ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Firing Case: ಹೋಳಿ ಹಬ್ಬದಂದು ಅಪ್ಪಿಕೊಳ್ಳಲು ನಿರಾಕರಿಸಿದ ಬಿಜೆಪಿ ನಾಯಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ !

ಹೋಳಿ ಹಬ್ಬದಂದು (ಮಾರ್ಚ್ 14) ಮೊರಾದಾಬಾದ್‌ನ ಕಟ್ಘರ್ ಬಳಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಬ್ಬದ ಸಮಯದಲ್ಲಿ ಕುಡಿದ ಅಮಲಿನಲ್ಲಿದ್ದ ಯುವಕನನ್ನು ಅಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಬಿಜೆಪಿ ಬೂತ್ ಅಧ್ಯಕ್ಷ ಸಂಜಯ್ ಕುಮಾರ್ ಆರ್ಯ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಅಪ್ಪಿಕೊಳ್ಳಲು ನಿರಾಕರಿಸಿದ್ದಕ್ಕೆ ಬಿಜೆಪಿ ನಾಯಕನ ಮೇಲೆ ಫೈರಿಂಗ್‌!

ವೈರಲ್‌ ವಿಡಿಯೋ

Profile Vishakha Bhat Mar 16, 2025 10:13 AM

ಲಖನೌ: ಹೋಳಿ ಹಬ್ಬದಂದು (ಮಾರ್ಚ್ 14) ಮೊರಾದಾಬಾದ್‌ನ ಕಟ್ಘರ್ (Firing Case) ಬಳಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಬ್ಬದ ಸಮಯದಲ್ಲಿ ಕುಡಿದ ಅಮಲಿನಲ್ಲಿದ್ದ ಯುವಕನನ್ನು ಅಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಬಿಜೆಪಿ ಬೂತ್ ಅಧ್ಯಕ್ಷ ಸಂಜಯ್ ಕುಮಾರ್ ಆರ್ಯ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಕೋಪಗೊಂಡ ಯುವಕ ಪಿಸ್ತೂಲನ್ನು ತೆಗೆದುಕೊಂಡು ಆರ್ಯ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಅವರಿಗೆ ತಗುಲಲಿಲ್ಲ, ಬದಲಾಗಿ ಸಂಜಯ್ ಕುಮಾರ್ ಅವರ ಪಕ್ಕದಲ್ಲಿ ನಿಂತಿದ್ದ ಅವರ ಸ್ನೇಹಿತ ಅಕ್ಷಯ್ ಕಾಲಿಗೆ ತಗುಲಿ ತೀವ್ರ ಗಾಯವಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಫೂಲ್ವತಿ ಕನ್ಯಾ ಇಂಟರ್ ಕಾಲೇಜಿನ ಬಳಿ ಸಂಜಯ್ ಕುಮಾರ್ ಆರ್ಯ ತನ್ನ ಸ್ನೇಹಿತ ಅಕ್ಷಯ್ ಜೊತೆ ಹೋಳಿ ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಹಬ್ಬದ ಸಮಯದಲ್ಲಿ, ಸ್ಥಳೀಯ ನಿವಾಸಿ ಅಭಿಷೇಕ್ ಠಾಕೂರ್ ಕುಡಿದ ಮತ್ತಿನಲ್ಲಿ ಸ್ಥಳಕ್ಕೆ ಬಂದು ಆರ್ಯನನ್ನು ಅಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಆರ್ಯ ಮತ್ತು ಅವನ ಸ್ನೇಹಿತರು ಹೋಳಿ ಆಚರಿಸಿದ ನಂತರ ಸ್ನಾನ ಮಾಡಿದ್ದರಿಂದ, ಅವರು ಅವನ ವಿನಂತಿಯನ್ನು ನಿರಾಕರಿಸಿದರು. ಈ ನಿರಾಕರಣೆಯಿಂದ ಕೋಪಗೊಂಡ ಠಾಕೂರ್, ಸ್ಥಳದಿಂದ ಹೊರಟು ಪಿಸ್ತೂಲ್ ಹಿಡಿದು ಹಿಂತಿರುಗಿದ್ದಾನೆ. ನಂತರ ಸ್ಥಳಕ್ಕೆ ಬಂದು ಗುಂಡು ಹಾರಿಸಿದ್ದಾನೆ. ಗುಂಡು ಸಂಜಯ್ ಕುಮಾರ್ ಆರ್ಯ ಅವರ ಸ್ನೇಹಿತ ಅಕ್ಷಯ್ ಕಾಲಿಗೆ ತಗುಲಿದೆ. ಅಷ್ಟಕ್ಕೇ ಸುಮ್ಮನಾಗದ ಆರೋಪಿ ಪಿಸ್ತೂಲಿನ ಹಿಂಭಾಗದಿಂದ ಸಂಜಯ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.



ಪ್ರತ್ಯಕ್ಷದರ್ಶಿಗಳು ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ಅದರಲ್ಲಿ ಠಾಕೂರ್ ಬಂದೂಕನ್ನು ಝಳಪಿಸುತ್ತಾ ದಾಳಿ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕತ್ಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬರುವ ಮೊದಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಅದ್ಯ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.