Saturday, 21st September 2024

ಮಕ್ಕಳಿಗೆ ಶಿಕ್ಷಣ ನೀಡಿ ಆತ್ಮಸ್ಥೈರ್ಯ ಮೂಡಿಸಿದ ಆದಿಚುಂಚನಗಿರಿ ಮಠ : ಡಿವಿಎಸ್

ಗ್ರಾಮೀಣ ಪ್ರದೇಶದ ಶಿಕ್ಷಣ ನೀಡುವ ಮೂಲಕ ಆತ್ಮಸ್ಥೈರ್ಯ ಮೂಡಿಸಿದವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಾಮೀಜಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.

ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ನಡೆದ 12ನೇ ಸಂಸ್ಥಾಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ ಉದ್ಘಾಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಅವರು ಮಾತನಾಡಿದರು. ಗ್ರಾಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಅಲ್ಲ. ಸಾಮಾಜಿಕ ವ್ಯವಸ್ಥೆೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ವಾಾಮೀಜಿ ಅವರು ಅಪರಿಮಿತ ಸೇವೆ ಸಲ್ಲಿಸಿದ್ದವರು. ಅಂತಹ ಮಹಾನ್ ಗುರುಗಳ ಹೆಸರಿನಲ್ಲಿ ಪ್ರತಿವರ್ಷ ಸಂಸ್ಥಾಾಪಕರ ದಿನಾಚರಣೆ ಮತ್ತು ಸಾಂಸ್ಕೃತಿಕ ಉತ್ಸವ ಏರ್ಪಡಿಸುತ್ತಿಿರುವುದು ಶ್ಲಾಾಘನೀಯ. ಪೋಷಕರು ತಮ್ಮ ಮಕ್ಕಳಿಗೆ ವಹಿಸುವ ಕಾಳಜಿ ಅವರ ಮುಂದಿನ ಭವಿಷ್ಯಕ್ಕೆೆ ನೆರವಾಗುವಂತಿಬೇಕು. ಹಾಗೆಯೇ ಅಧ್ಯಾಾಪಕರು ಶಿಕ್ಷಣ ಸಂಸ್ಥೆೆಯ ಬೆನ್ನೆೆಲುಗಳಿದ್ದ ಹಾಗೆ. ಹೀಗಾಗಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಾಮೀಜಿ ಅವರು ಆಶೀರ್ವಚನ ನೀಡಿ, ನಮ್ಮ ಉದ್ಧಾಾರಕ್ಕೆೆ ಬೆಳಕು ನೀಡಿದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯಕರ್ತವ್ಯ. ಬಾಲಗಂಗಾಧರನಾಥ ಸ್ವಾಾಮೀಜಿ ಅವರು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಂತರ ಮಠ ವಿಶ್ವವಿಖ್ಯಾಾತಿ ಪಡೆದಿದೆ. ಇದಕ್ಕೆೆ ಗುರೂಜಿಯವರ ತಪಸ್ಸೇ ಕಾರಣ ಎಂದು ಹೇಳಿದರು.

ಪ್ರಾಾರಂಭದಲ್ಲಿ 1 ಸಾವಿರ ವಿದ್ಯಾಾರ್ಥಿಗಳಿಗೆ ವಿದ್ಯೆೆ ನೀಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಶ್ರೀಗಳು ಭಾವಿಸಿದ್ದರಂತೆ. ಆದರೆ, ಶ್ರೀ ಗಳ ಜೀವಿತಾವಧಿಯಲ್ಲೇ 1.25ಲಕ್ಷ ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಶಿಕ್ಷಣ ಪಡೆಯುವುದನ್ನು ಗುರುಗಳು ಕಂಡಿದ್ದರು. ಗುರುಗಳನ್ನು ಸ್ಮರಿಸುವ ಸಮಾರಂಭದಲ್ಲಿ ನಮ್ಮೊೊಳಗಿರುವ ಪ್ರಜ್ಞೆ ಜಾಗೃತಿಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ಹಂಸ ವಾಹನದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಾಮೀಜಿ ಹಾಗೂ ಪ್ರಕಾಶನಾಥ ಸ್ವಾಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಸಭಾಂಗಣಕ್ಕೆೆ ಕರೆತರಲಾಯಿತು. ಇದೇ ಸಂದರ್ಭದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆೆಯ ಶಿವಯ್ಯ ಅವರಿಗೆ ಬಿಜಿಎಸ್ ಸೇವಾರತ್ನ ನೀಡಿ ಸನ್ಮಾಾನಿಸಲಾಯಿತು. ಸಾಂಸ್ಕೃತಿಕ ಉತ್ಸವದಲ್ಲಿ ಬೆಂಗಳೂರು ಮತ್ತು ದೆಹಲಿಯ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆೆಗಳ ವಿದ್ಯಾಾರ್ಥಿಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಮನಸೂರೆಗೊಂಡವು.

ಡಾ.ಶ್ರೀ ಸ್ವಾಾಮೀಜಿ, ರಾಜಸ್ಥಾಾನದ ಆಶಾರ್ ಆಶ್ರಮದ ಶ್ರೀ ಅವೈದ್ಯನಾಥ ಜೀ ಮಹಾರಾಜ್, ಆರ್ಯ ಶಂಕರನಾರಾಯಣ, ಪ್ರಾಾಂಶುಪಾಲ ಡಾ. ಪುಟ್ಟರಾಜು, ಅಯ್ಯಪ್ಪ ನಾಯರ್ ಪಾಲ್ಗೊೊಂಡಿದ್ದರು.