Friday, 25th October 2024

ಜೂಜು ಅಡ್ಡೆಗೆ ದಾಳಿ, ಒಂದು ಲಕ್ಷಕ್ಕೂ ಅಧಿಕ ನಗದು ವಶ

ಪಾವಗಡ: ತಾಲ್ಲೂಕಿನ ಜಾಜೂರಾಯನ ಹಳ್ಳಿ ಬಳಿ 35 ರಿಂದ 40 ಜನರು ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ, ಶೇಖರ, ಶ್ರೀನಿವಾಸ, ರಮೇಶ, ನವೀನ, ರುದ್ರಯ್ಯ, ರವೀಂದ್ರ ಎಂಬವರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ಒಂದು ಲಕ್ಷಕ್ಕಿಂತ ಹೆಚ್ಚು ನಗದು ಹಾಗೂ ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ದಾಳೆ ವೇಳೆ, ಜಾಜೂರಾಯನಹಳ್ಳಿಯ ಲೋಕೇಶ, ಪಾವಗಡದ ಅಲ್ಲು ಉರುಪ್ ಅಲ್ಕೂರಯ್ಯ, ಗೊಣ್ಣೆಸೀನ, ಫೈನಾನ್ಸ್ ಮಣಿ, ಗಣಿ ಉರುಪ್ ಮಣಿ ಎಂಬುವವರು ಪರಾರಿಯಾಗಿರುತ್ತಾರೆ.

ದಾಳಿಯಲ್ಲಿ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ,ಕೆ. ವಂಸಿ ಕೃಷ್ಣ ಅಭಿನಂದನಂದಿಸಿರುತ್ತಾರೆ.