ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗೌರಿ ಹಾಗೂ ಗಣಪತಿ ಚೌತಿಯನ್ನು ಆಚರಿಸಲಾಯಿತು. ಗೌರಿಗೆ ಹರಿಸಿಣ ಕುಂಕುಮ ಬಳೆ ಹೊಸಬಟ್ಟಯ ಬಾಗೀನ ಅರ್ಪಣೆ ಸಲ್ಲಿಸಿದರೆ, ಗಣಪತಿಗೆ ಗರಿಕೆ ಎಳ್ಳುಂಡೆ ಮೋದಕ ಸಹಿತ ಬಗೆಬಗೆಯ ಹಣ್ಣುಹಂಪಲು ಭಕ್ಷ್ಯಭೋಜ್ಯಗಳನ್ನು ಅರ್ಪಿಸಿ ಭಕ್ತಿಯ ಪಾರಮ್ಯ ಮೆರೆದರು. ಶ್ರಾವಣದ ಹಸಿರಿನ ನಡುವೆ ಬಂದಿರುವ ಗಣೇಶ ಚೌತಿಯನ್ನು ಜಿಲ್ಲೆಯ ಜನತೆ ಸಂತೋಷದಲ್ಲಿ ಸ್ವಾಗತಿಸಿ,ತಾಯಿ ಗೌರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ಗಣನಾಥನ ಆರಾಧನೆಗೆ ಮುಂದಾಗಿರುವುದು ಎಲ್ಲೆಡೆ ಕಂಡು ಬಂದಿತು. ಗಣೇಶ ಚೌತಿಯನ್ನು ಹಿರಿಯ ಕಿರಿಯರೆ ಹೆಣ್ಣು […]