Friday, 20th September 2024

ಕುಸ್ತಿಪಟು ಸುಶೀಲ್ ಕುಮಾರ್ ಬಂಧನ

ನವದೆಹಲಿ : ಕೊಲೆ ಆರೋಪದ ಮೇಲೆ ತಲೆ ಮರೆಸಿಕೊಂಡಿದ್ದ ಕುಸ್ತಿಪಟು ಸುಶೀಲ್ ಕುಮಾರ್ ರನ್ನು ಪೊಲೀಸರು ಬಂಧಿಸಿ ದ್ದಾರೆ. ಜೊತೆಗೆ ಸುಶೀಲ್ ಸಹಾಯಕ ಅಜಯ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೇ 4ರಂದು ದೆಹಲಿಯ ಸ್ಟೇಡಿಯಂನಲ್ಲಿ ನಡೆದ ಹೊಡೆದಾಟದಲ್ಲಿ ಜ್ಯೂನಿಯರ್ ಕುಸ್ತಿ ಪಟು ಸಾಗರ್ ರಾಣಾ ಮೃತಪಟ್ಟಿ ದ್ದರು. ಸೋನು ಮತ್ತು ಅಮಿತ್ ಗೆ ಗಾಯಗಳಾಗಿದ್ದವು.

ಈ ಘಟನೆಯಲ್ಲಿ ಸುಶೀಲ್ ಭಾಗಿಯಾಗಿದ್ದಾರೆ ಎಂಬ ಆರೋಪವಿತ್ತು. ಘಟನೆಯ ಬೆನ್ನಲ್ಲೇ ಸುಶೀಲ್ ಕುಮಾರ್ ನಾಪತ್ತೆಯಾಗಿ ದ್ದರು. ಆರೋಪಿಗಳನ್ನ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ಇದೀಗ ದೆಹಲಿ‌ ಪೊಲೀಸರು ಸುಶೀಲ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.