Monday, 16th September 2024

Ganesh Chaturthi: ಗಣೇಶ ಪ್ರತಿಮೆ ವಿಸರ್ಜನೆಗೆ ಬೆಂಗಳೂರಿನಲ್ಲಿ 41 ಕೆರೆ, 462 ಟ್ಯಾಂಕರ್‌ ನಿಗದಿ

ganesh chaturthi (1)

ಬೆಂಗಳೂರು: ನಿನ್ನೆ ನಗರದಾದ್ಯಂತ ಗಣೇಶೋತ್ಸವಕ್ಕಾಗಿ (Ganesh Chaturthi) ವಿನಾಯಕನ ಮೂರ್ತಿಗಳನ್ನು ಕೂರಿಸಲಾಗಿದ್ದು, ಇಂದಿನಿಂದ ಗಣಪತಿ ಮೂರ್ತಿಗಳ ವಿಸರ್ಜನೆ (Ganesh Idol Immersion) ನಡೆಯಲಿದೆ. ವಿಗ್ರಹ ವಿಸರ್ಜನೆಗೆ ಅನುಕೂಲವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ – BBMP) ವ್ಯಾಪಕವಾದ ವ್ಯವಸ್ಥೆಯನ್ನು ಪ್ರಕಟಿಸಿದೆ.

ಗಣೇಶ ಮೂರ್ತಿಗಳ ಸಂಖ್ಯೆ ಈ ಬಾರಿ ಹೆಚ್ಚಿದೆ. ಹೀಗಾಗಿ ಇದರ ವಿಸರ್ಜನೆಯನ್ನು ನಿರ್ವಹಿಸಲು ಮತ್ತು ಪರಿಸರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿಯು ಬೆಂಗಳೂರಿನಾದ್ಯಂತ 462 ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ನಿವಾಸಿಗಳು ಈ ಟ್ಯಾಂಕರ್‌ಗಳನ್ನು ಮೂರ್ತಿಯನ್ನು ಬಿಡಲು ಬಳಸಿಕೊಳ್ಳಬಹುದು. ಅಥವಾ ಈ ಉದ್ದೇಶಕ್ಕಾಗಿ ನಿಗದಿಪಡಿಸಲಾದ 41 ಕೆರೆಗಳು ಮತ್ತು ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಂದರಲ್ಲಿ ಮುಳುಗಿಸಬಹುದಾಗಿದೆ.

ಪೂರ್ವ ವಲಯಕ್ಕೆ 138 ಯೂನಿಟ್‌ಗಳೊಂದಿಗೆ ಅತಿ ಹೆಚ್ಚು ಮೊಬೈಲ್ ಟ್ಯಾಂಕರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 84 ಇದೆ. ಗಣೇಶ ಮೂರ್ತಿಗಳ ಸ್ಥಾಪನೆಯನ್ನು ಸುವ್ಯವಸ್ಥಿತಗೊಳಿಸಲು BBMP 63 ಸಿಂಗಲ್‌- ವಿಂಡೋ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ ಸಂಘಟಕರು ಪರವಾನಗಿಗಳನ್ನು ಪಡೆಯಬೇಕು. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಮತ್ತು ಬೆಸ್ಕಾಂ ಪ್ರತಿನಿಧಿಗಳು ಸೇರಿರುವ ತಂಡ ಪೆಂಡಾಲ್ ಸ್ಥಳಗಳ ಪರಿಶೀಲನೆ ಮಾಡಿ ಅನುಮೋದನೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

ವಿಗ್ರಹ ವಿಸರ್ಜನೆಗೆ ಹತ್ತಿರದಲ್ಲಿರುವ ಮೊಬೈಲ್ ಟ್ಯಾಂಕರ್‌ಗಳನ್ನು ಬಯಸುವವರಿಗೆ, BBMP ಆನ್‌ಲೈನ್ ಲಿಂಕ್‌ ನೀಡಿದೆ: https://apps.bbmpgov.in/ganesh2024/

ಈ ಸಿದ್ಧತೆಗಳ ಜೊತೆಯಲ್ಲಿ, ಬಿಬಿಎಂಪಿ ಸೆಪ್ಟೆಂಬರ್ 7 ರಂದು ಮಾಂಸ ಮಾರಾಟ ಮತ್ತು ಹತ್ಯೆಯನ್ನು ನಿಷೇಧಿಸಿತ್ತು. ಹೆಚ್ಚುವರಿಯಾಗಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಹಬ್ಬದ ಸಮಯದಲ್ಲಿ ವಿದ್ಯುತ್‌ನ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪರಿಚಯಿಸಿದೆ. ಈ ಕ್ರಮಗಳು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಸುಗಮ ಆಚರಣೆಯ ಪ್ರಯತ್ನದ ಭಾಗವಾಗಿದೆ.

ಈ ಸುದ್ದಿ ಓದಿ: Ganesh Visarjan: ಗಣೇಶ ವಿಸರ್ಜನೆ : ಪಾಲಿಕೆಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ

Leave a Reply

Your email address will not be published. Required fields are marked *