Sunday, 8th September 2024

ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಫೆ.17ರಂದು ತೀರ್ಪು

ನವದೆಹಲಿ: ಮಾಜಿ ಕೇಂದ್ರ ಸಚಿವ, ಪತ್ರಕರ್ತ ಎಂಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನವದೆಹಲಿ ಕೋರ್ಟ್ ಫೆ.17 ಕ್ಕೆ ಮುಂದೂಡಿದೆ.

2018 ರಲ್ಲಿ ಪ್ರಿಯಾ ರಮಣಿ #MeToo ಅಭಿಯಾನದ ವೇದಿಕೆ ಮೂಲಕ ಹಿಂದೊಮ್ಮೆ ಆಗಿದ್ದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿ, ಎಂಜೆ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಜೆ ಅಕ್ಬರ್ 2018 ರ ಅಕ್ಟೋಬರ್ 15 ರಂದು ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಅ.17 ರಂದು ಕೇಂದ್ರ ಸಚಿವ ಸ್ಥಾನಕ್ಕೆ ಎಂಜೆ ಅಕ್ಬರ್ ರಾಜೀನಾಮೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!