ಉಡುಪಿ : ಭಾರಿ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದ್ದು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಉಡುಪಿಯ ಕಲ್ಸಂಕ ಮಠದ ಕೆರೆ ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಕೆಮ್ಮಣ್ಣು,ಕುದುರು ಸೇರಿದಂತೆ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಮಠದ ರಾಜಾಂಗಣದ ವಾಹನ ನಿಲುಗಡೆ ಪ್ರದೇಶ ಸಂಪೂರ್ಣವಾಗಿ ಮುಳುಗಿದೆ. ಉಚ್ಚಿಲ ಕುಂಜೂರು ದೇವಸ್ಥಾನ ಪ್ರಾಂಗಣದೊಳಗೆ ನೀರು ನುಗ್ಗಿದೆ. ಸೊಂಟದ ವರೆಗೆ ನೀರು ಬಂದಿದೆ. ಕಾರ್ಕಳ ತಾಲೂಕಿನ ಸ್ವರ್ಣಾ ನದಿ ಪ್ರವಾಹಕ್ಕೆ ಎಣ್ಣೆಹೊಳೆಯ ಪೇಟೆ […]