ಅಪರ್ಣಾ ಎ.ಎಸ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಕ್ಕೆ ದಂಡಾಸ್ತ್ರ
ಪಿಕ್ಅಪ್-ಡ್ರಾಪ್ ಪಾಯಿಂಟ್ ಬಳಿ ಅನವಶ್ಯವಾಗಿ ವಾಹನ ನಿಲ್ಲಿಸುವಂತಿಲ್ಲ
೧೫ ನಿಮಿಷ ಮೀರಿದರೆ ವಾಹನ ವಶ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವುದು ಒಂದು ಭಾಗವಾದರೆ, ಅಲ್ಲಿಂದ ಕ್ಯಾಬ್ ಅಥವಾ ವಾಹನಗಳಲ್ಲಿ ಹೊರಬರುವುದು ಮತ್ತೊಂದು ಸವಾಲು ಎನ್ನುವ ಮಾತುಗಳು ಸಾಮಾನ್ಯ ವಾಗಿ ಕೇಳಿಬರುತ್ತಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಪ್ರಾಧಿಕಾರ ಇದೀಗ ‘ದಂಡಾಸ್ತ್ರ’ಕ್ಕೆ ಮುಂದಾಗಿದೆ.
ಪ್ರತಿ ಗಂಟೆಗೆ ಹತ್ತಾರು ವಿಮಾನಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸು ತ್ತವೆ ಹಾಗೂ ನಿರ್ಗಮಿಸುತ್ತವೆ. ಈ ಎಲ್ಲ ವಿಮಾನಗಳ ಪ್ರಯಾಣಿಕರ ಪಿಕ್ಅಪ್ ಹಾಗೂ ಡ್ರಾಪ್ ಮಾಡಲು ಆಗಮಿಸುವ ವಾಹನಗಳಿಂದ ಟರ್ಮಿನಲ್ ೧, ೨ ಬಳಿ ದಿನದಿಂದ ದಿನಕ್ಕೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅದರಲ್ಲಿಯೂ ಅನೇಕ ಕ್ಯಾಬ್ ಹಾಗೂ ವಾಹನ ಸವಾರರು ಗಂಟೆಗಟ್ಟಲೇ ಪ್ರವೇಶ ಹಾಗೂ ನಿರ್ಗಮನ ದ್ವಾರದ ಬಳಿ ನಿಲ್ಲುತ್ತಿರುವುದು ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ, ಐದು ನಿಮಿಷಕ್ಕಿಂತ ಹೆಚ್ಚು ಅವಧಿ ನಿಲ್ಲಿಸಿದರೆ ದಂಡ ಹಾಕಲು ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಆಡಳಿತ ಮಂಡಳಿ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿಯೇ ನಿಯಮ ಜಾರಿ ಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಟರ್ಮಿನಲ್ ೧ ಮತ್ತು ೨ ರ ಬಳಿಯಲ್ಲಿ ಪ್ರಯಾಣಿ ಕರನ್ನು ಪಿಕ್ ಅಪ್ ಹಾಗೂ ಡ್ರಾಪ್ ಮಾಡಲು ಬರುವ ವಾಹನಗಳಿಂದ ಸಿಬ್ಬಂದಿ ಸೇರಿದಂತೆ ಇತರ ಪ್ರಯಾಣಿಕರಿಗೆ ಸಮಸ್ಯೆಯುಂಟಾಗುತ್ತಿದ್ದು, ಕ್ಯಾಬ್ ಹಾಗೂ ಜನರ ಸ್ವಂತ ವಾಹನದಿಂದಾಗಿ ಭಾರಿ ದಟ್ಟಣೆಯುಂಟಾಗುತ್ತಿರುವುದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಂಪಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಂಡ ಪ್ರಯೋಗಕ್ಕೆ ಮುಂದಾಗಿದೆ.
೫ ನಿಮಿಷಕ್ಕಿಂತ ಹೆಚ್ಚುಕಾಲ ನಿಂತರೆ ದಂಡ: ಟರ್ಮಿನಲ್ನ ಪ್ರವೇಶ, ನಿರ್ಗಮನದ ಬಳಿ ಪ್ರಯಾಣಿಕರನ್ನು ಕರೆದುಕೊಂಡು ಬರಲು ವಾಹನಗಳಿಗೆ
ಅವಕಾಶವಿದೆ. ಆದರೆ ಪಿಕ್ ಅಪ್, ಡ್ರಾಪ್ಮಾಡಲು ಬರುವ ಅನೇಕ ಕ್ಯಾಬ್ಗಳು ತಮ್ಮ ಪ್ರಯಾಣಿಕರು ಬರುವ ಮೊದಲೇ, ಸ್ಥಳದಲ್ಲಿರುತ್ತಾರೆ.
ಇದರಿಂದ ಇತರರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ನಿಯಂತ್ರಿಸಲೆಂದೇ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಪಿಕ್ಅಪ್ ಪಾಯಿಂಟ್ ಬಳಿ ನಿಂತರೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಪ್ರತಿವಾಹನಕ್ಕೆ ಲೇನ್ಗಳಲ್ಲಿ ನಿಲ್ಲಲು ಐದು ನಿಮಿಷಗಳ ಕಾಲಾವಕಾಶವಿರಲಿದ್ದು, ಈ ಅವಧಿ ಮೀರಿದರೆ ಅಂತಹವರಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಐದರಿಂದ ೧೦ ನಿಮಿಷಗಳ ನಿಲ್ಲಿಸಿದರೆ, ೧೫೦ ರು. ದಂಡ ವಿಧಿಸಲಾಗುತ್ತದೆ. ೧೦-೧೫ ನಿಮಿಷಗಳ ಕಾಲ ನಿಲ್ಲಿಸಿದರೆ ೩೦೦ ರು. ದಂಡ ವಿಧಿಸಲಾಗುವುದು
೧೪ ನಿಮಿಷಗಳಿಗಿಂತಲೂ ಹೆಚ್ಚುವರಿ ಸಮಯ ನಿಲುಗಡೆ ಮಾಡಿದರೆ ಅಂತಹ ವಾಹನಗಳ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರ ಭದ್ರತೆಗಾಗಿ ಈ ಕ್ರಮ
ವಿಮಾನ ನಿಲ್ದಾಣ ಪ್ರವೇಶಿಸುವ ಎ ಪ್ರಯಾಣಿಕರಿಗೆ ಸುರಕ್ಷತೆ, ಭದ್ರತೆ, ಅನುಕೂಲ ಹಾಗೂ ತಡೆರಹಿತ ಅನುಭವ ನೀಡುವ ಉದ್ದೇಶದಿಂದ ಈ ಉಪಕ್ರಮ ವನ್ನು ಜಾರಿಗೆ ತರಲಾಗಿದೆ. ಎಲ್ಲರಿಗೂ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾದ ವಿಮಾನ ನಿಲ್ದಾಣದ ವಾತಾವರಣವನ್ನು ಸೃಷ್ಟಿಸುವ ಉದ್ದೇಶ ವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಲೇನ್ಗಳಲ್ಲಿ
ವಾಹನಗಳನ್ನು ನಿಲ್ಲಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ೯೦ ಸೆಕೆಂಡ್ಗಳ ಅವಕಾಶವಿರುತ್ತದೆ. ಆದರೆ ಸ್ಥಳೀಯ ಮನಸ್ಥಿತಿಯನ್ನು ಗಮನಿಸಿ, ಇದನ್ನು ಐದು ನಿಮಿಷಕ್ಕೆ ನಿಗದಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.