ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Electric Shock: ಕಾಡು ಪ್ರಾಣಿ ಹಾವಳಿ ತಡೆಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ 7 ಜಾನುವಾರು ಸಾವು

Electric Shock: ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗುಲಿ ಏಳು ಜಾನುವಾರುಗಳು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಸಮೀಪದ ಗದ್ದೆಯ ಬಳಿ ಜರುಗಿದೆ. ಸುರೇಖಾ ಫಡ್ನೇಕರ್ ಎಂಬುವವರಿಗೆ ಸೇರಿದ ಎರಡು ಕೋಣ ಹಾಗೂ ಐದು ಎಮ್ಮೆ ಸೇರಿ ಒಟ್ಟು ಏಳು ಜಾನುವಾರು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಕಾರವಾರದಲ್ಲಿ ವಿದ್ಯುತ್ ತಂತಿ ತಗುಲಿ 7 ಜಾನುವಾರುಗಳ ಸಾವು

ಸಾಂದರ್ಭಿಕ ಚಿತ್ರ.

Profile Siddalinga Swamy Jun 4, 2025 7:49 PM

ಕಾರವಾರ: ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗುಲಿ (Electric Shock) ಏಳು ಜಾನುವಾರುಗಳು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಸಮೀಪದ ಗದ್ದೆಯ ಬಳಿ ಜರುಗಿದೆ. ಸುರೇಖಾ ಫಡ್ನೇಕರ್ ಎಂಬುವವರಿಗೆ ಸೇರಿದ ಎರಡು ಕೋಣ ಹಾಗೂ ಐದು ಎಮ್ಮೆ ಸೇರಿ ಒಟ್ಟು ಏಳು ಜಾನುವಾರು ಸಾವನ್ನಪ್ಪಿವೆ. ಸುರೇಖಾ ಫಡ್ನೇಕರ್ ಅವರು ಮಂಗಳವಾರ ತಮ್ಮ ಜಾನುವಾರುಗಳನ್ನು ಮೇಯುವುದಕ್ಕಾಗಿ ಗದ್ದೆಗೆ ಬಿಟ್ಟಿದ್ದರು. ಜಾನುವಾರುಗಳು ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ ಅಲ್ಲೇ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎಲ್ಲಾ ಏಳು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಐಪಿಎಲ್‌ ಸಂಭ್ರಮಾಚರಣೆ ವೇಳೆ ಅಪಘಾತ: ಬೈಕ್‌ಗಳು ಡಿಕ್ಕಿಯಾಗಿ ಯುವಕ ಸಾವು

ಶಿವಮೊಗ್ಗ: ನಿನ್ನೆ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ (IPL) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ತಂಡವನ್ನು 6 ರನ್ ಗಳಿಂದ ಸೋಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ನಿನ್ನೆ ರಾತ್ರಿಯಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ (Celebration) ಜೋರಾಗಿದ್ದು, ಸಂಭ್ರಮಾಚರಣೆಯ ವೇಳೆ 2 ಬೈಕುಗಳು (Bikes crash) ಮುಖಾಮುಖಿ ಡಿಕ್ಕಿ ಹೊಡೆದು (Road Accident) ಓರ್ವ ಯುವಕ ಸಾವನ್ನಪ್ಪಿರುವ (Death) ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ.

ಶಿವಮೊಗ್ಗದಲ್ಲಿ RCB ಗೆದ್ದ ಖುಷಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಎಲ್ಲೆಡೆ ಪಟಾಕಿ ಸಿಡಿಸಿ, ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಸೆಲೆಬ್ರೇಶನ್ ವೇಳೆ ಆರ್ಸಿಬಿ ಅಭಿಮಾನಿಯೊಬ್ಬ ಸಾವನಪ್ಪಿದ್ದಾನೆ. ಬೈಕ್‌ನಲ್ಲಿ ಸೆಲೆಬ್ರೇಶನ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. 2 ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಸಾವನಪ್ಪಿದ್ದಾನೆ. ಅಪಘಾತದಲ್ಲಿ ಅಭಿ ಎನ್ನುವ ಯುವಕ ದುರ್ಮರಣ ಹೊಂದಿದ್ದಾನೆ. ಘಟನೆ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಬೈಕ್‌ಗಳು ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

ಬೆಂಗಳೂರು: ಬೆಂಗಳೂರಿನ (Bengaluru news) ಹೃದಯ ಭಾಗದಲ್ಲಿ ಒಂದು ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು (bike riders) ಸ್ಥಳದಲ್ಲೇ ಸಾವನ್ನಪ್ಪಿರುವ (Death) ಘಟನೆ ನಡೆದಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ಲೈಓವರ್‌ನಲ್ಲಿ ಎರಡು ಬೈಕುಗಳ ನಡುವೆ ಡಿಕ್ಕಿಯಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕಾಶ್ ಹಾಗೂ ಅಫ್ಜಲ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅತಿ ವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬೈಕ್‌ಗಳು ಗುದ್ದಿಕೊಂಡ ತೀವ್ರತೆಗೆ ಇಬ್ಬರೂ ಚಿಮ್ಮಿ ರಸ್ತೆಗೆ ಬಿದ್ದಿದ್ದು, ತಲೆ ನೆಲಕ್ಕೆ ಅಪ್ಪಳಿಸಿದೆ. ಹೆಲ್ಮೆಟ್‌ ಧರಿಸಿರಲಿಲ್ಲದ ಕಾರಣ ಬಲವಾಗಿ ಏಟು ಬಿದ್ದು ಇಬ್ಬರೂ ಮರಣ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Fake currency notes: ಮಾನ್ವಿಯಲ್ಲಿ ಖೋಟಾ ನೋಟು ಜಾಲ ಪತ್ತೆ; 10 ಆರೋಪಿಗಳ ಬಂಧನ