ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Mangalore News: ಸೋಶಿಯಲ್‌ ಮೀಡಿಯಾದಲ್ಲಿ ಕೋಮು ಪ್ರಚೋದಕ ಸಂದೇಶ; 6 ಕಿಡಿಗೇಡಿಗಳ ಬಂಧನ

ಕೋಮು ಪ್ರಚೋದಕ ಸಂದೇಶ; ಮಂಗಳೂರಲ್ಲಿ 6 ಮಂದಿ ಅರೆಸ್ಟ್‌

Mangalore News: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಾಕಿ, ಸಮಾಜದ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಮುಂದುವರಿದಿದೆ.

Karnataka Rains: ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಜೂ.11ರವರೆಗೆ ಯೆಲ್ಲೋ ಅಲರ್ಟ್‌ ಘೋಷಣೆ; ಭಾರಿ ಮಳೆ ನಿರೀಕ್ಷೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 32°C ಮತ್ತು 22°C ಇರುವ ಸಾಧ್ಯತೆ ಇದೆ.

HD Kumaraswamy: ಕಾವೇರಿ ಆರತಿಗೆ 100 ಕೋಟಿ ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ: ಎಚ್.ಡಿ.ಕುಮಾರಸ್ವಾಮಿ

ಕಾವೇರಿ ಆರತಿಗೆ 100 ಕೋಟಿ ಖರ್ಚು ಮಾಡಲು ವಿರೋಧವಿದೆ: ಎಚ್‌ಡಿಕೆ

HD Kumaraswamy: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಟೆ ಗಂಟೆಗೊಂದು ನಿರ್ಧಾರ ಮಾಡುತ್ತಿದೆ. ಅಂತಿಮವಾಗಿ ಏನು ಮಾಡುತ್ತದೆ ಎಂಬುದನ್ನು ನೋಡಬೇಕು. ಮೊದಲು ಮ್ಯಾಜಿಸ್ಟ್ರಿಯಲ್ ತನಿಖೆ ಎಂದರು, ಆಮೇಲೆ ನ್ಯಾಯಾಂಗ ತನಿಖೆ ಎಂದು ಹೇಳಿದರು, ಅದಾದ ಮೇಲೆ ಸಿಐಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಅಂತಿಮವಾಗಿ ಯಾವ ತನಿಖೆ ವರದಿ ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

DK Suresh: ಕುಮಾರಸ್ವಾಮಿ ಒತ್ತಡದಲ್ಲಿದ್ದಾರೆ, ಜೆಡಿಎಸ್ ಟ್ವೀಟ್‌ಗಳನ್ನು ಜನರಿಗೆ ತೋರಿಸಬೇಕು‌: ಡಿ.ಕೆ.ಸುರೇಶ್‌

ಕುಮಾರಸ್ವಾಮಿ ಒತ್ತಡದಲ್ಲಿದ್ದಾರೆ, ಆರೋಗ್ಯ ಸರಿಯಿಲ್ಲ: ಡಿ.ಕೆ.ಸುರೇಶ್‌

DK Suresh: ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ನಾನು ಗಮನಿಸುತ್ತಿದ್ದೆ. ಅವರು ಒತ್ತಡದಲ್ಲಿ ಇದ್ದಾರೆ, ಆರೋಗ್ಯ ಸರಿಯಿಲ್ಲ ಎನಿಸುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ ಈ ರಾಷ್ಟ್ರದ ಸೇವೆ ಮಾಡಲಿʼ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಟೀಕಿಸಿದ್ದಾರೆ‌.

Basavaraj Bommai: ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಪುಸ್ತಕ ಪ್ರಶಸ್ತಿ ಪ್ರಕಟ

ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಪುಸ್ತಕ ಪ್ರಶಸ್ತಿ ಪ್ರಕಟ

Basavaraj Bommai: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Language row: ತಮಿಳಿನಿಂದಲೇ ಕನ್ನಡ ಸೇರಿ 3 ಭಾಷೆಗಳ ಉಗಮ; ತಮಿಳುನಾಡಿನ 7ನೇ ಕ್ಲಾಸ್‌ ಪುಸ್ತಕದಲ್ಲಿ ವಿವಾದಾತ್ಮಕ ಪಠ್ಯ!

