Friday, 20th September 2024

Tabla: ತಬಲ ವಿದ್ವಾಂಸ ನಿಧನ

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮೃದಂಗ ಹಾಗೂ ತಬಲ ವಿದ್ವಾಂಸ ಅಂಜನಕುಮಾರ್ (62) (Anjankumar) ನಗರದ ರಾಘವೇಂದ್ರನಗರದಲ್ಲಿರುವ ನಿವಾಸದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃದಂಗ ಹಾಗೂ ತಬಲ ವಿದ್ವಾಂಸರಾಗಿದ್ದ ಅಂಜನಕುಮಾರ್, ರಾಜ್ಯಾದ್ಯಂತ ವಿವಿಧ ಮಠಮಾನ್ಯಗಳು, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದರು. ಜಿಲ್ಲೆಯ ಎಲ್ಲಾ ಕಲಾವಿದ ರುಗಳು, ವಿವಿಧ ಮಠಾಧೀಶರು ಸೇರಿದಂತೆ ಜನಪ್ರತಿನಿಧಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ  ವೀರೇಶಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್ ಸೇರಿದಂತೆ ಕಲಾವಿದರುಗಳು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. 

ಮೃತರ ಅಂತ್ಯಕ್ರಿಯೆಯು ನಗರದ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನೆರವೇರಿತು.

ಇದನ್ನೂ ಓದಿ: Tumkur News: ದೊರೆಯದ ಆಂಬ್ಯುಲೆನ್ಸ್, ಬೈಕ್‌ನಲ್ಲಿ ಮಕ್ಕಳ ನಡುವೆ ಬಂತು ತಂದೆಯ ಶವ!