Thursday, 19th September 2024

ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಅರ್ಜಿ ವಜಾ

ವದೆಹಲಿ: ಸಂಸ್ಕೃತವನ್ನು ದೇಶದ ರಾಷ್ಟ್ರೀಯ ಭಾಷೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ವೀಕರಿ ಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದು ಸಂಸತ್ತಿನ ಕೆಲಸ, ನ್ಯಾಯಾಲಯವು ಅಂತಹ ಬೇಡಿಕೆಯನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ಅರ್ಜಿಯಲ್ಲಿ ಎತ್ತಲಾದ ವಿಷಯವನ್ನು ಪರಿಗಣಿ ಸಲು ಸಂಸತ್ತು ಮತ್ತು ನ್ಯಾಯಾಲಯವಲ್ಲ ಎಂದು ಹೇಳಿದೆ. ಪ್ರಚಾರಕ್ಕಾಗಿ ನಾವು ಏಕೆ ನೋಟಿಸ್ ಗಳನ್ನು ಹೊರಡಿಸಬೇಕು ಅಥವಾ ಘೋಷಣೆಗಳನ್ನು ಮಾಡಬೇಕು? ನಿಮ್ಮ ಕೆಲವು ಅಭಿಪ್ರಾಯಗಳನ್ನು ನಾವು ಹಂಚಿಕೊಳ್ಳಬಹುದು ಆದರೆ ಅದನ್ನು ಚರ್ಚಿಸಲು ಸಂಸತ್ತು ಸರಿಯಾದ ವೇದಿಕೆಯಾಗಿದೆ. ಇದಕ್ಕಾಗಿ, ಸಂವಿಧಾನವನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಇದು ನಾವು ಬದಲಾಯಿಸಲು ಸಾಧ್ಯವಿಲ್ಲದ ನೀತಿಯ ವಿಷಯವಾಗಿದೆ. ನಾವು ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸುತ್ತೇವೆ ಅಂತ ಹೇಳಿದೆ.

ನಿವೃತ್ತ ಐಎಎಸ್ ಅಧಿಕಾರಿ ಮತ್ತು ವಕೀಲ ಕೆ.ಜಿ.ವಂಜಾರಾ ಅವರು ಪಿಐಎಲ್ ಸಲ್ಲಿಸಿದ್ದರು. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಅಧಿಸೂಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು.