ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪ್ರತಿಭೆಗೆ ಪ್ರೋತ್ಸಾಹ ಅಗತ್ಯ : ನಗರಸಭಾ ಸದಸ್ಯ ಕಲೀಮ್

ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂದು ಆ ಸಮಯವನ್ನು ಕೇವಲ ಮಜಾ ಮಾಡಲು ವ್ಯರ್ಥ ಮಾಡಿಕೊಳ್ಳಬಾರದು. ಆಟ ಪಾಠಗಳ ಜೊತೆಗೆ ನಮ್ಮ ನಿಶ್ಚಿತ ಗುರಿಯನ್ನು ಸಾಧಿಸುವತ್ತ ಗಮನ ಹರಿಸಬೇಕು. ಈ ಸಮಯವನ್ನು ವ್ಯರ್ಥ ಮಾಡಿಕೊಂಡರೆ ಮತ್ತೆ ಅಂತಹ ಸುವರ್ಣ ಅವಕಾಶ ಸಿಗುವುದಿಲ್ಲ

ಪ್ರತಿಭೆಗೆ ಪ್ರೋತ್ಸಾಹ ಅಗತ್ಯ : ನಗರಸಭಾ ಸದಸ್ಯ ಕಲೀಮ್

ಚಾಲೆಂಜ್ ಕೋಚಿಂಗ್ ಕ್ಲಾಸೆಸ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

Profile Ashok Nayak May 26, 2025 1:27 PM

ಗೌರಿಬಿದನೂರು: ಸ್ಪರ್ಧಾತಕ ಯುಗದಲ್ಲಿ ಕ್ರಿಯಾಶೀಲತೆಗೆ ಗೌರವ ಮನ್ನಣೆ ಸಿಗಲಿದೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ಸಿದ್ಧಪಡಿಸಬೇಕಿದೆ ಎಂದು ನಗರಸಭಾ ಸದಸ್ಯ ಕಲೀಮ್ ಹೇಳಿದರು. ಚಾಲೆಂಜ್ ಕೋಚಿಂಗ್ ಕ್ಲಾಸೆಸ್ ಸಹಯೋಗದಲ್ಲಿ ದಿ ಬ್ರೈಟ್ ಪಬ್ಲಿಕ್ ಶಾಲೆ ನಗರದ ಡಾ.ಎಚ್.ಎನ್. ನರಸಿಂಹ ಯ್ಯ ಕಲಾಭವನದಲ್ಲಿ ಆಯೋಜಿಸಿದ್ದ ಕ್ಯಾಂಪ್ ಉತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆ ಮೊದಲಿನಂತಿಲ್ಲ. ಮೊದಲು ಬೃಹತ್ ನಗರ ಪ್ರದೇಶಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳು ಸೀಮಿತವಾಗಿದ್ದವು. ಆದರೆ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಿದೆ. ಗ್ರಾಮೀಣ ಮಟ್ಟದಲ್ಲೂ ಉತ್ತಮ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿವೆ. ಎಲ್ಲರೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಕಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ದೊರೆಯುತ್ತಿವೆ. ಆ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಂಡು ವಿದ್ಯಾರ್ಥಿಗಳು ಆಧುನಿಕ ಜಗತ್ತಿಗೆ ತಕ್ಕಂತೆ ಕ್ರಿಯಾಶೀಲರಾಗಿ ಬೆಳೆಯಬೇಕು. ಆಗ ಯಶಸ್ಸು ಹಾಗೂ ಅವಕಾಶಗಳು ಸುಲಭವಾಗಿ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು.  

ಇದನ್ನೂ ಓದಿ: Chikkaballapur News: ರೈತರ ಸಮಸ್ಯೆ ಕೇಳುವವರೇ ಇಲ್ಲ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಶಾಲೆಯ ಅಧ್ಯಕ್ಷ ಎನ್.ರಂಗನಾಥ್ ಮಾತನಾಡಿ, ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂದು ಆ ಸಮಯವನ್ನು ಕೇವಲ ಮಜಾ ಮಾಡಲು ವ್ಯರ್ಥ ಮಾಡಿಕೊಳ್ಳಬಾರದು. ಆಟ ಪಾಠಗಳ ಜೊತೆಗೆ ನಮ್ಮ ನಿಶ್ಚಿತ ಗುರಿಯನ್ನು ಸಾಧಿಸುವತ್ತ ಗಮನ ಹರಿಸಬೇಕು. ಈ ಸಮಯವನ್ನು ವ್ಯರ್ಥ ಮಾಡಿಕೊಂಡರೆ ಮತ್ತೆ ಅಂತಹ ಸುವರ್ಣ ಅವಕಾಶ ಸಿಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಆರ್.ವೀರಣ್ಣ  ಮಾತನಾಡಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೆತ್ತವರು ಸಾಕಷ್ಟು ಕಷ್ಟಗಳನ್ನು ಪಡುತ್ತಾರೆ. ಹೆತ್ತವರ ಆಶಯಗಳನ್ನು ಈಡೇರಿಸುವುದು ಮಕ್ಕಳ ಜವಾಬ್ದಾರಿ ಎಂದರು.   ನಗರಸಭಾ ಸದಸ್ಯ ಸುಬ್ಬರಾಜು, ಹಿರೇಬಿದನೂರು ಕ್ಲಸ್ಟರ್ ಸಿಆರ್ಪಿ ಟಿ.ಹರೀಶ್ ಬಾಬು, ಶಾಲೆಯ ಪ್ರಾಂಶುಪಾಲ ಎಚ್.ಅನಿಲ್, ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತಿತರರು ಹಾಜರಿದ್ದರು.