ತಮಿಳಿನಿಂದಲೇ ಕನ್ನಡ ಉಗಮ; ತಮಿಳುನಾಡಿನಲ್ಲಿ ವಿವಾದಾತ್ಮಕ ಪಠ್ಯ!

Language row: ತಮಿಳುನಾಡಿನ ಪಠ್ಯ ಪುಸ್ತಕದಲ್ಲಿ ಕನ್ನಡ, ತೆಲುಗು, ಮಲಯಾಳಂಗಳ ತಾಯಿ ತಮಿಳು ಎಂದು ಉಲ್ಲೇಖಿಸಿರುವುದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮಿಳು ಪಠ್ಯದಲ್ಲಿ ಇರುವ ಈ ಅಂಶವು ಭಾರಿ ವಿವಾದಕ್ಕೆ ಕಾರಣವಾಗಿದೆ.

Actor Madenuru Manu: ಪರಪ್ಪನ ಅಗ್ರಹಾರ ಜೈಲಿನಿಂದ ನಟ ಮಡೆನೂರು ಮನು ರಿಲೀಸ್‌; ಆಡಿಯೋ ಬಗ್ಗೆ ಹೇಳಿದ್ದೇನು?

ಪರಪ್ಪನ ಅಗ್ರಹಾರ ಜೈಲಿನಿಂದ ನಟ ಮಡೆನೂರು ಮನು ರಿಲೀಸ್‌

Actor Madenuru Manu: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ಮಡೆನೂರು ಮನು, ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Mysuru News: ಮೈಸೂರಿನಲ್ಲಿ ವಿದ್ವಾನ್ ಸತ್ಯನಾರಾಯಣ ರಾಜು ನೇತೃತ್ವದಲ್ಲಿ ವರ್ಣಂ ಕಾರ್ಯಾಗಾರ ಯಶಸ್ವಿ

ಮೈಸೂರಿನಲ್ಲಿ ವಿದ್ವಾನ್ ಸತ್ಯನಾರಾಯಣ ರಾಜು ನೇತೃತ್ವದಲ್ಲಿ ವರ್ಣಂ ಕಾರ್ಯಾಗಾರ

Mysuru News: ಮೈಸೂರಿನ ವಿಜಯನಗರದ ತ್ರಿಪುರ ಪಾಠಶಾಲೆಯಲ್ಲಿ ಭೈರವಿ ನಾಟ್ಯಶಾಲೆಯ ವತಿಯಿಂದ ಆಯೋಜಿಸಿದ್ದ ವರ್ಣ ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಕಾರ್ಯಾಗಾರದಲ್ಲಿ ವಿಶ್ವಖ್ಯಾತಿಯ ಭರತನಾಟ್ಯ ವಿದ್ವಾಂಸ, ಬೆಂಗಳೂರಿನ ಸಂಸ್ಕೃತಿ-ಟೆಂಪಲ್ ಆಫ್ ಆರ್ಟ್ಸ್ ನೃತ್ಯ ಸಂಸ್ಥೆಯ ಗುರು ಸತ್ಯನಾರಾಯಣ ರಾಜು ಅವರು ಅಷ್ಟರಾಗಮಾಲಿಕ ವರ್ಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಈ ಕುರಿತ ವಿವರ ಇಲ್ಲಿದೆ.

Bengaluru Stampede: ಫೈನಲ್ ಪಂದ್ಯ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಅನುಮತಿ ಕೇಳಿದ್ದ ಆರ್‌ಸಿಬಿ!

