Saturday, 27th July 2024

ಕೇರಳದ ಮೂವರು ವಿದ್ಯಾರ್ಥಿಗಳು ನೀರು ಪಾಲು

ಉಡುಪಿ: ಗುರುವಾರ ಮಲ್ಪೆಯ ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ಕೇರಳದ ಕೊಟ್ಟಾಯಂನಿಂದ ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ.

ಅಲನ್‌ ರೆಜಿ (22), ಅಮಲ್ ಸಿ.ಅನಿಲ್ (22), ಅಂಥೋನಿ ಶೆಣೈ (21) ನೀರು ಪಾಲಾದವರು. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಅಂಥೋಣಿಗಾಗಿ ಶೋಧ ನಡೆದಿದೆ ಎಂದು ಮಲ್ಪೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಟ್ಟಾಯಂನ ಮಂಗಳ ಎಂಜಿನಿಯರಿಂಗ್ ಕಾಲೇಜಿನಿಂದ 42 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರು ಪ್ರವಾಸಕ್ಕೆ ಬಂದಿದ್ದರು. 

error: Content is protected !!