ಬಂಟ್ವಾಳ : ತಾಲೂಕಿನ ಬಿ.ಸಿ.ರಸ್ತೆಯಲ್ಲಿರುವ ತುಳು ಚಿತ್ರನಟ ಸುದೀಂದ್ರ ಅವರ ಫ್ಲಾಟ್ ನಲ್ಲಿಯೇ ನಟನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
2018ರ ಪ್ರಕರಣವೊಂದರಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದಂತ ತುಳು ಚಿತ್ರನಟರನ್ನು, ಅಪರಿಚಿತರು ಬರ್ಬರ ವಾಗಿ ಹತ್ಯೆ ಗೈದಿದ್ದಾರೆ.
ಬಂಟ್ವಾಳ ತಾಲೂಕಿನ ಅವರ ಫ್ಲಾಟ್ ನಲ್ಲಿಯೇ ಅಪರಿಚಿತರು ಕಳೆದ ರಾತ್ರಿಯೇ ಹತ್ಯೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪ್ರಕರಣ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.