Monday, 28th October 2024

ಸಮರ್ಥನಂ ಟ್ರಸ್‌ಟ್‌‌ನಿಂದ ದಿವ್ಯಾಾಂಗರಿಗೆ ನಗದು, ಪಡಿತರ ಕಿಟ್ ವಿತರಣೆ

ವಿಶ್ವವಾಣಿ  ಸುದ್ದಿಮನೆ  ಬೆಂಗಳೂರು
ಕರೋನಾ ಲಾಕ್‌ಡೌನ್‌ನಿಂದ  ದೇಶಾದ್ಯಂತ ತೀವ್ರ ತೊಂದರೆಗೀಡಾಗಿರುವ ದಿವ್ಯಾಾಂಗರಿಗೆ ಸಮರ್ಥನಂ ಟ್ರ್ಟ್ ಫಾರ್ ಡಿಸೇಬಲ್‌ಡ್‌  ಸಂಸ್ಥೆ ಹಣಕಾಸು ನೆರವು, ರೇಷನ್ ಕಿಟ್‌ಗಳು, ದೈನಂದಿನ ಊಟ ಮತ್ತಿತರ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ಲಾಕ್‌ಡೌನ್  ನಂತರ, ಅಗತ್ಯವಿರುವ ವಿಶೇಷ ಚೇತನರನ್ನು ಗುರುತಿಸಲು ಪ್ರಾಾರಂಭಿಸಿತು. ಅಲ್ಲದೆ ಪರಿಹಾರ ಕಾರ್ಯಕ್ಕೆ ಕ್ರಿಯಾ ಯೋಜನೆ ರೂಪಿಸಿ, 14 ನಗರಗಳಿಗೆ ನೆರವು ವಿಸ್ತರಿಸಿತು. 2.5 ಲಕ್ಷ ಊಟ, 11 ಸಾವಿರ  ಜನರಿಗೆ ಪಡಿತರ ಕಿಟ್‌ಗಳನ್ನು ಪೂರೈಸಿತು. ಸಂಕಷ್ಟದಲ್ಲಿರುವವರನ್ನು ಗುರುತಿಸುವ ಪ್ರಕ್ರಿಯೆಯನ್ನು ಈಗಲೂ ಮುಂದುವರೆಸಿದೆ.

ಸಮರ್ಥನಂ  ಸಂಸ್ಥೆಯ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟೀ ಜಿ.ಕೆ. ಮಹಾತೇಶ್, ಅಂಗವಿಕಲ ಸಮುದಾಯ ಅರಿವಿನ ಕೊರತೆಯಿಂದ ಪರಿಹಾರದಿಂದ ವಂಚಿತವಾಗುತ್ತದೆ. ಈ ಕೊರತೆ ನಿವಾರಣೆಗಾಗಿ ದಾನಿಗಳು ಮತ್ತು ಸೇವಾ ಸಂಸ್ಥೆಗಳಿಂದ ಸ್ವತಃ ನಿಧಿ ಸಂಗ್ರಹ ಮಾಡಿ ಸಂಕಷ್ಟದಲ್ಲಿರುವ 400 ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಿದೆವು. ದೇಶದ ಅತ್ಯಂತ ವಿಶ್ವಾಸಾರ್ಹ  ಆನ್‌ಲೈನ್  ದೇಣಿಗೆ ಪ್ಲಾಟ್ಫಾರಂ ಗೀವ್ಇಂಡಿಯಾ  ಸಹ 25 ಲಕ್ಷ  ರು ಬಿಡುಗಡೆ ಮಾಡಿತು. ಸಮರ್ಥನಂ ಟ್ರ್ಟ್ ಈ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 5 ಸಾವಿರ ರು  ನಗರ  ಪ್ರದೇಶದ ಫಲಾನುಭವಿಗೆ 7 ಸಾವಿರ  ರು  ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ 11 ಸಾವಿರ ದಿನಸಿ  ಕಿಟ್‌ಗಳನ್ನು ವಿತರಿಸಿದ್ದು, 10 ಆಸ್ಪತ್ರೆಗಳಲ್ಲಿ 8 ಸಾವಿರವ  ಪಿಪಿಇ  ಮತ್ತು ಹೆಲ್ತ್ ಕಿಟ್ ಗಳು ಮತ್ತು ಒಂದು ಲಕ್ಷ ಮಾಸ್‌ಕ್‌‌ಗಳನ್ನು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.