Sunday, 8th September 2024

ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅಮಾನತು ಆದೇಶ ವಾಪಸ್

ವದೆಹಲಿ: ಎಎಪಿ ಸಂಸದ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರ ಅಮಾನತ ಆದೇಶವನ್ನು ಹಿಂಪಡೆಯಲಾಗಿದೆ.

ಅಮಾನತನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ಬಳಿ ಮನವಿ ಮಾಡಿದ್ದೆ. ರೋಬ್ಬರಿ 115 ದಿನಗಳ ಬಳಿಕ ಅಮಾನತು ಕೊನೆಗೊಂಡಿದೆ. ಈ ಅವಧಿಯಲ್ಲಿ ಹಲವರು ಪ್ರೀತಿ ಮತ್ತು ಧೈರ್ಯ ತುಂಬಿದ್ದೀರಿ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಅಮಾನತಿನಲ್ಲಿರುವಾಗ ಸಂಸತ್ತಿನ ಒಳಗೆ ನಿಮ್ಮ (ಜನರ) ಪ್ರಶ್ನೆಗಳನ್ನು ಕೇಳಲು ಮತ್ತು ಸದನದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ ಎಂದು ವಿಡಿಯೊ ಸಂದೇಶದಲ್ಲಿ ಜನರ ಕ್ಷಮೆ ಕೋರಿದ್ದಾರೆ

ಸವಲತ್ತುಗಳ ಉಲ್ಲಂಘನೆಯ ಆರೋಪದ ಮೇರೆಗೆ ರಾಘವ್ ಛಡ್ಡಾ ಅವರನ್ನು ರಾಜ್ಯಸಭೆಯಿಂದ ಆಗಸ್ಟ್‌ನಲ್ಲಿ ಅಮಾನತುಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!