ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಿಮ್ಮ ಅಹಂಕಾರವನ್ನು ಜೇಬಿನಲ್ಲಿ ಇಡಬೇಕುʼ:ಶ್ರೇಯಸ್‌ ಅಯ್ಯರ್‌ ವಿರುದ್ಧ ಟಾಮ್‌ ಮೂಡಿ ಗರಂ!

Tom Moody on Shreyas Iyer: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಶ್ರೇಯಸ್‌ ಅಯ್ಯರ್‌ ಅವರನ್ನು ಟಾಮ್‌ ಮೂಡಿ ಟೀಕಿಸಿದ್ದಾರೆ.

RCB vs PBKS: ಶ್ರೇಯಸ್‌ ಅಯ್ಯರ್‌ ವಿರುದ್ಧ ಟಾಮ್‌ ಮೂಡಿ ಗರಂ!

ಶ್ರೇಯಸ್‌ ಅಯ್ಯರ್‌ ಅವರನ್ನು ಟೀಕಿಸಿದ ಟಾಮ್‌ ಮೂಡಿ.

Profile Ramesh Kote May 30, 2025 4:47 PM

ಚಂಡೀಗಢ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ದ ಪಂಜಾಬ್‌ ಕಿಂಗ್ಸ್‌ (PBKS) ತಂಡ ಹೀನಾಯ ಸೋಲು ಅನುಭವಿಸಿದ ಬಳಿಕ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್‌ ಮೂಡಿ (Tom Moody) ಅವರು ಪಿಬಿಕೆಎಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಟೀಕಿಸಿದ್ದಾರೆ. ಪಂದ್ಯದ ಸನ್ನಿವೇಶವನ್ನು ಅರಿತುಕೊಂಡು ಬ್ಯಾಟಿಂಗ್‌ ಪ್ರದರ್ಶನ ತೋರಬೇಕು ಹಾಗೂ ಅಹಂಕಾರವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಆಡಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಪಂಜಾಬ್‌ ಕಿಂಗ್ಸ್‌ ತಂಡ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಸೋಲಿನ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆಲ್ಲಬೇಕಾಗಿದೆ.

ಗುರುವಾರ ಇಲ್ಲಿನ ಮುಲ್ಲನ್‌ಪುರದಲ್ಲಿ ನಡೆದಿದ್ದ ಮೊದಲನೇ ಕ್ವಾಲಿಫೈಯರ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ತಾಳ್ಮೆ ಕಳೆದುಕೊಂಡು ವಿಕೆಟ್‌ ಕೈಚೆಲ್ಲಿದ್ದರು. ಆ ಮೂಲಕ ಪಂಜಾಬ್‌ ತಂಡ ಜಾಶ್‌ ಹೇಝಲ್‌ವುಡ್‌ ಮತ್ತು ಸುಯಶ್‌ ಶರ್ಮಾ ಬೌಲಿಂಗ್‌ ದಾಳಿಗೆ ನಲುಗಿ 14.1 ಓವರ್‌ಗಳಿಗೆ ಕೇವಲ 101 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫಿಲ್‌ ಸಾಲ್ಟ್‌ ಸ್ಪೋಟಕ ಅರ್ಧಶತಕದ ಬಲದಿಂದ 10 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 106 ರನ್‌ಗಳಿಸಿತು. ಆ ಮೂಲಕ 8 ವಿಕೆಟ್‌ಗಳ ಸುಲಭ ಗೆಲುವನ್ನು ಪಡೆಯಿತು.

IPL 2025: ʻಆರ್‌ಸಿಬಿ ಈ ಸಲ ಕಪ್‌ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?

