Saturday, 27th July 2024

ಲಾಕ್‌ಡೌನ್ ಬಗ್ಗೆ ವದಂತಿ ಹಬ್ಬಿಸಿದರೆ ಸೂಕ್ತ ಕ್ರಮ: ಡಾ.ಕೆ.ಸುಧಾಕರ್ ಎಚ್ಚರಿಕೆ

K Sudhakar

ಬೆಂಗಳೂರು: ಲಾಕ್‌ಡೌನ್ ಬಗ್ಗೆ ವದಂತಿ, ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ಈ ಕುರಿತಂತೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದು ಕಂಡುಬಂದರೆ ಅಂತವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಮುಂದೆ ಯಾವುದೇ ರೀತಿಯ ಲಾಕ್‌ಡೌನ್ ಪ್ರಸ್ತಾವನೆಯಿಲ್ಲ. ರಾಜ್ಯದಲ್ಲಿ ಹೊಸ ಮಾದರಿಯ ಸೋಂಕು ಪತ್ತೆಯಾ ಗಿಲ್ಲ. ವೇಗವಾಗಿ ಹರಡಿದರೂ ಪರಿಣಾಮ ಕಡಿಮೆ ಅಂತ ಸುಧಾಕರ್ ತಿಳಿಸಿದ್ದಾರೆ. ವಾಂತಿ, ನೆಗಡಿ, ಜ್ವರ, ಸುಸ್ತು ಕಂಡುಬರುತ್ತೆ. ಡೆಲ್ಟಾ ರೀತಿ ವಾಸನೆ ಕಳೆದುಕೊಳ್ಳುವ ಲಕ್ಷಣ ಇಲ್ಲ. ಇದು ಭೀಕರ ಅಲ್ಲ ಎಂದು ಸಚಿವರು ಹೇಳಿದ್ದಾರೆ.

error: Content is protected !!