Thursday, 19th September 2024

ಮಾ.13ರಂದು ದೇಶಾದ್ಯಂತ ರೈಲು ತಡೆ ಚಳವಳಿ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಳೆದ ಶನಿವಾರ 100 ದಿನ ಪೂರೈಸಿದೆ.

ಇದೇ ವೇಳೆ ರೈತರು ದೇಶಾದ್ಯಂತ ಮಾರ್ಚ್ 13 ರಂದು ದೇಶಾದ್ಯಂತ ರೈಲು ತಡೆ ಚಳವಳಿ ನಡೆಸಲು ರೈತ ಮುಖಂಡರು ನಿರ್ಧರಿಸಿ ದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರೈತ ನಾಯಕ ದರ್ಶನ್ ಪಾಲ್ ಅವರು, ಮಾ.13 ರಂದು ದೇಶಾದ್ಯಂತ ರೈಲು ತಡೆ ಮಾಡಲಾಗು ವುದು ಎಂದು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳಿಂದ ರೈತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ. ಕಾರ್ಪೊರೇಟ್ ಕಂಪನಿ ಗಳಿಗೆ ಅನುಕೂಲವಾಗಲಿದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *