ಗಿರೀಶ್ ಭಾರದ್ವಾಜರ ‘ಎಂಜಿನಿಯರಿಂಗ್’ ನಮಗೇಕೆ ಸಿದ್ಧಿಸದು ?
ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಗಳ ಅತ್ಯಂತ ಕ್ಲಿಷ್ಟ ಪ್ರಾಜೆಕ್ಟ್ಗಳನ್ನು ಸಲೀಸಾಗಿ ಮಾಡಿ ಕೊಡುವ ನಮ್ಮ ಎಂಜಿನಿಯರ್ ಪ್ರತಿಭೆಗಳು, ನೆಲ ಮೂಲದ ಸಮಸ್ಯೆಗಳಿಗೂ ಇಷ್ಟೇ ಸುಲಭದ ಪರಿಹಾರವನ್ನು ಹುಡುಕಿಕೊಟ್ಟರೆ ನಮ್ಮ ದೇಶ ಪ್ರಗತಿ ಪಥ ಹೇಗಿರಬಹುದು ಯೋಚಿಸಿ. ನೆಲ ಮೂಲದ ಸಮಸ್ಯೆಗಳ ಅರಿವಿದ್ದವರಿಗೆ ಸಂಶೋಧನೆಯ ಅಗತ್ಯ ಗೊತ್ತಿರುತ್ತದೆ. ದುರದೃಷ್ಟವಶಾತ್, ನಮ್ಮ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಿಗೆ ಸೇರಿಕೊಂಡ ಬಳಿಕ ತಜ್ಞರೆನಿಸಿಕೊಂಡವರಿಗೆ ವೇತನ, ಬಡ್ತಿ, ಭತ್ಯೆಯೇ ಮುಖ್ಯವಾಗುತ್ತದೆ ಹೊರತು ಸಂಶೋಧನೆ ಅಲ್ಲ.