ಫೈನಲ್ ಪಂದ್ಯ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಅನುಮತಿ ಕೇಳಿದ್ದ ಆರ್‌ಸಿಬಿ!

Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು. ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು? ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Bengaluru stampede: ಕಾಲ್ತುಳಿತ ಪ್ರಕರಣ; 2 ಸುಮೋಟೋ ಕೇಸ್‌ ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ

ಕಾಲ್ತುಳಿತ ಪ್ರಕರಣ; ಸುಮೋಟೋ ಕೇಸ್‌ ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ

Bengaluru stampede: ಮಾನವ ಹಕ್ಕುಗಳ ಆಯೋಗದಿಂದ 2 ಕೇಸ್ ದಾಖಲಿಸಿಕೊಂಡಿದ್ದೇವೆ. ಬೆಂಗಳೂರು ಪೊಲೀಸ್ ಕಮಿಷನರ್​, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಕ್ರೀಡಾಂಗಣದವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂಭಟ್ ತಿಳಿಸಿದ್ದಾರೆ.

Bengaluru Stampede: ಬೆಂಗಳೂರು ಕಾಲ್ತುಳಿತ ತನಿಖೆ ಹೊಣೆ ಹೊತ್ತ ನ್ಯಾ. ಡಿʼಕುನ್ಹಾ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು ಕಾಲ್ತುಳಿತ ತನಿಖೆ ಹೊಣೆ, ನ್ಯಾ.ಡಿʼಕುನ್ಹಾ ಆಯೋಗದ ಅವಧಿ ವಿಸ್ತರಣೆ

ಕಾಲ್ತುಳಿತ (Bengaluru Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್​ಐಆರ್ ದಾಖಲಾಗಿ ನಾಲ್ವರನ್ನು ಬಂಧಿಸಲಾಗಿದೆ. ಈ ಮಧ್ಯೆ ಜ. ಡಿʼಕುನ್ಹಾ ಆಯೋಗಕ್ಕೆ ಪ್ರಕರಣದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಹೊಣೆ ನೀಡಲಾಗಿದೆ. ಸದ್ಯ ಜಸ್ಟೀಸ್ ಮೈಕೆಲ್‌ ಡಿʼಕುನ್ಹಾ ಆಯೋಗವು ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ವಿಚಾರಣೆ ಮಾಡುತ್ತಿದೆ.

Bengaluru Stampede: ಬೆಂಗಳೂರು ಕಾಲ್ತುಳಿತ; ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

ಬೆಂಗಳೂರು ಕಾಲ್ತುಳಿತ; ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

Bengaluru Stampede: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಕಾರ್ಯದರ್ಶಿ ಶಂಕರ್ ಹಾಗೂ ಕೆಎಸ್​​ಸಿಎ ಖಜಾಂಚಿ ಜೈರಾಮ್ ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜಿನಾಮೆ (Resignation) ನೀಡಿದ್ದಾರೆ. ಪದಾಧಿಕಾರಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಶಂಕರ್, ಜೈರಾಮ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Gold Rate Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 7th June 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 1 ರೂ ಇಳಿಕೆ ಕಂಡು ಬಂದಿದ್ದು, 9,129 ರೂ.ಗೆ ತಲುಪಿತ್ತು. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 1 ರೂ. ಇಳಿಕೆಯಾಗಿ 9,959 ರೂ ಇತ್ತು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 73,032 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 91,290 ರೂ. ಮತ್ತು 100 ಗ್ರಾಂಗೆ 9,12,900 ರೂ. ನೀಡಬೇಕಾಗುತ್ತದೆ.

Murder Case: ಆನೇಕಲ್‌ನಲ್ಲಿ ಭೀಕರ ಕೃತ್ಯ, ಹೆಂಡತಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ತಂದ ಗಂಡ!

