Thursday, 19th September 2024

ಪೀಣ್ಯ ವಿದ್ಯುತ್ ಚಿತಾಗಾರ: ಜ.೩೦ರಿಂದ ಏ.೧೫ರವರೆಗೆ ಸ್ಥಗಿತ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಪೀಣ್ಯ ವಿದ್ಯುತ್ ಚಿತಾಗಾರದಲ್ಲಿ ಉನ್ನತೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜ.೩೦ರಿಂದ ಏ.೧೫ರವರೆಗೂ ಸಾರ್ವಜನಿಕ ಬಳಕೆಗೆ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪೀಣ್ಯ ವಿದ್ಯುತ್ ಚಿತಾಗಾರದಲ್ಲಿರುವ ಹಾರಿಜಂಟಲ್ ಕಾಯಿಲ್ ಮೌಂಟಿಂಗ್ ವಿನ್ಯಾಸವನ್ನು ವರ್ಟಿಕಲ್ ಕಾಯಿಲ್ ಮೌಂಟಿಂಗ್ ವಿನ್ಯಾಸಕ್ಕೆ ಬದಲಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ, ಈ ೭೫ ದಿನಗಳ ಕಾಲ ಸಾರ್ವಜನಿಕರು ಮೃತ ದೇಹಗಳನ್ನು ಹತ್ತಿರದ ಮೇಡಿ ಅಗ್ರಹಾರ ಅಥವಾ ಸುಮನಹಳ್ಳಿ ವಿದ್ಯುತ್ ಚಿತಾಗಾರಗಳಿಗೆ ಕೊಂಡೊಯ್ಯುವಂತೆ ರಾಜರಾಜೇಶ್ವರಿ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಮನವಿ ಮಾಡಿದ್ದಾರೆ.