ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಇದು ಹಿಂದಿನ ತೀರ್ಮಾನವೋ, ಹೊಸ ನಾಯಕತ್ವದ ಬದಲಾವಣೆಯೋ ತಿಳಿಯುತ್ತಿಲ್ಲ ಸರಕಾರದ ನಾಯಕತ್ವ ಬದಲಾವಣೆಯ ಫಲವೋ ಏನೋ, ರಾಜ್ಯದಲ್ಲಿ ದೀನ, ದುರ್ಬಲರ ಹೊಟ್ಟೆಪಾಡಿನ ಚೀಟಿ ಎಂದೇ ಹೆಸರಾದ ಬಿಪಿಎಲ್ ಕಾರ್ಡ್ ಬಂದ್ ಆಗಿವೆ. ಇದು ಸರಕಾರದ ನೂತನ ನಾಯಕತ್ವದ ಕೊಡುಗೆಯೋ ಅಥವಾ ಹಿಂದಿನ ವ್ಯವಸ್ಥೆಯ ಎಡವಟ್ಟು ತೀರ್ಮಾನ ವೋ ಎನ್ನುವುದು ಫಲಾನುಭವಿಗಳಿಗಂತೂ ತಿಳಿಯುತ್ತಿಲ್ಲ. ಆಹಾರ ಇಲಾಖೆ ಕೈಗೊಂಡಿರುವ ಈ ಬಡಜನರ ವಿರೋಧಿ ತೀರ್ಮಾನದ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿದಂತೆ ಕಾಣುತ್ತಿಲ್ಲ. […]