Friday, 18th October 2024

BBK 11: ಆ ಮನುಷ್ಯ ಬಿಗ್ ಬಾಸ್​ನಲ್ಲಿರಬೇಕು: ಜಗದೀಶ್​ನ ಮನೆಯಿಂದ ಕಳುಹಿಸಬೇಡಿ ಎಂದ ಚೈತ್ರಾ-ಭವ್ಯಾ

Bhavya and Chaithra BBK 11

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ದೊಡ್ಡ ಹೈ-ಡ್ರಾಮವೇ ನಡೆದಿದೆ. ದೊಡ್ಮನೆ ರಣರಂಗವಾಗಿದೆ. ಜಗದೀಶ್ ವಿರುದ್ಧ ಇಡೀ ಮನೆ ತಿರುಗಿ ನಿಂತಿದೆ. ಪ್ರತಿದಿನ ಮಾತಿನಲ್ಲೆ ಅಂತ್ಯಗೊಳ್ಳುತ್ತಿದ್ದ ಜಗಳ ಈ ಬಾರಿ ಹೊಡೆದಾಟದ ತನಕ ಹೋಗಿದೆ. ಶೋ ಆರಂಭವಾದಾಗಿನಿಂದ ಜಗದೀಶ್ ಬಗ್ಗೆ ಕೇಳಿಬರುತ್ತಿದ್ದ ಕೆಲವು ಆರೋಪಗಳಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದಿಲ್ಲ ಎಂಬುದು ಕೂಡ ಒಂದು. ಇದೇ ವಿಚಾರ ಮನೆಯಲ್ಲಿ ಮತ್ತೊಮ್ಮೆ ಬೆಂಕಿ ಹತ್ತಿಕೊಂಡಿದೆ.

ಜಗದೀಶ್ ಅವರು ಗೋಲ್ಡ್ ಸುರೇಶ್ ಬಳಿ ಹೆಣ್ಣು ಮಕ್ಕಳ ಬಗ್ಗೆ ಮುಖ್ಯವಾಗಿ ಹಂಸ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಒಂದು ಕೆಟ್ಟ ಪದ ಉಪಯೋಗಿಸಿದ್ದಾರೆ. ಇದನ್ನು ಸಹಿಸಿಕೊಳ್ಳದ ಸುರೇಶ್, ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ಕಲಿರಿ, ಅವರ ಬಗ್ಗೆ ಹಾಗೆ ಹೇಳಬೇಡ, ನನ್ ಹತ್ರ ಹೀಗೆಲ್ಲ ಹೇಳಬೇಡ ಎಂದು ಹೇಳಿದ್ದಾರೆ. ಇಲ್ಲಿಂದ ಜಗಳ ಹತ್ತಿಕೊಂಡಿದೆ. ಜಗದೀಶ್, ಹಂಸ ಕುರಿತು ಹೇಳಿರುವ ಆ ಒಂದು ವರ್ಡ್ ಮನೆಯವರ ತನಕ ಮುಟ್ಟಿದೆ.

ಆಗ ಇಡೀ ಮನೆಯ ಹೆಣ್ಣು ಮಕ್ಕಳು ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಾದ ಬಿಗ್ ಬಸ್ ಮಧ್ಯ ಪ್ರವೇಶಿ, ಕುಳಿತುಕೊಳ್ಳಲು ಹೇಳುತ್ತಾರೆ. ಜಗದೀಶ್ ಆಡಿದ ಮಾತಿನ ಬಗ್ಗೆ ಬಿಗ್​ಬಾಸ್ ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಅಭಿಪ್ರಾಯವನ್ನು ಕೇಳಿದೆ. ಈ ಸಂದರ್ಭ ಮಾತನಾಡಿದ ಗೌತಮಿ ಅವರು, ‘ಜಗದೀಶ್ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದಿದ್ದಾರೆ. ಅವರಿಗೆ ಹೆಣ್ಮಕ್ಕಳ ಬಗ್ಗೆ ಬೇಸಿಕ್ ಗೌರವ ಗೊತ್ತಿಲ್ಲ,’ ಎಂದು ಹೇಳಿದ್ದಾರೆ. ಗೌತಮಿ ಮಾತ್ರವಲ್ಲದೆ ಮನೆಯಲ್ಲಿದ್ದ ಸಹಸ್ಪರ್ಧಿಗಳೆಲ್ಲ ಲಾಯರ್ ಜಗದೀಶ್ ಅವರ ವರ್ತನೆಯನ್ನು ಖಂಡಿಸಿದ್ದು ಇದು ಸರಿಯಲ್ಲ ಎಂದೇ ಹೇಳಿದ್ದಾರೆ.

