Saturday, 5th October 2024

BBK 11: ಈ ಶೋ ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ: ಲಾಯರ್ ಜಗದೀಶ್ ಮೈಚಳಿ ಬಿಡಿಸಿದ ಸುದೀಪ್

Jagadish and Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada) ಇಂಟ್ರೆಸ್ಟಿಂಗ್ ಸ್ಪರ್ಧಿ ಲಾಯರ್ ಜಗದೀಶ್ ಮೊದಲ ವಾರ ವಿವಾದದ ಮಾತು, ಜಗಳಗಳಿಂದಲೇ ಸುದ್ದಿಯಾದರು. ಎಷ್ಟರ ಮಟ್ಟಿಗೆ ಎಂದರೇ ಸ್ವತಃ ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದರು. ನಿಮ್ಮ ಶೋ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಜಗದೀಶ್ ಅಲ್ಲ ಎಂದಿದ್ದರು. ಬಳಿಕ ಈ ವಿಚಾರಕ್ಕೆ ಕ್ಷಮೆ ಕೇಳಿದ್ದರಾದರು, ವೀಕೆಂಡ್​ನಲ್ಲಿ ಸುದೀಪ್ (Sudeep) ಇವರಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎನ್ನಲಾಗಿತ್ತು. ಅದರಂತೆ ಜಗದೀಶ್ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಗದೀಶ್ ಏನು ಹೇಳಿದ್ದರು?:

ವಾರದ ಮಧ್ಯೆ ಜಗದೀಶ್ ಅವರು ಬಿಗ್ ಬಾಸ್ ಬಗ್ಗೆ ಅಹಂಕರಾದ ಮಾತನಾಡಿದ್ದರು. ‘ನಾನು ಆಚೆ ಹೋದ ನಂತ್ರ ಈ ಬಾಗ್ ಬಾಸ್ ಅನ್ನು ಮಾನ್ಯುಪ್ಯುಲೆಟ್ ಮಾಡಿಲ್ಲ ನನ್ನ ಹೆಸರು ಜಗದೀಶ್ ಅಲ್ಲ. ಬಿಗ್ ಬಾಸ್ ನಾನು ನಿಮ್ಮ ಬಗ್ಗೆ ಎಲ್ಲ ಮಾಹಿತಿ ಹೊರಹಾಕ್ತೇನೆ. ಪ್ರೊಗ್ರಾಂ ನಡೆಸ್ಬೇಕಲ್ಲ ಕೌಂಟ್ ಇಟ್. ನಾನು ಬಿಗ್ ಬಾಸ್ ಏನು ಅಂತ ಆಚೆಕಡೆ ತೋರಿಸ್ತೇನೆ. ನಾನು ಗಂಜಿ-ಗಿಂಜಿ ಎಲ್ಲ ಕುಡಿಯಲ್ಲ. ನಿಮ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ. ನಾನು ಈ ಪ್ರೊಗ್ರಾಂ ಅನ್ನು ಡೆಸ್ಟ್ರಾಯ್ ಮಾಡ್ತೇನೆ. ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರೆ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಪ್ರಶ್ನೆಸಿದ್ದರು.

ಶನಿವಾರ ನಡೆಯಲಿರುವ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್ ಅವರು ಜಗದೀಶ್​ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ನಂಬಲಾಗಿತ್ತು. ಅದರಂತೆ ಇದೀಗ ಕಿಚ್ಚ ಲಾಯರ್​ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸುದೀಪ್ ಅವರು ಜಗದೀಶ್ ಬಳಿ ‘ನೀವು ಹೇಳಿ ನನ್ಗೆ ಶೋ ಹೇಗೆ ನಡೆಸಿಕೊಳ್ಳಬೇಕು’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಜಗದೀಶ್ ‘ನಿಮ್ಮದು ಕರೆಕ್ಟ್ ಆಗಿದೆ ಸರ್, ನಿಮ್ಮದೇನು ತಪ್ಪಿಲ್ಲ’ ಎಂದಿದ್ದಾರೆ.

ಇಲ್ಲಿಗೆ ನಿಲ್ಲಿಸದ ಸುದೀಪ್ ‘ಶೋ ಕಡಾಖಂಡಿತವಾಗಿ ಕರೆಕ್ಟ್ ಆಗಿಯೇ ಇದೆ, ಇಲ್ಲಂದ್ರೆ 11ನೇ ಸೀಸನ್ ದಾಟುತ್ತನೇ ಇರಲಿಲ್ಲ. ಕ್ಯಾಮೆರಾ ಮುಂದೆ ಬಿಗ್ ಬಾಸ್​ಗೆ ಚಾಲೆಂಜ್ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ, ಅದೊಂದು ಜೋಕ್. ಬಿಗ್ ಬಾಸ್ ಎನ್ನುವುದು ಒಂದು ಅದ್ಭುತವಾದ ಶೋ. ಈ ಶೋ ಅನ್ನು ಇಂಪ್ರೂವ್ ಮಾಡುವಂತ ಸಾಧ್ಯತೆ ಈಗ ಇರೋ ನಿಮ್ಮ ಕೈಯಲ್ಲಿದೆ. ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ’ ಎಂದು ಸುದೀಪ್ ಅವರು ಖಡಕ್ ಆಗಿ ಹೇಳಿದ್ದಾರೆ.

Bigg Boss: ಈ ಬಾರಿಯ ಬಿಗ್ ಬಾಸ್​ ಜೈಲಿನಲ್ಲಿ ಫೋನ್ ಸೌಲಭ್ಯ: ಹೊರಬಿತ್ತು ಶಾಕಿಂಗ್ ವಿಚಾರ