Monday, 16th September 2024

ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಪಲ್ಟಿ: 60 ಪ್ರಯಾಣಿಕರಿಗೆ ಗಾಯ

ನೇಪಾಳ : ನೇಪಾಳದ ತ್ರಿವೇಣಿಯಿಂದ ಹಿಂದಿರುಗುತ್ತಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಪಲ್ಟಿಯಾಗಿದ್ದು, ಪರಿಣಾಮ 60 ಪ್ರಯಾಣಿಕರು ಗಾಯಗೊಂಡಿದ್ದಾರೆ.

ನೇಪಾಳದ ತ್ರಿವೇಣಿ ಧಾಮದಿಂದ ಹಿಂತಿರುಗುತ್ತಿದ್ದ ಗೋರಖ್‌ಪುರ ಜಿಲ್ಲೆಯ ಪಿಪಿಗಂಜ್ ಮತ್ತು ಕ್ಯಾಂಪಿರ್‌ಗಂಜ್‌ನಿಂದ ಬಸ್‌ನಲ್ಲಿ 70 ಭಕ್ತರು ಇದ್ದರು.

ಥುತಿಬರಿ ಗಡಿಯಿಂದ 500 ಮೀ ದೂರದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ನೇಪಾಳದ ನವಲ್ ಪರಾಸಿ ಜಿಲ್ಲೆಯ ಪೃಥ್ವಿ ಚಂದ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಪಾಳದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಗಾಯಗೊಂಡವರಿಗೆ ಸಹಾಯ ಮಾಡಲು ಅಧಿಕಾರಿಗಳನ್ನು ನೆರೆಯ ದೇಶಕ್ಕೆ ಕಳುಹಿಸಲಾಗಿದೆ.