Violent Arrest: ಭಾರತೀಯ ಮೂಲದ ವ್ಯಕ್ತಿ ಮೇಲೆ ಆಸ್ಟ್ರೇಲಿಯಾ ಪೊಲೀಸರು ದೌರ್ಜನ್ಯ- ಮೆದುಳಿಗೆ ತೀವ್ರ ಹಾನಿ
ಆಸ್ಟ್ರೇಲಿಯ ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ಗೌರವ್ ಕುಂಡಿ ಎಂಬವರನ್ನು ಬಂಧಿಸಲು (Violent Arrest) ಯತ್ನಿಸಿದ್ದು, ಗೌರವ್ ಅವರಿಗೆ ರಾಯಲ್ ಅಡಿಲೇಡ್ ಆಸ್ಪತ್ರೆಯಲ್ಲಿ ಜೀವರಕ್ಷಕ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನದ ಸಮಯದಲ್ಲಿ ಅತಿಯಾದ ಬಲಪ್ರಯೋಗ ನಡೆಸಿರುವುದರಿಂದ ಅವರ ಮೆದುಳು ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಕ್ಯಾನ್ಬೆರಾ: ಗಂಡ ಹೆಂಡತಿ ನಡುವಿನ ಜಗಳವನ್ನು ಕೌಟುಂಬಿಕ ಹಿಂಸಾಚಾರ (Domestic violence) ಎಂದು ತಪ್ಪಾಗಿ ಅರ್ಥೈಸಿ ಆಸ್ಟ್ರೇಲಿಯ ಪೊಲೀಸರು (Australia police) ಭಾರತೀಯ ಮೂಲದ (Indian Origin) ಗೌರವ್ ಕುಂಡಿ (42) ಎಂಬವರನ್ನು ಹಿಂಸಾತ್ಮಕವಾಗಿ ಬಂಧಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡ ಗೌರವ್ ಅವರನ್ನು ರಾಯಲ್ ಅಡಿಲೇಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಟ್ರೇಲಿಯಾದ ಅಡಿಲೇಡ್ನ (Adelaide) ಪೂರ್ವ ಉಪನಗರದಲ್ಲಿ ಈ ಘಟನೆ ನಡೆದಿದೆ. ಬಂಧನದ ಸಮಯದಲ್ಲಿ ಅತಿಯಾದ ಬಲ ಪ್ರಯೋಗ ಮಾಡಿದ್ದರಿಂದ ಗೌರವ್ ಅವರ ಕುತ್ತಿಗೆ ಮತ್ತು ಮೆದುಳಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.
ಆಸ್ಟ್ರೇಲಿಯ ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ಗೌರವ್ ಕುಂಡಿ ಎಂಬವರನ್ನು ಬಂಧಿಸಲು ಯತ್ನಿಸಿದ್ದು, ಗೌರವ್ ಅವರಿಗೆ ರಾಯಲ್ ಅಡಿಲೇಡ್ ಆಸ್ಪತ್ರೆಯಲ್ಲಿ ಜೀವರಕ್ಷಕ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನದ ಸಮಯದಲ್ಲಿ ಅತಿಯಾದ ಬಲಪ್ರಯೋಗ ನಡೆಸಿರುವುದರಿಂದ ಅವರ ಮೆದುಳು ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗೌರವ್ ತಮ್ಮ ಪತ್ನಿ ಅಮೃತ್ಪಾಲ್ ಕೌರ್ ಅವರೊಂದಿಗೆ ಪೇನೆಹ್ಯಾಮ್ ರಸ್ತೆಯಲ್ಲಿ ಗುರುವಾರ ಮುಂಜಾನೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಆಸ್ಟ್ರೇಲಿಯ ಪೊಲೀಸರು ದಂಪತಿಯ ನಡುವಿನ ಜೋರಾದ ವಾದವನ್ನು ಕೇಳಿ ಕೌಟುಂಬಿಕ ಹಿಂಸಾಚಾರದ ಪ್ರಕರಣವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗೌರವ್ ಪತ್ನಿ ಹೇಳಿದ್ದೇನು?
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಗೌರವ್ ಪತ್ನಿ ಅಮೃತ್ಪಾಲ್ ಕೌರ್, ಪೊಲೀಸರು ಬಂಧಿಸುವಾಗ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಗೌರವ್ ಅಳುತ್ತಿದ್ದ. ಹೊರಗೆ ಹೋಗಿದ್ದ ನಾನು ಅವನನ್ನು ಹಿಂಬಾಲಿಸಿಕೊಂಡು ಬಂದಿದ್ದೆ. ಇಲ್ಲಿ ನೀನು ಏನು ಮಾಡುತ್ತಿದ್ದೀಯಾ, ಮನೆಗೆ ಹಿಂದಿರುಗೋಣ ಎಂದು ಹೇಳಿದೆ. ಸರಿಯಾಗಿಲ್ಲ ನೀನು ಯಾಕೆ ಕುಡಿದಿದ್ದೀಯಾ ಎಂದು ನಾನು ಆತನನ್ನು ಪ್ರಶ್ನಿಸಿದೆ. ಆಗ ಆತ ನನ್ನನ್ನು ದೂರಕ್ಕೆ ತಳ್ಳಿದ್ದ ಎಂದು ನೆನಪಿಸಿಕೊಂಡಿದ್ದಾಳೆ.
