Friday, 20th September 2024

ಚಂದನವನದಲ್ಲಿ ಛಲಗಾತಿಯ ಬಯೋಪಿಕ್

ಶಿಕಾರಿಪುರದ ಹುಡುಗಿ ತನುಜಾ ಅಪ್ಪಟ ಛಲಗಾತಿ. ಜೀನವನದಲ್ಲಿ ವೈದ್ಯೆಯಾಗಬೇಕು ಎಂಬ ಆಸೆ ಆಕೆಯ ಮನದಲ್ಲಿ ಅದಾಗಲೇ ಬಲವಾಗಿ ಬೇರೂರಿತ್ತು. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ನೀಟ್ ಪರೀಕ್ಷೆಗೆ ಸಿದ್ದವಾಗುತ್ತಿದ್ದ ತನುಜಾಗೆ, ಕರೋನಾ ಮಹಾಮಾರಿ ಕಾಡಿತ್ತು. ಪರಿಣಾಮ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಪೂರಕ ಪರೀಕ್ಷೆೆಗಾದರೂ ಹಾಜರಾಗಬೇಕು ಎಂದುಕೊಳ್ಳುತ್ತಿರುವಾಗಲೇ ತಾಂತ್ರಿಕ ದೋಷದಿಂದ ಪ್ರವೇಶಪತ್ರವೇ ಸಿಗಲಿಲ್ಲ. ತನ್ನ ಕನಸು ಕಮರಿತು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ತನುಜಾಗೆ ನೆರವಾಗಿದ್ದೇ ‘ವಿಶ್ವವಾಣಿಯ’ ಪ್ರಧಾನ ಸಂಪಾದಕರಾದ ವಿಶ್ವೇಶ್ವರಭಟ್ ಅವರು. ತನುಜಾಳ ಸಮಸ್ಯೆೆಯ […]

ಮುಂದೆ ಓದಿ