ಅಂದ ಹಾಗೆ ಪಂಜಾಬ್‌ ಕಿಂಗ್ಸ್‌ 27 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ತೆರಳಿದ್ದ ಶ್ರೇಯಸ್‌ ಅಯ್ಯರ್‌, ಕೇವಲ ಮೂರು ಎಸೆತಗಳಲ್ಲಿ ಎರಡು ರನ್‌ ಗಳಿಸಿ ಜಾಶ ಹೇಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದ್ದರು. ಎರಡು ವಿಕೆಟ್‌ ಕಳೆದುಕೊಂಡಿದ್ದ ವೇಳೆ ನಾಯಕ ಶ್ರೇಯಸ್‌ ಅಯ್ಯರ್‌ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಬೇಕಾಗಿತ್ತು. ಆದರೆ, ತಾನಾಡಿದ ಮೂರನೇ ಎಸೆತಸದಲ್ಲಿಯೇ ಹೇಝಲ್‌ವುಡ್‌ಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾಗೆ ಕ್ಯಾಚ್‌ ಕೊಟ್ಟರು.

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಟಾಮ್‌ ಮೂಡಿ, "ಇಂಥಾ ಸಂದರ್ಭಗಳಲ್ಲಿ ನೀವು ನಿಮ್ಮ ಅಹಂಕಾರವನ್ನು ಜೇಬಿನಲ್ಲಿ ಇಟ್ಟುಕೊಂಡು ಮುಂದೆ ಸಾಗಬೇಕಾಗುತ್ತದೆ. ಸನ್ನಿವೇಶವನ್ನು ಸರಿಯಾಗಿ ಅರಿತುಕೊಂಡಿಲ್ಲ ಎಂಬುದು ನಮಗೆ ಸೂಕ್ತ ಉದಾಹರಣೆಯಾಗಿದೆ. ಜಾಶ್‌ ಹೇಝಲ್‌ವುಡ್‌ಗೆ ನೋಡಿಕೊಂಡು ಆಡಬೇಕಾಗಿತ್ತು ಹಾಗೂ ಇನ್ನುಳಿದ ಬೌಲರ್‌ಗಳ ವಿರುದ್ದ ನೀವು ದಾಳಿ ಮಾಡಬಹುದಾಗಿತ್ತು. ಮೊದಲ ಎಸೆತವನ್ನು ಆಡಿದ್ದರು ಹಾಗೂ ಮಿಸ್‌ ಮಾಡಿದ್ದರು. ಹೇಝಲ್‌ವುಡ್‌ ಅವರು ಒಳ್ಳೆಯ ಲೈನ್‌ ಹಾಕುತ್ತಾರೆಂದು ನೀವು ನಿರೀಕ್ಷೆ ಮಾಡಬಹುದು," ಎಂದು ಹೇಳಿದ್ದಾರೆ.

IPL 2025: GT vs MI ನಡುವೆ ಎಲಿಮಿನೇಟರ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು?

"ಪಂದ್ಯದ ಸನ್ನಿವೇಶ ಹಾಗೂ ಅವರ ಸನ್ನಿವೇಶವನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ. ಜಾಶ್‌ ಹೇಝಲ್‌ವುಡ್‌ ಅವರನ್ನು ಈ ಹಿಂದೆ ಅವರು ಎದುರಿಸಿದ್ದಾರೆಂಬುದನ್ನು ಅವರು ಅರಿತುಕೊಳ್ಳಬೇಕಾಗುತ್ತದೆ. ಹೇಝಲ್‌ವುಡ್‌ರನ್ನು ಎದುರಿಸಿದ ಬಗ್ಗೆ ಅವರಿಗೆ ಮಾತ್ರ ಚೆನ್ನಾಗಿ ಗೊತ್ತಿತ್ತು. ನಿಜವಾಗಿಯೂ ಅವರಿಗೆ ಆಡಲು ಇಷ್ಟವಿರಲಿಲ್ಲ ಆದರೆ, ಅವರು ಆಡಿದ್ದಾರೆ. ಮೂರನೇ ಎಸೆತದಲ್ಲಿ ತಾಳ್ಮೆಯನ್ನು ಕಳೆದುಕೊಂಡು ಆಡಲು ಹೋಗಿ ಔಟ್‌ ಮಾಡಿದ್ದಾರೆ," ಎಂದು ಟಾಮ್‌ ಮೂಡಿ ತಿಳಿಸಿದ್ದಾರೆ.