್ ತೆಗೆದುಕೊಂಡಿದ್ದರು. ಮಾತಿನ ಮೇಲೆ ಹಿಡಿತ ಇರಬೇಕು ಎಂದಿದ್ದರು. ಹೀಗಿದ್ದರು ಚೈತ್ರಾ ಮೊನ್ನೆಯಷ್ಟೆ ಮೆಟ್ಟು ತಗೊಂಡು ಹೊಡಿತೀನಿ ಎಂಬ ಪದ ಬಳಸಿ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಐಶ್ವರ್ಯ ಮೇಲೆ ರೇಗಾಡಿದ್ದಾರೆ.

ಈ ಬಾರಿ ತ್ರಿವಿಕ್ರಮ್ ಹಾಗೂ ಐಶ್ವರ್ಯಾ ದೊಡ್ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ರೀತಿ ಜೋಡಿಯೊಂದು ಒಟ್ಟಿಗೆ ಕ್ಯಾಪ್ಟನ್ ಆಗಿರೋದು ಇದೇ ಮೊದಲು. ಇಬ್ಬರಿಗೂ ಕ್ಯಾಪ್ಟನ್ ರೂಂ ಬಳಕೆ ಮಾಡುವ ಅಧಿಕಾರ ಇದೆ. ಕ್ಯಾಪ್ಟನ್ ರೂಂನಲ್ಲಿ ವಿಶೇಷ ಸವಲತ್ತುಗಳು ಇರುತ್ತವೆ. ನಿಯಮಗಳ ಪ್ರಕಾರ ಕ್ಯಾಪ್ಟನ್ ಹೊರತು ಪಡಿಸಿ ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಮ್ ಮುರಿದಿದ್ದಾರೆ.

ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಕ್ಯಾಪ್ಟನ್​ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಚೈತ್ರಾ ಅವರನ್ನು ಕರೆದುಕೊಂಡು ಬರಲು ಪ್ರಯತ್ನಿಸಿದರು. ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಆ ರೂಂನ ಬಳಕೆ ಮಾಡುವಂತಿಲ್ಲ ಎಂದು ಐಶ್ವರ್ಯಾ ಹೇಳಿದರು. ಆ ಬಳಿಕ ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಕೆಂಡಾಮಂಡಲರಾಗಿದ್ದಾರೆ. ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ನೆಟ್ಟಗಿದೆ ಎಂದು ಕೂಗಾಡಿದ್ದಾರೆ. ಇವರಿಬ್ಬರ ಮಧ್ಯೆ ದೊಡ್ಡದಾಗಿಇ ಮಾತಿನ ಚಕಮಕಿ ನಡೆದಿದೆ.

BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ದೊಡ್ಮನೆಗೆ ನುಗ್ಗಿಬಂದ ಜನಸಾಮಾನ್ಯರು