Sunday, 8th September 2024

ಪಾವಗಡ: ಸಣ್ಣ ನೀರಾವರಿ ಸಚಿವರಿಗೆ ಮುಖಭಂಗ…!

ಪಾವಗಡ : ಪಾವಡಕ್ಕೆ ಆಗಮಿಸಿದ ಸಚಿವರನ್ನು ಬರಮಾಡಿಕೊಳ್ಳಲು ಒಬ್ಬನೂ ಬಿಜೆಪಿ ಕಾರ್ಯಕರ್ತ ಇಲ್ಲ, ಮುಖಂಡರು ಇಲ್ಲದೆ ಇರುವುದು ಮುಖಭಂಗ ಅನುಭವಿಸಿದರು.

ತಾಲೂಕಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ .ಮಾಧುಸ್ವಾಮಿ ಭೇಟಿ ನೀಡಿ, ತಾಲೂಕಿನ ನಾಗಲಮಡಿಕೆಯ ಉತ್ತರ ಪೀನಾಕಿನಿ ನದಿಯಲ್ಲಿ ಭಾಗಿನ ಅರ್ಪಿಸಿದರು. ಈ ವೇಳೆ ಸಚಿವರಿಗೆ ಸ್ಥಳೀಯ ಶಾಸಕರಾದ ವೆಂಕಟರಮಣಪ್ಪ ಸಾಥ್‌ ನೀಡಿದರು.

ಪಾವಗಡ ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಬಹಳಷ್ಟು ಕೆರೆಗಳು ತುಂಬಿದ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಭೇಟಿ ನೀಡಿ ಪಟ್ಟಣದ ಅಗಸರಕುಂಟೆ ಕೆರೆಗೆ ಭಾಗಿನ ಅರ್ಪಿಸಿ ನಂತರ ತಾಲೂಕಿನ ನಾಗಲಮಡಿಕೆ ಉತ್ತರ ಪೀನಾಕಿನಿ ನದಿಯಲ್ಲಿ ಬಾಗಿನ ಅರ್ಪಿಸಿದರು.

ಸಚಿವರ ಪಾವಗಡ ಭೇಟಿ ವೇಳೆ ಯಾವೊಬ್ಬ ಬಿಜೆಪಿ ಮುಖಂಡ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರು ಬಿಟ್ಟರೆ ಯಾರೊ ಬ್ಬರೂ ಬಿಜೆಪಿ ಕಾರ್ಯ ಕರ್ತರು ಅಗಲಿ ಮುಖಂಡರು ಅಗಲಿ ಇರದೆ ಇರದು ಅನುಮಾನಕ್ಕೆ ಎಡೆಮಾಡಿಕೊಟ್ಟಿತು.

ಹಲವು ಬಾರಿ ಪಾವಗಡಕ್ಕೆ ಬಂದಂತಹ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಅದರೆ ಇಂದು ಸಚಿವರಿಗೆ ಯಾರೊಬ್ಬರೂ ಕೇಳುವವರೇ ಇರಲಿಲ್ಲ.

ಈ ವೇಳೆ ತಹಸೀಲ್ದಾರ್ ವರದರಾಜ್. ಮಾಜಿ ಪುರಸಭೆ ಅಧ್ಯಕ್ಷ ಎ.ಶಂಕರೆಡ್ಡಿ, ಇತರೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆ ಸದಸ್ಯರು ಭಾಗಿಯಾಗಿದ್ದರು.

error: Content is protected !!