Wednesday, 23rd October 2024

BBK 11: ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..: ಚೈತ್ರಾಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೂರನೇ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಮನೆ ಮಂದಿಯ ಬೆಂಡೆತ್ತಿದ್ದಾರೆ. ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಿ ಆಗಿದೆ, ಆದರೆ ನೀವು ಮಾಡಿದ್ದು ಎಷ್ಟು ಸರಿ ಎಂಬ ವಿಷಯವನ್ನು ಹಿಡಿದುಕೊಂಡು ಸುದೀಪ್ ವಾರದ ಕತೆಯಲ್ಲಿ ಎಲ್ಲ ಸ್ಪರ್ಧಿಗಳ ಮೈಚಳಿ ಬಿಡಿಸಿದ್ದಾರೆ. ಅದರಲ್ಲೂ ಚೈತ್ರಾ ಕುಂದಾಪುರ ಆಡಿದ ಮಾತಿಗೆ ಕೆಂಡಾಮಂಡಲರಾದ ಕಿಚ್ಚ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ವಾರದ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಹಾಗೂ ಜಗದೀಶ್ ಮಧ್ಯೆ ಕಿರಿಕ್ ಆಗಿತ್ತು. ಜಗದೀಶ್ ಅವರು, ಚೈತ್ರಾ ಮೇಲೆ 28 ಕೇಸ್ ಇದೆ ಎಂದು ಹೇಳುವ ಮೂಲಕ ಜಗಳ ಶುರುಮಾಡಿಕೊಂಡಿದ್ದರು. ಇದನ್ನು ಕೇಳಿದ ಚೈತ್ರಾ, ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣ ಎದುರು ಬಂದು ಕೇಸ್ ಬಗ್ಗೆ ಮಾತನಾಡಲಿ’ ಎಂದು ಚೈತ್ರಾ ಅವರು ಸವಾಲು ಹಾಕಿದ್ದರು.

ವಾರದ ಕತೆಯಲ್ಲಿ ಸುದೀಪ್ ಇದೇ ವಿಚಾರವನ್ನು ಎತ್ತಿಕೊಂಡಿದ್ದಾರೆ. ‘ಚೈತ್ರಾ ಅವರೆ ನೀವು ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಎನ್ನುತ್ತೀರಿ. ಅದಕ್ಕೇ ನಾನೂ ತುಂಬ ಗೌರವಿಸುತ್ತೀನಿ. ಆದರೆ ಹೆಣ್ಣು ಮಕ್ಕಳು ಪುರಷರಿಗೆ ಗೌರವ ಕೊಡಬಾರದು ಅಂತ ಇದೆಯಾ? ನಿಮ್ಮಿಂದ ಒಂದು ಮಾತು ಬರತ್ತೆ. ಒಬ್ಬ ಅಪ್ಪನಿಗೆ ಹುಟ್ಟಿದ್ದರೆ, ಈಗ ನೀವು ಅವರ ತಾಯಿಗೆ ತಾನೆ ಬೈದ್ರಿ? ಒಬ್ಬ ಅಪ್ಪನಿಗೆ ಹುಟ್ಟಿದ್ರಿ ಅಂದರೆ ಯಾವನೂ ಅಪ್ಪನಿಗೆ ಬಯ್ಯೋದಲ್ಲ ತಾಯಿಗೆ ಬಯ್ತಾ ಇರೋದು. ಇಷ್ಟೆಲ್ಲ ಹೇಳಿಕೊಂಡು ಹೆಣ್ಣು ಮಗುವಿಗೆ ನೀವು ಗೌರವ ಕೊಡಿ ಅನ್ನುತ್ತಿದ್ದೀರಾ?’ ಎಂದು ಸುದೀಪ್ ಅವರು ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು ಸುದೀಪ್ ಅವರು ಉಗ್ರಂ ಮಂಜು ಮತ್ತು ಮಾನಸಾ ತುಕಾಲಿ ವಿರುದ್ಧವೂ ಗರಂ ಆಗಿದ್ದಾರೆ. ಒಬ್ಬರು ಮತ್ತೊಬ್ಬ ಸ್ಪರ್ಧಿ ಮುಂದೆ ಚಪ್ಪಲ್ ಎತ್ತಿ ಬಿಸಾಡುತ್ತಾರೆ ಎಂದರೆ ಅದು ಸರೀನಾ? ಎಂದು ಮಂಜುಗೆ ಪ್ರಶ್ನೆ ಮಾಡಿದ್ದಾರೆ. ಮಾತುಗಳಿಂದಲೇ ಒಬ್ಬ ವ್ಯಕ್ತಿ ಈ ಮನೆಯಿಂದ ಹೊರಗೆ ಹೋಗಿದ್ದಾರೆ ಅಂದ್ರೆ ನೀವು ಆಡಿರೋ ತಪ್ಪು ಮಾತುಗಳನ್ನ ಇಟ್ಕೊಂಡು ನಿಮ್ಮನ್ನ ಇನ್ನೂ ಯಾಕೆ ಒಳಗೆ ಇಟ್ಟುಕೊಂಡಿರಬೇಕು ಎಂದು ಮಾನಸ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

BBK 11: ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್: ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಡಿದ ಸುದೀಪ್