ಅದರಲ್ಲೂ ಭವ್ಯಾ ಗೌಡ, ‘ಇವರನಿಗೆ ತಿಂದಿದ್ದ ಅನ್ನ ಜೀರ್ಣ ಆಗಬೇಕು ಅಂದ್ರೆ ನಮ್ಮ ಎಲ್ಲರ ಹತ್ತರ ಜಗಳ ಆಡಬೇಕು ಅನಿಸುತ್ತೆ. ಅವರು ತಮ್ಮನ್ನ ತಾವು ಸೇವ್ ಮಾಡಿಕೊಳ್ಳಲು ಜೋರು ಜೋಯು ವಾಯ್ಸ್​ ಮಾಡಿ ಮೈಮೇಲೆ ಬರುತ್ತಾರೆ. ಆಗ ನಾವು ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳಲು 5-6 ಸಲ ತಳ್ಳಿದ್ದೇವೆ. ಆ ವ್ಯಕ್ತಿ ಇಷ್ಟು ದಿನ ಮನೆಯಲ್ಲಿರುವುದು ಬೇಡ, ಕಳುಹಿಸಿ ಎಂದು ರಿಕ್ವೆಸ್ಟ್ ಮಾಡ್ತಾ ಇದ್ವಿ. ಇವತ್ತು ನಮ್ಮೆಲ್ಲರ ರಿಕ್ವೆಸ್ಟ್ ಆ ವ್ಯಕ್ತಿ ಮನೆಯಲ್ಲಿರಬೇಕು. ಪ್ರತಿ ದಿನ ನಾನು ಕಂಟೆಂಟ್ ಕೊಡ್ತೇನೆ ಅಂತ ಹೇಳುತ್ತಾರೆ. ಅವರು ಕೊಡುವ ಕಂಟೆಂಟ್ ಕರ್ನಾಟಕ ಜನತೆ ನೋಡ್ಬೇಕು, ಆ ವ್ಯಕ್ತಿಗೆ ಎಂತಾ ವ್ಯಕ್ತಿತ್ವ ಇದೆ ಎಂಬುದನ್ನು ಇಡೀ ಕರ್ನಾಟಕ ನೋಡಬೇಕು,’ ಎಂದು ಹೇಳಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಅವರು, ‘ದಯವಿಟ್ಟು ಆ ಮನುಷ್ಯನ ಹೊರಗಡೆ ಕಳುಹಿಸಬೇಡಿ, ಆಟ ಈಗ ಶುರುವಾಗುತ್ತೆ. ಪ್ರೊವೋಕ್ ಮಾಡಿಯೇ ಈ ಮನೆಯವರನ್ನು ವಿಲನ್ ಆಗಿ ತೋರಿಸ್ತೀನಿ ಜಗತ್ತಿನ ಎದುರುಗಡೆ ನಾನೊಬ್ಬ ಪಾಪದವನಾಗಿ, ನಾನೊಬ್ಬ ಕ್ರಶ್ ಆಗಿ ಕಾಣಿಸಿಕೊಳ್ಳುತ್ತೇನೆ ಎಂಬುದಾದ್ರೆ ಈ ಮನುಷ್ಯಾನ ಬಾಯಿಯಲ್ಲಿ ಯಾವ ಪದ ಬಂದಿದೆ ಎಂಬುದು ಕರ್ನಾಟಕದ ಜನತೆ ನೋಡಬೇಕು,’ ಎಂದು ಹೇಳಿದ್ದಾರೆ.

ಜಗದೀಶ್-ರಂಜಿತ್ ಮನೆಯಿಂದ ಹೊರಕ್ಕೆ?:

ಈ ಎಲ್ಲವನ್ನೂ ನೋಡಿ ಹೆಣ್ಮಕ್ಕಳ ಬಗ್ಗೆ ಈ ರೀತಿ ಪದ ಬಳಸಿದ್ದನ್ನು ಸಹಿಸುವುದಿಲ್ಲ ಎಂದು ಬಿಗ್​ ಬಾಸ್ ಹೇಳಿದೆ. ಜಗದೀಶ್ ಹಾಗೂ ಅವರನ್ನು ತಳ್ಳಿದ ರಂಜಿತ್ ಅವರು ಮನೆಯಿಂದ ಹೊರಗೆ ಹೋಗಬೇಕೆಂದು ಬಿಗ್​ಬಾಸ್ ಆದೇಶಿಸಿದ್ದಾರೆ. ಇಲ್ಲಿಗೆ ಗುರುವಾರದ ಎಪಿಸೋಡ್ ಕೊನೆಯಾಗಿದೆ. ಆದರೆ ಇವರಿಬ್ಬರು ಮನೆಯಿಂದ ಹೊರಗೆ ಹೋಗುತ್ತಾರಾ ಅಥವಾ ಇಬ್ಬರನ್ನು ಕೊನೆ ಘಳಿಗೆಯಲ್ಲಿ ​ಉಳಿಸಿಕೊಳ್ತಾರಾ ಎಂಬುದು ಇಂದಿನ ಎಪಿಸೋಡ್​ನಲ್ಲಿ ತಿಳಿದುಬರಲಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್​ನಿಂದ ಸೇವ್ ಮಾಡೋದ್ರಲ್ಲೂ ಗುಂಪುಗಾರಿಕೆ?