ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಿಧವೆಯರನ್ನು ಇತರೆ ಮಹಿಳೆಯರಂತೆ ಗೌರವಿಸಿ : ಸಂಪಂಗಿ ಶ್ರೀನಿವಾಸ್

ವಿಧವೆಯರು ಎದುರಾಗಿ ಬಂದರೆ ಅಪಶಕುನವೆಂದು, ಮುಂಜಾನೆ ಎದ್ದು ವಿಧವೆಯರನ್ನು ನೋಡ ಬಾರದೆಂಬ ಮೂಢ ನಂಬಿಕೆಗಳನ್ನು ಬಿಟ್ಟು, ವಿಧವೆಯರನ್ನು ಸಹಾ ಮಹಿಳೆಯರಾಗಿ ಗೌರವಿಸಿ ಎಂದು ಕರೆ ನೀಡಿದರು.ಈ ತಾಲೂಕಿನಲ್ಲಿ ಸುಮಾರು ಇಪ್ಪತೆಂಟು ಸಾವಿರ ವಿಧವೆಯರಿದ್ದಾರೆ. ರಾಜ್ಯದಲ್ಲಿ ವಿಧವೆಯರಿಗೆ ಕೇವಲ ಎಂಟು ನೂರು ರೂಪಾಯಿಗಳ ಪೆನ್‌ಷನ್ ನೀಡುತ್ತಿದ್ದಾರೆ.

ವಿಧವೆಯರನ್ನು ಇತರೆ ಮಹಿಳೆಯರಂತೆ ಗೌರವಿಸಿ

ವಿಧವೆಯರನ್ನು ಸಹಾ ಮಹಿಳೆಯಾಗಿ ಗುರ್ತಿಸಿ, ಗೌರವಿಸಿ. ಮೂಢನಂಬಿಕೆಗಳನ್ನು ತ್ಯಜಿಸಿ ಎಂದು ರಾಷ್ಟ್ರೀಯ ಬ್ರಾಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಸಂಪಂಗಿ ಶ್ರೀನಿವಾಸ್ ತಿಳಿಸಿದರು.

Profile Ashok Nayak Jun 24, 2025 1:29 PM

ಗೌರಿಬಿದನೂರು : ವಿಧವೆಯರನ್ನು ಸಹಾ ಮಹಿಳೆಯಾಗಿ ಗುರ್ತಿಸಿ, ಗೌರವಿಸಿ, ಮೂಢನಂಬಿಕೆ ಗಳನ್ನು ತ್ಯಜಿಸಿ ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ಸಂಪಂಗಿ ಶ್ರೀನಿವಾಸ್ ತಿಳಿಸಿದರು.

ಅವರು ಸೋಮವಾರ ಡಾ.ಹೆಚ್.ಎನ್ ಕಲಾಭವನದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾದಳ ದವರಿಂದ ನಡೆದ ವಿಧವೆಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ವಿಶ್ವನಾಥಪುರ ರೈತರ ಹೋರಾಟಕ್ಕೆ ರಾಜ್ಯ ರೈತ ಸಂಘ ಪ್ರೊ.ನಂಜುಂಡಸ್ವಾಮಿ ಬಣ ಬೆಂಬಲ

ವಿಧವೆಯರು ಎದುರಾಗಿ ಬಂದರೆ ಅಪಶಕುನವೆಂದು, ಮುಂಜಾನೆ ಎದ್ದು ವಿಧವೆಯರನ್ನು ನೋಡ ಬಾರದೆಂಬ ಮೂಢ ನಂಬಿಕೆಗಳನ್ನು ಬಿಟ್ಟು, ವಿಧವೆಯರನ್ನು ಸಹಾ ಮಹಿಳೆಯರಾಗಿ ಗೌರವಿಸಿ ಎಂದು ಕರೆ ನೀಡಿದರು.ಈ ತಾಲೂಕಿನಲ್ಲಿ ಸುಮಾರು ಇಪ್ಪತೆಂಟು ಸಾವಿರ ವಿಧವೆಯರಿದ್ದಾರೆ. ರಾಜ್ಯದಲ್ಲಿ ವಿಧವೆಯರಿಗೆ ಕೇವಲ ಎಂಟು ನೂರು ರೂಪಾಯಿಗಳ ಪೆನ್‌ಷನ್ ನೀಡುತ್ತಿದ್ದಾರೆ. ನೆರೆಯ ಆಂಧ್ರದಲ್ಲಿ ನಾಲ್ಕು ಸಾವಿರ ನೀಡುತ್ತಿದ್ದಾರೆ, ಈ ರಾಜ್ಯದಲ್ಲಿ ಸಹಾ ಹೆಚ್ಚಿನ ಪೆನ್ಷನ್ ನೀಡಬೇಕೆಂದು ಆಗ್ರಹ ವ್ಯಕ್ತಪಡಿಸಿದರು.

ಪೌರಾಯುಕ್ತೆ ಗೀತ ಅವರು ಮಾತನಾಡಿ ವಿಧವೆಯರು ಸಮಾಜದಲ್ಲಿ ಧೈರ್ಯವಾಗಿ ಜೀವಿಸಬೇಕು. ಸರ್ಕಾರೀ ಸೌಲಭ್ಯಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿಆರ್ ನರಸಿಂಹಮೂರ್ತಿ, ಅಸೀಫ್, ಬಾಬು, ರವಿಕುಮಾರ ರೆಡ್ಡಿ, ಇಂತಿಯಾಜ್, ಮಹಬೂಬ್ ಬಾಷಾ, ಗೀತಮ್ಮ, ಅನಿತಮ್ಮ, ಮುಂತಾ ದವರು ಭಾಗವಹಿಸಿದ್ದರು.