ಆನೇಕಲ್‌ನಲ್ಲಿ ಭೀಕರ ಕೃತ್ಯ, ಹೆಂಡತಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ತಂದ ಗಂಡ

Murder Case: ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಶಂಕರ್, ಪತ್ನಿಗೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿದ್ದ. ಆದರೆ ತಡರಾತ್ರಿಯೇ ಮನೆಗೆ ಬಂದಿದ್ದಾನೆ. ಈ ವೇಳೆ ಹೆಂಡತಿಯ ಕಳ್ಳಾಟ ಬಯಲಾಗಿದೆ.‌ ಆಕ್ರೋಶಗೊಂಡು ಆಕೆಯನ್ನು ಪ್ರಿಯಕರನ ಜೊತೆಯೇ ಕಳುಹಿಸಿದ್ದರೂ ಆಕೆ ಮತ್ತೆ ಬಂದು ರಗಳೆ ತೆಗೆದಿದ್ದಳು.

Self Harming: ಶಾಲೆ ಸೇರಿಸುವ ವಿಷಯಕ್ಕೆ ಪತಿಯೊಂದಿಗೆ ಜಗಳ, ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ

ಶಾಲೆ ಸೇರಿಸುವ ವಿಷಯಕ್ಕೆ ಜಗಳ, ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ

Self Harming: ಶಾಲೆಗೆ ದಾಖಲಾತಿ ಮಾಡಿಸಲು ಗುರುವಾರ ಗಂಡ, ಹೆಂಡತಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಮಕ್ಕಳ ದಾಖಲಾತಿ ಮಾಡಿಸು, ಶಾಲಾ ಶುಲ್ಕವನ್ನು ಸೋಮವಾರ ಕಟ್ಟೋಣ ಎಂದು ಹೆಂಡತಿಗೆ ಹೇಳಿ ಗಂಡ ಅಲ್ಲಿಂದ ಹೋಗಿದ್ದಾರೆ. ಪತ್ನಿ ಮರಳಿ ಬಂದು ಮಕ್ಕಳ ಜೊತೆಗೆ ಕೆರೆಗೆ ಹಾರಿದ್ದಾರೆ.

Kalladka Flyover: ಕೊನೆಗೂ ಕಲ್ಲಡ್ಕ ಫ್ಲೈಓವರ್‌ ಸಂಚಾರಕ್ಕೆ ಮುಕ್ತ ಮುಕ್ತ

ಕೊನೆಗೂ ಕಲ್ಲಡ್ಕ ಫ್ಲೈಓವರ್‌ ಸಂಚಾರಕ್ಕೆ ಮುಕ್ತ ಮುಕ್ತ

kalladka flyover: ಕಳೆದ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ 2.1 ಕಿಮೀ ಉದ್ದದ ಕಲ್ಲಡ್ಕ ಮೇಲ್ಸೇತುವೆ ಜನರ ಬಹುಬೇಡಿಕೆಯ ಸೇತುವೆ ಆಗಿತ್ತು. ಜನ ಕಲ್ಲಡ್ಕ ಫ್ಲೈ ಓವರ್ ನಿರ್ಮಾಣ ಆಗದೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಇದೀಗ ಒಂದು ಬದಿಯಿಂದ ಸಂಚಾರ ಆರಂಭವಾಗಿದೆ.

The Preamble: ಶಾಲಾ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳು ಪ್ರತಿದಿನ ಸಂವಿಧಾನದ ಪೀಠಿಕೆ ಓದುವಿಕೆ ಕಡ್ಡಾಯ

ಶಾಲಾ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದುವಿಕೆ ಕಡ್ಡಾಯ

ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಪ್ರಾರ್ಥನೆ ವೇಳೆ ಸಂವಿಧಾನದ ಪೀಠಿಕೆ (The Preamble) ಓದುವುದು ಕಡ್ಡಾಯ. ಶಾಲಾ ಕಚೇರಿಯಲ್ಲಿ ಸಂವಿಧಾನದ ಪೀಠಿಕೆಯನ್ನು ಪ್ರದರ್ಶಿಸಬೇಕು ಹಾಗೂ ಪೀಠಿಕೆ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕವಾದ ಅವಕಾಶಗಳನ್ನು ಶಾಲಾ ಕಲಿಕೆಯಲ್ಲಿ ಒದಗಿಸಲು ತಿಳಿಸಲಾಗಿದೆ.

