Sunday, 8th September 2024

ಭೀಕರ ರಸ್ತೆ ಅಪಘಾತದಲ್ಲಿ ನವಜೋಡಿ ಸಾವು

ತಿರುವಳ್ಳೂರು: ವಿವಾಹವಾಗಿ ವಾರವೂ ಕಳೆದಿರಲಿಲ್ಲ. ನವಜೋಡಿ ತಮಿಳು ನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಟ್ಟಿದ್ದಾರೆ.

ಅರಕ್ಕೊಣಮ್​ ಮೂಲದ ಮನೋಜ್​ ಕುಮಾರ್​ (31) ಮತ್ತು ಪೆರುಗಲಥೂರ್​ ಮೂಲದ ಕಾರ್ತಿಕಾ (30) ಮೃತ ದಂಪತಿ. ಕಾಂಕ್ರಿಟ್​ ಮಿಕ್ಸರ್​ ಲಾರಿ ಕಾರಿನ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.

ಮನೋಜ್​ ಕುಮಾರ್​ ಅವರು ಮೆಡಿಕಲ್​ ರೆಪ್​ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕಾ ಖಾಸಗಿ ಕ್ಲೀನಿಕ್​ ಒಂದರಲ್ಲಿ ವೈದ್ಯೆ ಆಗಿದ್ದರು. ಅಕ್ಟೋಬರ್​ 28ರಂದು ಇಬ್ಬರು ಮದುವೆ ಆಗಿದ್ದರು. ಕಾರ್ತಿಕಾ ಮನೆಗೆ ಹೋಗಿ ಅರಕ್ಕೊಣಮ್​ಗೆ ಹಿಂದಿರುಗುತ್ತಿದ್ದರು.

ಪೂನಮೆಲೀ-ಅರಕ್ಕೊಣಮ್​ ಹೆದ್ದಾರಿ ನಡುವಿನ ಕಡಂಬಥೂರ್​ ಸಮೀಪ ಅಪಘಾತ ಸಂಭವಿಸಿದೆ. ಕಾಂಕ್ರಿಟ್​ ಮಿಕ್ಸರ್​ ಲಾರಿ ತಿರುವ ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ​ ಕಾರಿನ ಮೇಲೆ ಬಿದ್ದಿದೆ.

ಮಿಕ್ಸರ್​ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆ ನಡೆದ ಎರಡು ಗಂಟೆಯ ನಂತರ ಮಿಕ್ಸರ್​ ಲಾರಿ ಯನ್ನು ತೆರವುಗೊಳಿಸಲಾಯಿತು. ಅಷ್ಟರಲ್ಲಾಗಲೇ ದಂಪತಿ ಮೃತಪಟ್ಟಿದ್ದರು. ಮೃತದೇಹಗಳನ್ನು ವಶಕ್ಕೆ ಪಡೆದ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆಯ ಬೆನ್ನಲ್ಲೇ ಮಿಕ್ಸರ್​ ಲಾರಿ ಡ್ರೈವರ್​ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಬಲೆ ಬೀಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!