Friday, 26th July 2024

ಆಸಿಡ್‌ ಸಂತ್ರಸ್ಥೆ ದೇಹಸ್ಥಿತಿ ಸ್ಥಿರ: ಆರೋಪಿಗಾಗಿ ತೀವ್ರ ಶೋಧ..!

ಬೆಂಗಳೂರು: ಸುಂಕದಕಟ್ಟೆ ಬಳಿ ಯುವತಿ ಮೇಲೆ ನಾಗೇಶ್ ಎಂಬಾತ ಪೈಶಾಚಿಕ ಕೃತ್ಯ ಎಸಗಿ ಆಸಿಡ್ ಎರಚಿ ಪರಾರಿಯಾಗಿ ಎರಡು ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಸೈಂಟ್ ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಯುವತಿ ದೇಹಸ್ಥಿತಿ ಸ್ಥಿರವಾಗಿದೆ.

ಆರೋಪಿ ನಾಗೇಶ್ ಗಾಗಿ ಮೂರು ತಂಡಗಳನ್ನು ರಚಿಸಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಶನಿವಾರ ಸಂಜೆಯೊಳಗೆ ಆರೋಪಿಯನ್ನು ಪತ್ತೆ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದರು. ಆದರೆ ಇನ್ನೂ ಆರೋಪಿ ಪತ್ತೆ ಯಾಗಿಲ್ಲ.

 

ಕಳೆದ ಹಲವು ವರ್ಷಗಳಿಂದ ಮದುವೆಯಾಗುವಂತೆ ಯುವತಿ ಪೀಡಿಸುತ್ತಿದ್ದ ನಾಗೇಶ್ ನ ಪ್ರೀತಿಯನ್ನು ನಿರಾಕರಿಸಿದ ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ.

error: Content is protected !!