Star Saree Fashion: ಬ್ಲ್ಯಾಕ್‌ ಡಿಸೈನರ್‌ ಸೀರೆಯಲ್ಲಿ ಥೇಟ್‌ ನಟಿ ಕಾವ್ಯಾ ಶೆಟ್ಟಿಯಂತೆ ಕಾಣಿಸಲು ಇಲ್ಲಿವೆ 5 ಟಿಪ್ಸ್!

ಸೀರೆಯಲ್ಲಿ ಥೇಟ್‌ ನಟಿ ಕಾವ್ಯಾ ಶೆಟ್ಟಿಯಂತೆ ಕಾಣಿಸಲು ಇಲ್ಲಿವೆ 5 ಟಿಪ್ಸ್!

Star Saree Fashion: ಬಹುಭಾಷಾ ತಾರೆ ಕಾವ್ಯಾ ಶೆಟ್ಟಿ ಬ್ಲ್ಯಾಕ್‌ ಡಿಸೈನರ್‌ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿದ್ದಾರೆ. ಈ ಸೀರೆಯಲ್ಲಿ ನೀವೂ ಅವರಂತೆ ಕಾಣಿಸಬೇಕೇ! ಹಾಗಾದಲ್ಲಿ ಸೀರೆ ಸ್ಟೈಲಿಸ್ಟ್‌ಗಳು ಈ ಕುರಿತಂತೆ ಒಂದೈದು ಟಿಪ್ಸ್ ನೀಡಿದ್ದಾರೆ ಫಾಲೋ ಮಾಡಿ ನೋಡಿ.

Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿ ಆರ್‌ಸಿಬಿ ಮೇಲೆ 3ನೇ ಎಫ್‌ಐಆರ್

ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿ ಆರ್‌ಸಿಬಿ ಮೇಲೆ 3ನೇ ಎಫ್‌ಐಆರ್

Bengaluru Stampede: ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಹೊಣೆಗಾರರನ್ನಾಗಿ ಮಾಡಿ ಆರ್‌ಸಿಬಿ ಮೇಲೆ ಮೂರು ಎಫ್‌ಐಆರ್‌ ದಾಖಲಾಗಿದೆ. ಆರ್​ಸಿಬಿ ಮಾರ್ಕೆಟಿಂಗ್​ ಮುಖ್ಯಸ್ಥ​​​​​​​ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರ್​ಸಿಬಿ ಮ್ಯಾನೇಜ್ಮೆಂಟ್ A-1, DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ A-2, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ A3 ಆಗಿದ್ದಾರೆ.

Tiruapati Laddu: ತಿರುಪತಿ ಲಡ್ಡು ಆನ್‌ಲೈನ್‌ನಲ್ಲಿ ಅನಧಿಕೃತ ಮಾರಾಟಕ್ಕೆ ತಡೆ

ತಿರುಪತಿ ಲಡ್ಡು ಆನ್‌ಲೈನ್‌ನಲ್ಲಿ ಅನಧಿಕೃತ ಮಾರಾಟಕ್ಕೆ ತಡೆ

Tirupati Laddu: ಭೌಗೋಳಿಕ ಸೂಚಕ ಸ್ಥಾನಮಾನ (ಜಿಐ ಟ್ಯಾಗ್) ಪಡೆದ ಉತ್ಪನ್ನಗಳು (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಅನ್ವಯ 'ತಿರುಪತಿ ಲಡ್ಡು'ವಿಗೆ ಕಾನೂನಿನ ರಕ್ಷಣೆ ದೊರೆತಿದೆ. ಟಿಟಿಡಿಯ ಮೇಲುಸ್ತುವಾರಿಯಲ್ಲಿ ತಿರುಪತಿ ಲಡ್ಡುವನ್ನು ಜಾಗರೂಕತೆಯಿಂದ ತಯಾರಿಸಲಾಗುತ್ತದೆ.

