Gruha Lakshmi Scheme: ಗೃಹಲಕ್ಷ್ಮಿ ಹಣದಿಂದ ಮಗಳಿಗೆ ಚಿನ್ನದ ಆಭರಣ ಕೊಡಿಸಿದ ತಾಯಿ, ವಿಡಿಯೊ ವೈರಲ್
ಈ ಹಿಂದೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣವನ್ನು ಸದುಪಯೋಗಪಡಿಸಿದ ಹಲವು ಮಹಿಳೆಯರ ಕುರಿತು ಸುದ್ದಿಯಾಗಿತ್ತು. ಇದೀಗ ದಾವಣಗೆರೆಯ ಮಹಿಳೆಯೊಬ್ಬರು ತಮ್ಮಲ್ಲಿ ಗೃಹಲಕ್ಷ್ಮಿ ಹಣದ ಮೂಲಕ ಮಗಳಿಗೆ ಚಿನ್ನ ಕೊಡಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ತಾಯಿ- ಮಗಳು

ದಾವಣಗೆರೆ: ಕರ್ನಾಟಕ ಸರ್ಕಾರ (Karnataka Government) ನೀಡುತ್ತಿರುವ ಗೃಹಲಕ್ಷ್ಮೀ ಯೋಜನೆಯಡಿ (Gruha Lakshmi Scheme) ತಾಯಿಯೊಬ್ಬರು ತಮ್ಮ ಮಗಳಿಗೆ ಚಿನ್ನ (Gold) ಖರೀದಿಸಿ ಉಡುಗೊರೆ ನೀಡಿದ್ದಾರೆ. ನೋಡಿದವರನ್ನು ಭಾವುಕಗೊಳಿಸುವ ಈ ವಿಡಿಯೊ ವೈರಲ್ (Viral video) ಆಗಿದೆ. ದಾವಣಗೆರೆಯ (davanagere news) ಒಂದು ಜ್ಯುವೆಲರ್ಸ್ನವರು ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ತಾಯಿ ಈ ಆಭರಣ ಮಳಿಗೆಯಲ್ಲಿ ಚಿನ್ನದ ಆಭರಣ ಖರೀದಿಸಿ ಮಗಳಿಗೆ ಕೊಡಿಸಿದ್ದಾರೆ.
ಈ ಹಿಂದೆ ಗೃಹಲಕ್ಷ್ಮಿ ಹಣವನ್ನು ಸದುಪಯೋಗಪಡಿಸಿದ ಹಲವು ಮಹಿಳೆಯರ ಕುರಿತು ಸುದ್ದಿಯಾಗಿತ್ತು. ಇದೀಗ ದಾವಣಗೆರೆಯ ಮಹಿಳೆಯೊಬ್ಬರು ತಮ್ಮಲ್ಲಿ ಗೃಹಲಕ್ಷ್ಮಿ ಹಣದ ಮೂಲಕ ಮಗಳಿಗೆ ಚಿನ್ನ ಕೊಡಿಸಿದ್ದಾರೆ ಎಂದು ದಾವಣೆಗೆರೆ ಮಂಡಿಪೇಟೆಯ ವಾದಿರಾಜ್ ಜ್ಯುವೆಲರ್ಸ್ನವರು ಒಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಚಿನ್ನ ಕೊಡಿಸಿದ ತಾಯಿ ಹಾಗೂ ಮಗಳು ಭಾವುಕರಾಗಿರುವುದನ್ನು ಗಮನಿಸಬಹುದಾಗಿದೆ.
ಗೃಹ ಲಕ್ಷ್ಮಿ ಹಣದಿಂದ ಚಿನ್ನ ಖರೀದಿಸಿದ ತಾಯಿ . ಬಂಗಾರ ಕೊಳ್ಳೋದು ಎಷ್ಟೋ ಬಡ ಹೆಣ್ಣುಮಕ್ಕಳ ಆಸೆ . ಗೃಹ ಲಕ್ಷ್ಮಿ ಯೋಜನೆ ಎಷ್ಟೋ ಬಡ ಹೆಣ್ಣುಮಕ್ಕಳ ದಾರಿ ದೀಪ .....
— Rohith (@rohitgowda1212) May 25, 2025
Kudos to @siddaramaiah pic.twitter.com/2fEfM176OL
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2000 ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯ ಸರಕಾರ ಜಾರಿಗೆ ತಂದ ಈ ಯೋಜನೆಯು ಮನೆಯ ಕೆಲವು ಮುಖ್ಯ ಬೇಡಿಕೆಗಳನ್ನು ಪೂರೈಸಲು ಮಹಿಳೆಯರಿಗೆ ಸಹಾಯ ಮಾಡುತ್ತಿದೆ. ಸರ್ಕಾರದ ಮಹಿಳಾ ಸಬಲೀಕರಣದ ಪ್ರಮುಖ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದ್ದು, ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉದ್ದೇಶಿಸಿದೆ. 2023ರ ಜನವರಿಯಲ್ಲಿ ಘೋಷಣೆಯಾಗಿದ್ದ ಈ ಯೋಜನೆಯು ಮಹಿಳೆಯರ ಜೀವನಮಟ್ಟವನ್ನು ಎತ್ತರಗೊಳಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಯ ಸಫಲತೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಹಿಂದೆ ಇದೇ ರೀತಿ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹತ್ವದ ಕೆಲಸಗಳನ್ನು ಮಾಡಿದವರ ಸುದ್ದಿಗಳು ಬಂದಿವೆ. ತಿಪಟೂರಿನ ನಗ್ಮಾಬಾನು ಎಂಬವರು ಮಗಳು ಸೈದಾ ಆಫೀಫಾ ಕಲಿಕೆಗಾಗಿ ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಕಂಪ್ಯೂಟರ್ ಕೊಡಿಸಿದ್ದರು. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ಗೃಹಲಕ್ಷ್ಮಿ ಯೋಜನೆಯಿಂದ ಬಂದ 24,000 ರೂ. ಹಣವನ್ನು ಕೂಡಿಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ನೀಡಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲಿನ ವಿಜಯಲಕ್ಷ್ಮೀ ಅವರು, ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮೂರಿನ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಉಡುಗೊರೆಯಾಗಿ ನೀಡಿದ್ದರು.