ಪೊಲೀಸರು ಆತ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ ಮತ್ತು ರಸ್ತೆಯಲ್ಲಿ ಕೌಟುಂಬಿಕ ಹಿಂಸೆ ನಡೆಯುತ್ತಿದೆ ಎಂದು ಭಾವಿಸಿದ್ದಾರೆ. ಅದು ಪೊಲೀಸರು ಮಾಡಿದ ತಪ್ಪು. ಗೌರವ್ ಕುಡಿದಿದ್ದ. ಅದಕ್ಕಾಗಿಯೇ ನನ್ನೊಂದಿಗೆ ಆತ ಜೋರಾಗಿ ಮಾತನಾಡುತ್ತಿದ್ದಾನೆ, ಬೇರೇನೂ ಅಲ್ಲ ಎಂದು ಕೌರ್ ತಿಳಿಸಿದ್ದಾಳೆ.
ಪೊಲೀಸರು ಗೌರವ್ ತಲೆಯನ್ನು ಕಾರಿಗೆ ಮತ್ತು ರಸ್ತೆಗೆ ತಾಗುವಂತೆ ಹೊಡೆದಿದ್ದಾರೆ. ಘಟನೆಯ ಆರಂಭದಲ್ಲಿ ನಾನು ಇದನ್ನು ವಿಡಿಯೊ ಕೂಡ ಮಾಡಿದ್ದೆ. ಆದರೆ ವಿಷಯ ಗಂಭೀರವಾದಾಗ ತಕ್ಷಣ ಅದನ್ನು ನಿಲ್ಲಿಸಿದೆ. ಪೊಲೀಸ್ ಅಧಿಕಾರಿ ಗೌರವ್ ಮೇಲೆ ಮಂಡಿಯೂರಿದ್ದಾಗ ನನಗೆ ಗಾಬರಿಯಾಯಿತು ಎಂದು ಹೇಳಿದ್ದಾಳೆ.
ಗೌರವ್ ಪ್ರಜ್ಞೆ ಕಳೆದುಕೊಳ್ಳುವ ಮೊದಲು ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅಳುತ್ತಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತನ ಮೆದುಳು ಮತ್ತು ಕುತ್ತಿಗೆಯ ನರಗಳಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಅವನ ಮೆದುಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಬಹುಶಃ ಅವನ ಮೆದುಳು ಕೆಲಸ ಮಾಡಿದರೆ ಅವನು ಎಚ್ಚರಗೊಳ್ಳಬಹುದು ಅಥವಾ ಎಚ್ಚರಗೊಳ್ಳದೇ ಇರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ಕೌರ್ ದುಃಖದಿಂದ ಹೇಳಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯ ಪೊಲೀಸ್ ಮುಖ್ಯಸ್ಥರು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB vs PBKS Final: ಪಂಜಾಬ್ ಗೆಲುವಿನ ಸುಳಿವು ನೀಡಿತೇ ಫೋಟೋಶೂಟ್?
ದಕ್ಷಿಣ ಆಸ್ಟ್ರೇಲಿಯ ಪೊಲೀಸ್ ಆಯುಕ್ತ ಗ್ರಾಂಟ್ ಸ್ಟೀವನ್ಸ್ ಅವರು ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಬೆಂಬಲಿಸಿದ್ದಾರೆ. ಪೊಲೀಸರು ಧರಿಸಿದ್ದ ಕೆಮರದಿಂದ ನಾವು ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಪೊಲೀಸರು ತಮ್ಮ ಜವಾಬ್ದಾರಿಯ ಪ್ರಕಾರ ವರ್ತಿಸಿದ್ದಾರೆ ಎಂದು ಅಹೇಳಿದ್ದಾರೆ. ಸಹಾಯಕ ಆಯುಕ್ತ ಜಾನ್ ಡಿಕಾಂಡಿಯಾ ಅವರು, ಅಧಿಕಾರಿಗಳು ಸೂಕ್ತವಾಗಿ ವರ್ತಿಸಿದ್ದಾರೆ. ಗೌರವ್ ಆ ಸಮಯದಲ್ಲಿ ಬಂಧನವನ್ನು ಹಿಂಸಾತ್ಮಕವಾಗಿ ವಿರೋಧಿಸುತ್ತಿದ್ದರು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಪ್ರಸ್ತುತ ತನಿಖೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.