Star Fashion: ಅತ್ಯಾಕರ್ಷಕ ಬ್ರೋಕೆಡ್‌ ಸಿಲ್ಕ್‌ ಬ್ಲೇಜರ್‌ನಲ್ಲಿ ನಟಿ ಮಾನ್ವಿತಾ ಕಾಮತ್ ಕ್ಲಾಸಿಕ್‌ ಲುಕ್‌!

ಅತ್ಯಾಕರ್ಷಕ ಬ್ರೋಕೆಡ್‌ ಸಿಲ್ಕ್‌ ಬ್ಲೇಜರ್‌ನಲ್ಲಿ ನಟಿ ಮಾನ್ವಿತಾ ಕಾಮತ್

Star Fashion: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ತಮ್ಮದೇ ಆದ ಮಾನೆಕಿನ್‌ ಬ್ರಾಂಡ್‌ನ ಅತ್ಯಾಕರ್ಷಕ ಬ್ರೋಕೆಡ್‌ ಸಿಲ್ಕ್ ಬ್ಲೇಜರ್‌ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಕ್ಲಾಸಿಕ್‌ ಲುಕ್‌ ಹೇಗಿತ್ತು? ವಿಶೇಷತೆಯೇನು? ಈ ಕುರಿತಂತೆ ಖುದ್ದು ಮಾನ್ವಿತಾ ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

Madenuru Manu: ನಟ ಮಡೆನೂರು ಮನುಗೆ ಜಾಮೀನು, ಇಂದು ರಿಲೀಸ್‌

ನಟ ಮಡೆನೂರು ಮನುಗೆ ಜಾಮೀನು, ಇಂದು ರಿಲೀಸ್‌

Madenuru Manu: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಅರೆಸ್ಟ್ ಮಾಡಿದ್ದರು.

Chikkaballapur news: ಜೂ.19ಕ್ಕೆ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಜೂ.19ಕ್ಕೆ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಚಿವ ಸಂಪುಟ ಸಭೆ ಏರ್ಪಾಡಾಗಿದ್ದು ಸಭೆ ನಡೆಯುವ ಜಾಗದಲ್ಲಿ ಸಭಾ ವೇದಿಕೆಯನ್ನು ಸಿದ್ಧಪಡಿಸಬೇಕು. ಸಭೆಯ ನಂತರ ಪತ್ರಿಕಾಗೋಷ್ಠಿ ಏರ್ಪಡಿಸಲು ಕ್ರಮ ವಹಿಸಬೇಕು, ಸಭೆಯಲ್ಲಿ ಭಾಗವಹಿಸುವ ಗಣ್ಯರಿಗೆ ವ್ಯಾಸ್ತವ್ಯ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ, ಊಟ ತಿಂಡಿ ವ್ಯವಸ್ಥೆಯಾಗಬೇಕು.

Chikkaballapur News: ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ

ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ

ಯಾವುದೇ ಆದೇಶವಿಲ್ಲದಿದ್ದರೂ ತರಕಾರಿ ಮತ್ತು ಹೂವಿನ ಮಾರುಕಟ್ಟೆ ವರ್ತಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ, ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ರಾಗಿ ಮತ್ತು ತೊಗರಿ ಮಾರಾಟ ಕೇಂದ್ರ ದೊಡ್ಡ ಜಾನುವಾರಗಳ ಸಂತೆ, ಹಾಗೂ ವಾರದ ಸಂತೆಯನ್ನು ಪ್ರಾರಂಭ ಮಾಡ ಬೇಕು ಹಾಗೂ ರೈತರ ಜ್ವಲಂತ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು