Monday, 28th October 2024

BBK 11: ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಮತ್ತೋರ್ವ ಸ್ಪರ್ಧಿ: ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರಿಂದ ನಾಲ್ಕನೇ ವಾರಕ್ಕೆ ಹಂಸ ಪ್ರತಾಪ್ ಹೊರಬಂದಿದ್ದಾರೆ. ಭಾನುವಾರದ ಸಂಚಿಕೆ ಇಂದು ಮುಂದುವರೆದಿದ್ದು, ಇದರಲ್ಲಿ ಹಂಸ ಅವರು ಎಲಿಮಿನೇಟ್ ಆಗಿದ್ದಾರೆ. ನಾಲ್ಕನೇ ವಾರದ ವೀಕೆಂಡ್ ಕಿಚ್ಚ ಸುದೀಪ್ ಇಲ್ಲದೆ ಕೊನೆಗೊಂಡಿತು. ಶನಿವಾರ ಯೋಗರಾಜ್ ಭಟ್ ಬಂದು ಪಂಚಾಯಿತಿ ನಡೆಸಿದರೆ, ಭಾನುವಾರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬಂದಿದ್ದರು. ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು.

ಸೃಜನ್ ಹಾಗೂ ಭಟ್ರು 7 ಮಂದಿಯನ್ನು ಮನೆಯಿಂದ ಸೇಫ್ ಮಾಡಿದರು. ಆದರೆ, ಮನೆಯಿಂದ ಹೊರಹೋಗುವ ಸ್ಪರ್ಧಿಯನ್ನು ಬಿಗ್ ಬಾಸ್ ಅಂತಿಮ ಮಾಡುತ್ತಾರೆ ಎಂದು ಹೇಳಿ ಸೃಜನ್ ನಿರ್ಗಮಿಸಿದರು. ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸಾ ನೇರ ನಾಮಿನೇಟ್ ಆಗಿದ್ದರು. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ಕೂಡ ನಾಮಿನೇಟ್ ಆಗಿದ್ದರು.

ಅಂತಿಮವಾಗಿ ಡೇಂಜರ್ ಝೋನ್​ನಲ್ಲಿ ಹಂಸ ಹಾಗೂ ಮೋಕ್ಷತಾ ಪೈ ಇದ್ದರು. ಇವರಿಬ್ಬರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ಜೋರಾಗಿತ್ತು. ಆಗ ಮನೆಯೊಳಗೆ ಎರಡು ಕಾರುಗಳು ಬಂದವು. ಅದರಲ್ಲಿ ಒಂದು ಕಾರಿನ ಪಕ್ಕ ಹಂಸ, ಮತ್ತೊಂದು ಕಾರಿನ ಪಕ್ಕ ಮೋಕ್ಷಿತಾ ನಿಂತರು. ಇಬ್ಬರು ಕಾರಿನೊಳಗೆ ಕುಳಿತುಕೊಂಡು ಕಾರುಗಳು ಗಾರ್ಡನ್ ಏರಿಯಾದಲ್ಲಿ ಒಂದಷ್ಟು ಸಮಯ ರೌಂಡ್ ಹಾಕಿ, ಎರಡೂ ಕಾರು ಹೊರ ಹೋಯಿತು. ನಂತರ ಮೋಕ್ಷಿತಾ ಇದ್ದ ಕಾರು ಪುನಃ ಒಳಗೆ ಬಂದಿದೆ.

ಇನ್ನೇನು ಈ ಪ್ರಕ್ರಿಯೆ ಅಂತಿಮಗೊಳ್ಳಬೇಕು ಎಂಬೊತ್ತಿಗೆ ಭಾನುವಾರದ ಸಂಚಿಕೆಯನ್ನು ಕೊನೆಗೊಳಿಸಲಾಯಿತು. ಹೀಗಾಗಿ ಇಂದು ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದ ಹಂಸ ಬಿಗ್ ಬಾಸ್​ನಿಂದ ಹೊರಬಂದಿದ್ದಾರೆ. ಕ್ಯಾಪ್ಟನ್ ಆಗಿದ್ದಾಗ ಇವರು ತೆಗೆದುಕೊಂಡ ಒಂದಷ್ಟು ನಿರ್ಧಾರಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಜಗದೀಶ್ ಅವರೊಂದಿಗೆ ಕೆಲ ಸಮಯ ಆತ್ಮೀಯವಾಗಿದ್ದರು. ಜಗದೀಶ್ ಅವರು ಹಂಸ ಮೇಲೆ ಅವಹೇಳನಕಾರಿ ಪದ ಬಳಸಿದಾಗ ಹಂಸ ಆಕ್ರೋಶ ವ್ಯಕ್ತಪಡಿಸಿದ್ದರು.

BBK 11: ಎಲ್ಲ ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿದ ಬಿಗ್ ಬಾಸ್: ದೊಡ್ಮನೆಯಲ್ಲಿ ಏನಾಯಿತು?