Sunday, 8th September 2024

ಮುಧೋಳದ ನಗರಸಭೆ ಅಧ್ಯಕ್ಷ ಕರೋನಾ ಸೋಂಕಿಗೆ ಬಲಿ

ಬಾಗಲಕೋಟೆ: ಮುಧೋಳದ ನಗರಸಭೆ ಅಧ್ಯಕ್ಷ ಸಿದ್ಧನಾಥ (ಸಂಜು) ದಾದಾಸಾಹೇಬ್ ಮಾನೆ (32) ಕೋವಿಡ್ ಸೋಂಕಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ನಗರಸಭೆ ಅಧ್ಯಕ್ಷರಾಗುವ ಅವಕಾಶ ಒಲಿದು ಬಂದಿತ್ತು. ರಾಷ್ಟ್ರಮಟ್ಟದ ಕುಸ್ತಿಪಟು ಆಗಿದ್ದ ಅವರು ಎರಡು ಬಾರಿ ಕರ್ನಾಟಕ ಕೇಸರಿ ಹಾಗೂ ಒಂದು ಬಾರಿ ಕರ್ನಾಟಕ ಕಂಠೀರವ ಪ್ರಶಸ್ತಿಗೆ ಭಾಜನರಾಗಿದ್ದರು.

ಸಿದ್ಧನಾಥ ಅವರ ತಾಯಿ ರಾಧಾಬಾಯಿ ಮಾನೆ ಕೂಡ ಕೋವಿಡ್ ಸೋಂಕಿನಿಂದ ಮೇ 20ರಂದು ನಿಧನರಾಗಿದ್ದರು. ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಿದ್ದನಾಥ ಮಾನೆ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!