Friday, 25th October 2024

ಕೊಳವೆ ಬಾವಿಗೆ ಬಿದ್ದಿದ್ದ ಮಗು ಪ್ರಹ್ಲಾದ್​ ಸಾವು

ನಿವಾರಿ : ಅವಿರತ ಕಾರ್ಯಾಚರಣೆ (90 ಗಂಟೆ) ಹೊರತಾಗಿಯೂ ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವನ್ನಪ್ಪಿದೆ.

3 ವರ್ಷದ ಮಗು ಪ್ರಹ್ಲಾದ್​ ತೆರೆದ ಕೊಳವೆಬಾವಿ ಬಿದ್ದಿದ್ದ. ಪ್ರಹ್ಲಾದ್​ ರಕ್ಷಣೆಗೆ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ಸಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.

ಬುಧವಾರ ಬೆಳಗ್ಗೆ ಬೋರ್‌ವೆಲ್‌ನಲ್ಲಿ ಬಿದ್ದ ಮಗುವನ್ನು ಸತತ ಕಾರ್ಯಾಚರಣೆ ಬಳಿಕ ಭಾನುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಹೊರತೆಗೆಯಲಾಗಿತ್ತು. ನಂತರ ನಿವಾರಿಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಮಗು ಪ್ರಹ್ಲಾದ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.